27th July 2024
Share

TUMAKURU:SHAKTHIPEETA FOUNDATION

ಭಾರತದ ಯುವ ಜನಾಂಗದ ಜೊತೆಗೆ, ಇಡೀ ವಿಶ್ವದಲ್ಲಿರುವ ಭಾತರದ ಯುವ ಜನಾಂಗ ಮೋದಿ, ಮೋದಿ, ಮೋದಿ ಎಂದು ಕೂಗುತ್ತಾ ಕುಣಿದು ಕುಪ್ಪಳಿಸುತ್ತಿದ್ದರು.

 ಅದೇ ಮೋದಿಯವರು ಇಂದು ಮಾಡಿರುವ ತಾರತಮ್ಯ ನೋಡಿ ಎಗರಿ, ಎಗರಿ ಬೀಳುತ್ತಿದ್ದಾರೆ, ಇನ್ನೂ ಎನಾದರೂ ಮಾಡುತ್ತಾರೋ ಎಂದು ತಾಳ್ಮೆಯಿಂದ ಕಾಯುತ್ತಲೂ ಇದ್ದಾರೆ.

ಗುಜಾರತ್ ರಾಜ್ಯದ ಯುವಜನಾಂಗಕ್ಕೆ 161000 ಜನರಿಗೆ ಲಸಿಕೆ ಕೊಟ್ಟಿದ್ದರೆ, ಕರ್ನಾಟಕದ ಯವಜನಾಂಗಕ್ಕೆ ಕೇವಲ 3475 ಜನರಿಗೆ ಮಾತ್ರ ಲಸಿಕೆ ನೀಡಿದ್ದಾರೆ.

 ಇದರಲ್ಲೂ ತಾರತಮ್ಯ ಏಕೆ ಬೇಕಿತ್ತು, ಇಡೀ ದೇಶದ ಎಲ್ಲಾ ರಾಜ್ಯಗಳಿಗೂ ಸಮಾನಾಗಿ ಹಂಚಿದ್ದರೆ ಸಾಮಾಜಿಕ ನ್ಯಾಯ ದೊರುಕುತ್ತಿರಲಿಲ್ಲವೇ ಮೋದಿ ಎನ್ನುತ್ತಿದ್ದಾರೆ.

ರಾಷ್ಟ್ರೀಯ ಯುವ ಬಿಜೆಪಿ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯರವರೇ ಇದು ಮೋಸವಲ್ಲವೇ? ಇದನ್ನು ಮೋದಿಯವರು ಮಾಡಿರಿಲಕ್ಕಿಲ್ಲ ಎಂದರೂ ಮಾಡಿರುವವರ ವಿರುದ್ಧ ದ್ವನಿ ಏಕೆ ಎತ್ತಿಲ್ಲ.

ನಿಮ್ಮ ಪಕ್ಷದ ಸರ್ಕಾರ ಇದ್ದರೂ ಕರ್ನಾಟಕದಲ್ಲಿ ನೀವು ಬೆಡ್ ದಂದೆ ಬಯಲಿಗೆ ಎಳೆದಿರುವುದು ಬೇಷ್‍ಗಿರಿ.

ಅದೇ ದೇಶದಲ್ಲಿ ನಿಮ್ಮ ಪಕ್ಷದ ಸರ್ಕಾರ ಇದ್ದೂ ಯುಜನಾಂಗಕ್ಕೆ ತಾರತಮ್ಯವಾಗಿದ್ದರೂ ಏಕೆ ಉಸಿರು ಬಿಟ್ಟಿಲ್ಲ ಎಂಬ ಮಾತು ನಿಮ್ಮ ಗಮನಕ್ಕೆ ಬಂದಿಲ್ಲವೇ?

ಇದು ಟೀ ಇಂಡಿಯಾನ ಉತ್ತರಿಸಿ ತೇಜಸ್ವಿ ಸೂರ್ಯರವರೇ,