26th July 2024
Share

TUMAKURU:SHAKTHIPEETA FOUNDATION

  77 ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಭಾರತ 2047 ಕ್ಕೆ ವಿಶ್ವಗುರು’ ಎಂದು ಘೋಷಣೆ ಮಾಡಿದ್ದಾರೆ. ಅದೇ ರೀತಿ ನಮ್ಮ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಏಷ್ಯಾದಲ್ಲೇ ರಾಜ್ಯ ನಂ.1 ಗುರಿ ಎಂದು ಘೋಷಣೆ ಮಾಡಿದ್ದಾರೆ.’

ದಿನಾಂಕ:16.08.2023 ರ ವಿಜಯವಾಣಿ ಮುಖಪುಟದ ಲೀಡ್ ನ್ಯೂಸ್. ನಮ್ಮ ಶಕ್ತಿಪೀಠ ಫೌಂಡೇಷನ್ 5 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ದಿನದ ನ್ಯೂಸ್ ಇದಾಗಿದೆ. ಸರ್ಕಾರ ಯಾವುದೇ ಪಕ್ಷದ್ದಾಗಿರಲಿ ನಮ್ಮ ಪ್ರಧಾನಿಯವರ ಮತ್ತು ಮುಖ್ಯಂಂತ್ರಿಯವರ ಘೋಷಣೆ ಎಂದರೆ ಎಲ್ಲರೂ ಒಪ್ಪಲೇ ಬೇಕು.

ಇಂದಿನಿಂದ 2047 ರವರೆಗೂ ಪ್ರತಿ ಯೋಜನೆಗಳ ವಿಶ್ಲೇಷಣೆ, 1947 ರಿಂದ 2023 ರವರೆಗೂ ಜಾರಿಯಾದ ಯೋಜನೆಗಳ ಅವಲೋಕನ ನಮ್ಮ ನಿಮ್ಮ ಗುರಿಯಾಗಬೇಕು. ನಿಷ್ಪಕ್ಷಪಾತವಾಗಿ, ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ರಾಜಕೀಯ ರಹಿತವಾಗಿ ಸರಿ ಎಂಬ ಯೋಜನೆಗಳನ್ನು ಸರಿ ಎನ್ನೋಣ, ತಪ್ಪು ಎಂದರೆ ತಪ್ಪು ಎನ್ನೋಣ ಯೋಜನಾವಾರು  ಅಂಥವರ ತಂಡವೇ ನಮ್ಮ ‘ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್’ ಗುರಿಯಾಗಿದೆ.

ನಾಲೇಡ್ಜ್ ಬ್ಯಾಂಕ್ 2047 ರಲ್ಲಿ ಉಚಿತವಾಗಿ ನೊಂದಾಯಿಸಿಕೊಳ್ಳಿ, ತಮ್ಮೊಂದಿಗೆ ಯೂ ಟ್ಯೂಬ್ ಚಾನಲ್‍ನಲ್ಲಿ ಮುಕ್ತ ಚರ್ಚೆ, ದಾಖಲೆಗಳ ಡಿಜಿಟಲೀಕರಣ, ಫಿಸಿಕಲ್ ದಾಖಲೆ ಸಂಗ್ರಹವೇ ಅಭಿವೃದ್ಧಿ ಮ್ಯೂಸಿಯಂ ನ ಪ್ರಮುಖ ಉದ್ದೇಶವಾಗಿದೆ.

9886774477 ಕ್ಕೆ  ವಾಟ್ಸಪ್ ಮಾಡಿ.