25th July 2024
Share

TUMAKURU:SHAKTHI PEETA FOUNDATATION

 ಶಕ್ತಿಭವನ ದಲ್ಲಿ ನಾಲೇಡ್ಜ್ ಬ್ಯಾಂಕ್ @ 2047 ಕಾರ್ಯಚಟುವಟಿಕೆಗ¼ನ್ನು ದಿನಾಂಕ:À22.02.2024 ರಂದು ಅತ್ಯಂತ ಸರಳವಾಗಿ  ಆರಂಭಿಸಲಾಗುವುದು. 545 ಶಕ್ತಿಪೀಠ ಫ್ಯಾಮಿಲಿಗಳಿಗೆ ವಿಷಯವನ್ನು ತಿಳಿಸಲು ಹರ್ಷವಾಗುತ್ತಿದೆ.

 ಫಿಸಿಕಲ್ ಲೈಬ್ರರಿ, ಡಿಜಿಟಲ್ ಲೈಬ್ರರಿ ಮತ್ತು ಹ್ಯೂಮನ್ ಲೈಬ್ರರಿ ಹಾಗೂ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ  ಮ್ಯೂಸಿಯಂ ಮಾಹಿತಿ ಸಂಗ್ರಹ ಮತ್ತು ಅವುಗಳ ಜೋಡಣೆಗಾಗಿ ಯಾವ ರೀತಿ ಇಂಟಿರಿಯರ್ ಮಾಡಿಸಬೇಕು ಎಂಬ ಬಗ್ಗೆಯೂ ಕಾರ್ಯಾರಂಭ ಮಾಡಲಾಗುವುದು.

 ಸಂಪೂರ್ಣ ಡಿಜಿಟಲ್ ವ್ಯವಸ್ಥೆಗಾಗಿ ಆದ್ಯಪ್ರಜ್ಞಾ ಟೆಕ್ನಾಲಾಜೀಸ್  ಪ್ರೈವೇಟ್ ಲಿಮಿಟೆಂಡ್ ಸ್ಟಾರ್ಟ್ ಅಫ್ ಕಂಪನಿ ಜೊತೆ ದಿನಾಂಕ:31.11.2023 ಎಂ.ಓ.ಯು ಮಾಡಿಕೊಂಡಿದ್ದರೂ, ಕುಂದರನಹಳ್ಳಿ ರಮೇಶ್ ರವರು ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿಯಲ್ಲಿ ಪ್ರಸ್ತಾಪ ಮಾಡಿರುವ ಎಲ್ಲಾ ಅಂಶಗಳ ಬಗ್ಗೆ, ಒಂದೊಂದು ಪ್ರಸ್ತಾವನೆಗಳ ಮನವರಿಕೆ ಮಾಡಿಕೊಳ್ಳಲು ಇನ್ನ್ನೂವರಿಗೂ ಸಾಧ್ಯವಾಗಿಲ್ಲ. ಈ ಬಗ್ಗೆ ಸಾಕಷ್ಟು ಸಮಾಲೋಚನೆಗಳು ಅಗತ್ಯವಾಗಿದೆ.

  ಶಕ್ತಿಭವನದ ವಿವಿದ ಮ್ಯೂಸಿಯಂಗೆ, ಸಂಭಂದಿಸಿದ ಯಾವ ವಸ್ತು ಎಲ್ಲಿ ಇಡಬೇಕು, ಹೇಗೆ ಇಡಬೇಕು ಎಂಬ ಬಗ್ಗೆ ನಿಖರವಾದ ಡಿಜಿಟಲ್ ಮಾಹಿತಿ ನೀಡಲು, ದಿನಾಂಕ:04.12.2023 ರಂದು ಎವಿಎಸ್ ಪ್ರಾಜೆಕ್ಟ್ ಕಂಪನಿಯೊಂದಿಗೆ ವ್ಯವಹಾರ ಆರಂಭಿಸಿದ್ದರೂ, ಕುಂದರನಹಳ್ಳಿ ರಮೇಶ್ ರವರು ಬರೆದಿರುವ 24 ಪುಟಗಳ ಅಂಶಗಳನ್ನು, ಆ ಕಂಪನಿಯ ಆರ್ಕಿಟೆಕ್ಚರ್ ಇನ್ನೂ ಅರ್ಥಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಎಂ.ಓ.ಯು ಮಾಡಿಕೊಂಡಿಲ್ಲ.

ಶ್ರೀ ಸತ್ಯಾನಂದ್ ರವರು ನಿನ್ನೆ ಹೇಳಿದ ಮಾತು, ಕುಂದರನಹಳ್ಳಿ ರಮೇಶ್ ರವರು 25 ವರ್ಷದಲ್ಲಿ ಹೇಳಿದ ಯೋಜನೆಯನ್ನು ಸರ್ಕಾರಗಳು ಈಗ ಆರಂಭಿಸುತ್ತಿವೆ, ಸರ್ಕಾರಗಳಿಗೆ ಅವರ ಸ್ಪೀಡ್ ಅರ್ಥವಾUಲು ಅಷ್ಟು ಸಮಯ ಹಿಡಿದಿದೆ.

ಈಗ ಈ ಕಂಪನಿಯವರು ಅಷ್ಟು ಬೇಗ ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯಾ? ಅವರ ತಲೆಯಲ್ಲಿ, ಈ ಕಟ್ಟಡದಲ್ಲಿ ಎಲ್ಲಿ, ಹೇಗೆ, ಏನು ಇಡಬೇಕು ಎಂಬುದು ಅಚ್ಚು ಹೊತ್ತಿದೆ. ಆದರೇ ಕಂಪನಿಯವರು ಅವರು ಸಪ್ಲೈ ಮಾಡುವ ಇಂಟೀರಿಯರ್ ಕೆಲಸಕ್ಕೆ  ಮಾತ್ರ ಒತ್ತು ಕೊಡುತ್ತಿದ್ದಾರೆ.

ಎಲ್ಲಾ ಕೆಲಸ ಮುಗಿಸಲು ಅವರು ಪ್ರಯತ್ನವನ್ನು ಏಕೆ ಮಾಡುತ್ತಾರೆ. ಪ್ಲೇವುಡ್ ಕಂಪನಿಗೆ ಮುಂಗಡ ಹಣ ಪಾವತಿಸಿ, ಯುಪಿವಿಸಿ ಕಂಪನಿಗೆ ಮುಂಗಡ ಹಣÀ ಪಾವತಿಸಿ ಎಂದರೆ, ಇವರು ಕೊಡುತ್ತಾರಾ?

ಮೊದಲು ಕಟ್ಟಡದ ಮುಂಭಾಗ ಹಾಕುವ ಗಿಡಗಳಿಂದ ಆರಂಭಿಸಿ, ಶಕ್ತಿಪೀಠ ಗೋಪುರದ ಬಳಿ ಶಕ್ತಿಪೀಠಗಳಿರುವ 7 ದೇಶಗಳ ಬಾವುಟ ಹಾರಿಸುವ ಮತ್ತು ಒಂದು ಮಳೆಯನ್ನು ಒಡೆದರೂ ಏಕೆ, ಎಲ್ಲಿ ಒಡೆಯಬೇಕು ಎಂಬ ಬಗ್ಗೆ, ಆಕ್ಚುಯಲ್ ಪ್ಲಾನ್ ಮತ್ತು ಡಿಜಿಟಲ್ ವ್ಯವಸ್ಥೆ ಮಾಡಲು ತಗಲುವ ವೆಚ್ಚದ ಬಗ್ಗೆ, ಮೂರು ಮಾದರಿಯ ಗುಣಮಟ್ಟದ ವಸ್ತುಗಳ ಕೊಟೇಷನ್ ನೀಡುವ ಬಗ್ಗೆ ಎಂ.ಓ.ಯು ಮಾಡಿಕೊಳ್ಳಲು, ಅವರಿಗೆ ಇವರ ಪರಿಕಲ್ಪನೆಯೇ ಬಹುಷ: ಅರ್ಥವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆಯೂ ಸಾಕಷ್ಟು ಚರ್ಚೆಗಳು ಅಗತ್ಯವಾಗಿದೆ.

  ಮ್ಯೂಸಿಯಂ ಮಾದರಿ ರಾಜ್ಯಕ್ಕೆ ಮಾದರಿಯಾಗಿರಬೇಕು ಹಾಗೂ ಉದ್ದೇಶಿತ 545 ಅಧ್ಯಯನ ಪೀಠಗಳಿಗೆ ಫೈಲಟ್ ಯೋಜನೆಯಾಗ ಬೇಕಿದೆ.

ಉದ್ದೇಶಿತ 545 ಅಧ್ಯಯನ ಪೀಠಗಳು  * ಅಧ್ಯಯನ ಪೀಠವೊಂದಕ್ಕೆ ಆರಂಭzಲ್ಲಿÀ ಕಟ್ಟಡ ಮತ್ತು ಮೂಲಭೂತ ಸೌಕರ್ಯಕ್ಕಾಗಿ ರೂ 5 ಕೋಟಿ= ರೂ 2725

545 ಅಧ್ಯಯನ ಪೀಠಗಳು  * ವಾರ್ಷಿಕ ನಿರ್ವಹಣೆಗೆ ವರ್ಷಕ್ಕೆ 2 ಕೋಟಿ * 2024 ರಿಂದ 2047 ರವರೆಗೆ 23 ವರ್ಷದ ನಿರ್ವಹಣೆಗಾಗಿ= ರೂ 25070

ಒಟ್ಟು 27,795 ಕೋಟಿ

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 2024-2025 ನೇ ಆಯವ್ಯದಲ್ಲಿ ಮಂಡಿಸಿರುವ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮೂಲಕ, ಸಂಶೋಧನೆಗಾಗಿ ಮೀಸಲಿಟ್ಟಿರುವ ಒಂದು ಲಕ್ಷಕೋಟಿ ಅನುದಾನದಲ್ಲಿ ರೂ 2725 ಕೋಟಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮೂಲಕ ಸಲ್ಲಿಸಿ, ಮುಂದಿನ 23 ವರ್ಷದಲ್ಲಿ ರೂ 25070 ಕೋಟಿ ಅನುದಾನ ನೀಡುವ ಪ್ರಸ್ತಾವನೆಯೂ ಇರಲಿದೆ.

ರಾಜ್ಯ ಸರ್ಕಾರವೂ ತನ್ನ ಪಾಲಿನ ಅನುದಾನ ನೀಡಬೇಕಿದೆ.

ಅಧ್ಯಯನ ಪೀಠಗಳು ಸ್ವಯಂ ದುಡಿದುಕೊಂಡು ನಿರ್ವಹಣೆ ಮಾಡುವ ಪಿಪಿಪಿ ಮಾದರಿಯ ಯೋಜನೆಯೂ ಇದಾಗಲಿದೆ.

 ಎಲ್ಲವನ್ನೂ ಕುಂದರನಹಳ್ಳಿ ರಮೇಶ್ ರವರು ಮಾಡಲು ಸಾಧ್ಯವಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ, ಒಂದು ಪ್ಲಾಟ್ ಫಾರಂ ಆಗಿ, ರಾಜ್ಯದ 225 ವಿಧಾನಸಭಾ ಸದಸ್ಯರು, 75 ಜನ ವಿಧಾನ ಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯಸಭಾ ಸದಸ್ಯರು, 2 ದೆಹಲಿ ವಿಶೇಷ ಜನಪ್ರತಿನಿಧಿಗಳು, 31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು, 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು 31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿಇಓಗಳಿಗಳಿಗೆ ಜಾಗೃತಿ ಮಾಡುವ ಕೆಲಸ ಮಾಡುವುದೇ ಪ್ರಮುಖ ಉದ್ದೇಶ.

 ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆಯಲು ಇರುವ ಅವಕಾಶಗಳ ಬಗ್ಗೆ, ಶಕ್ತಿಪೀಠ ಫೌಂಡೇಷನ್ ಸಲಹಾ ಸಂಸ್ಥೆಯ ರೂಪದಲ್ಲಿ ಶ್ರಮಿಸಲು ಉದ್ದೇಶಿಸಿದೆ. ಇವರ ಜೊತೆ ಸಾವಿರಾರು ಮಂದಿ ಜ್ಞಾನಿಗಳು ಕೈ ಜೋಡಿಸುತ್ತಿದ್ದಾರೆ.

ಪ್ರಯತ್ನ ನಮ್ಮದು ಪ್ರತಿಫಲ 108 ಶಕ್ತಿದೇವತೆಗಳಿಗೆ ಬಿಟ್ಟಿದ್ದು.

ಅಗೋಚರ ಶಕ್ತಿ