TUMAKURU:SHAKTHI PEETA FOUNDATION
ಕರ್ನಾಟಕ ರಾಜ್ಯದಲ್ಲಿ, ಕೃಷಿ ಚಟುವಟಿಕೆಗೆ ಅತ್ಯತ್ತಮವಾದ ಸಂಪನ್ಮೂಲವನ್ನು ಭೂ ತಾಯಿ ನೀಡಿದ್ದಾರೆ. 224 ವಿಧಾನಸಭಾ ಕ್ಷೇತ್ರಗಳಲ್ಲೂ ವಿವಿಧ ವೈವಿದ್ಯಮಯವಿದೆ ಎಂದರೆ ತಪ್ಪಾಗಲಾರದು. ರಾಜ್ಯದ್ಯಾಂತ ಕೃಷಿ ಆಶ್ರಮಗಳು ಕಹಳೆ ಊದುವ ಮೂಲಕ, ಯಾವುದೇ ಸಹಕಾರ ಇಲ್ಲದೆ, ನೇಚರ್ ಈಸ್ ಗಾಡ್ ಎಂಬ ತತ್ವದಡಿ, ಪಂಚಭೂತಗಳ ರಕ್ಷಣೆಗೆ ಮುಂದಾಗಿದ್ದಾರೆ.
ಭೂಮಿಯ ಮೇಲೆ ಹುಟ್ಟುವ ಕಳೆ-ಬೆಳೆಗಳ ಸಂಶೋಧನೆ ಮತ್ತು ಅಧ್ಯಯನ ಮಾಡಲು ಮುಂದಾಗಿರುವುದು, ಪ್ರಪಂಚಕ್ಕೆ ಮಾದರಿಯಾಗಿದೆ. ಇಂತಹ ನೈಜ ಉದಾಹರಣೆಗಳು ವಿಶ್ವದ ಯಾವುದೇ ದೇಶದಲ್ಲೂ ನಮಗೆ ಇನ್ನೂ ಕಂಡಿಲ್ಲ. ನಾನಂತೂ ಡಿಜಿಟಲ್ ಪ್ರಪಂಚದಲ್ಲಿ ಹುಡುಕುತ್ತಲೇ ಇದ್ದೇನೆ. ಇದೊಂದು ಹೆಮ್ಮೆಯ ವಿಷಯ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ, ತುಮಕೂರು ಜಿಲ್ಲೆಯ ಸರ್ವಪಕ್ಷಗಳ ಅಧ್ಯಕ್ಷರುಗಳಿಗೆ ಬೆಂಬಲ ನೀಡಲು ಬಹಿರಂಗ ಮನವಿ ಮಾಡಲಾಗಿದೆ. ರಾಜ್ಯದ್ಯಾಂತ ಪ್ರತಿ ಜಿಲ್ಲೆಯಲ್ಲೂ, ಇದೇ ರೀತಿ ಪತ್ರ ಆಂದೋಲನ ಮಾಡಲು ಕೃಷಿ ಆಶ್ರಮದ ಜ್ಞಾನಿಗಳಿಗೆ ಮನವಿ ಮಾಡಲಾಗಿದೆ.

