TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ, ತಲಾ 5 ರಂತೆ ಸುಮಾರು 1120 ಕಳೆ-ಬೆಳೆ ಸಂಶೋಧನೆ, ನಾಲೇಡ್ಜ್ ಬ್ಯಾಂಕ್, ಮ್ಯೂಸಿಯಂ ಸ್ಥಾಪಿಸಲು ಕೃಷಿ ಆಶ್ರಮಗಳ ತಂಡ ಶ್ರಮಿಸುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ, ಕೆಳಕಂಡ ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಅನುಭವಿ ತಜ್ಞರ ಜೊತೆ ಸಮಾಲೋಚನೆ ಆರಂಭವಾಗಿದೆ. ಹೆಸರುಗಳನ್ನು ಅಂತಿಮ ಗೊಳಿಸುವುದು ಸರ್ಕಾರಗಳ ಹೊಣೆಗಾರಿಕೆ. ಪರಿಕಲ್ಪನೆ ಮಾತ್ರ ನಮ್ಮದಾಗಿದೆ.
1. ಫಾರ್ಮರ್ ಸಿಟಿ
2. ಫಾರ್ಮರ್ ಕಾರಿಡಾರ್
3. ಕೃಷಿ ಸಂಶೋದನಾ ನಗರ
4. ಅಗ್ರಿ ಹಬ್
5. ಅಗ್ರಿ ಟೂರಿಸಂ ವ್ಯಾಲಿ
6. ಕೃಷಿ ವ್ಯಾಲಿ
7. ತೋಟಗಾರಿಕಾ ವ್ಯಾಲಿ
8. ಅರಣ್ಯ ವ್ಯಾಲಿ
9. ಆಯುಷ್ ವ್ಯಾಲಿ
10. ಪಶುವೈದ್ಯಕೀಯ ವ್ಯಾಲಿ
11. ರೇಷ್ಮೆ ವ್ಯಾಲಿ
12. ಮೀನುಗಾರಿಕಾ ವ್ಯಾಲಿ
13. ಸಾಂಬಾರು ವ್ಯಾಲಿ
14. ಫಾರ್ಮಾಕಲ್ಚರ್ ವ್ಯಾಲಿ
15. ಪ್ಲೋರಿಕಲ್ಚರ್ ವ್ಯಾಲಿ
16. ಕುಶಲ ಕರ್ಮಿಗಳ ವ್ಯಾಲಿ
17. ಜೇನು ವ್ಯಾಲಿ
18. ಕೌ ವ್ಯಾಲಿ
ಜೊತೆಗೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ, ತಲಾ 5 ರಂತೆ 55 ಕಳೆ-ಬೆಳೆ, 11 ನಗರ ಸ್ಥಳೀಯ ಸಂಸ್ಥೆUಳ ವ್ಯಾಪ್ತಿಯಲ್ಲಿ 11 ಮತ್ತು 5 ಗ್ರಾಮ ಪಂಚಾಯಿತಿಗಳಿಗೆ ಒಂದರಂತೆ ಹಂಚಿಕೆ ಮಾಡಿ, ವಿಧಾನಸಭಾ ಕ್ಷೇತ್ರವಾರು ಉಳಿಯುವ ಗ್ರಾಮ ಪಂಚಾಯಿತಿಗಳು ಸೇರಿದಂತೆ 66 ರಿಂದ 85 ರವರೆಗೂ ವಿಸ್ತರಣೆಯಾಗುವ ಸಂಭವವಿದೆ.

ತುಮಕೂರು ಜಿಲ್ಲೆ ಫೈಲಟ್ ಯೋಜನೆಯಾಗಿ, ತುಮಕೂರಿನ ಚಿರಂತನ ಫೌಂಡೇಷನ್ ಕರಡು ನಕ್ಷೆ ಮತ್ತು ‘ಕಳೆ-ಬೆಳೆ ಆಪ್’ ಸಿದ್ಧಪಡಿಸುತ್ತಿದೆ. ಆಸಕ್ತರು ಸೂಕ್ತ ಮಾರ್ಗದರ್ಶನ ನೀಡಲು ಮನವಿ. ಎಲ್ಲಾ ವರ್ಗದವರ ಸಲಹೆಯೊಂದಿಗೆ,ತುಮಕೂರು ಜಿಲ್ಲೆ ಪಕ್ಕಾ ಆದ ಮೇಲೆ, ರಾಜ್ಯದ ಎಲ್ಲಾ ಜಿಲ್ಲೆಗಳ ನಕ್ಷೆಗಳ ಸಹಿತ, 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಜಿಐಎಸ್ ಲೇಯರ್ ಸಿದ್ಧಪಡಿಸಲಾಗುವುದು.

