6th March 2026
Share

TUMAKURU:SHAKTHIPEETA FOUNDATION

‘ವಿಕಸಿತ ಭಾರತ @ 2047 ಮತ್ತು ನಂಬರ್ ಒನ್ ಕರ್ನಾಟಕ @ 2047 ‘ಘೋಷಣೆಗಳಿಗೆ ಪೂರಕವಾಗಿ ಶ್ರಮಿಸುವ, ನನ್ನ ಕನಸಿನ ವಿನೂತನ ಯೋಜನೆಗಳ ಜಾರಿಗೆ ಅತ್ಯುತ್ತಮವಾದ ಕ್ಯಾಂಪಸ್ ಜಮೀನು ಬಹುತೇಕ ಅಂತಿಮವಾಗಿದೆ. ಮುಂದಿನ ವಾರ ವಿವಿಧ ಎಂ.ಓ.ಯುಗಳನ್ನು ಅಂತಿಮ ಗೊಳಿಸಲು ಭರದ ಸಿದ್ಧತೆ ನಡೆದಿದೆ. ಜೊತೆಗೆ ಪರಿಕಲ್ಪನಾ ವರದಿ’ ಯನ್ನು ಸಿದ್ಧಪಡಿಸಲು, ಕಳೆದ 38 ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿ ನನ್ನ ಜೊತೆ, ಜೊತೆಯಾಗಿರುವ ವಿವಿಧ ವರ್ಗದವರು ಸಹಕರಿಸುತ್ತಿದ್ದಾರೆ.

ಆಡಳಿತ ಕಚೇರಿ :  ಪಾರ್ವತಿ ನಿಲಯ/ಶಕ್ತಿಭವನ, 1 ನೇ ಮುಖ್ಯ ರಸ್ತೆ, ಜಯನಗರ ಪೂರ್ವ, ತುಮಕೂರು-572102 ಸುಮಾರು 5000 ಚದುರ ಅಡಿ.

(ತುಮಕೂರು ನಗರ ವಿಧಾನಸಭಾ ಕ್ಷೇತ್ರ, ತುಮಕೂರು ಜಿಲ್ಲೆ)

ರಫ್ತು ಭವನ : ಶಕ್ತಿಪೀಠ ಡಾಟಾ ಪಾರ್ಕ್, ತುಮಕೂರು ಇಂಡಸ್ಟಿçಯಲ್ ನೋಡ್, ವಸಂತನರಸಾಪುರ, ಮೊದಲನೇ ಹಂತ. ಒಂದು ಎಕರೆ.

(ಕೊರಟಗೆರೆ ವಿಧಾನಸಭಾ ಕ್ಷೇತ್ರ, ತುಮಕೂರು ಜಿಲ್ಲೆ)

ಎನ್.ಆರ್.ಸ್ಮಾರ್ಟ್ ವಿಲೇಜ್ : ಅಪ್ಪಿನಾಯಕನಹಳ್ಳಿ/ ದೇವರಾಜನಹಳ್ಳಿ ಗ್ರಾಮದ ಸುಮಾರು 50 ಎಕರೆ. (ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ, ತುಮಕೂರು ಜಿಲ್ಲೆ)

ಫಾರ್ಮರ್ ಸಿಟಿ : ಬಗ್ಗನಡುಕಾವಲ್,ಸುಮಾರು 30 ಎಕರೆ,  (ಹಿರಿಯೂರು ವಿಧಾನಸಭಾ ಕ್ಷೇತ್ರ, ಚಿತ್ರದುರ್ಗ ಜಿಲ್ಲೆ)

ಫಾರ್ಮರ್ ಕಾರಿಡಾರ್ : ಕರ್ನಾಟಕ ರಾಜ್ಯದ, 28 ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 2725 ಕೀಮೀ

ಆಯಾ ವ್ಯಾಪ್ತಿಯ ಜಿಲ್ಲಾ ಉಸ್ತುವಾರಿ ಸಚಿವರ, ಆಯಾ ವ್ಯಾಪ್ತಿಯ ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರು ಹಾಗೂ ಲೋಕಸಭಾ ಸದಸ್ಯರ ಮತ್ತು ಆಯಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಸದಸ್ಯರ, ಆಯಾ ವ್ಯಾಪ್ತಿಯ ವಿಧಾನಸಭಾ ಪರಿಷತ್ ಸದಸ್ಯರ ಸಹಕಾರ ಪಡೆಯಲು ನಿರ್ಧರಿಸಲಾಗಿದೆ.

  1. ದೆಹಲಿಯ ಅಧಿಕಾರಿಗಳ ತಂಡ.
  2. ಬೆಂಗಳೂರಿನ ಅಧಿಕಾರಿಗಳ ತಂಡ.
  3. ದೆಹಲಿಯ ನಿವೃತ್ತ ಅಧಿಕಾರಿಗಳ ತಂಡ.
  4. ಬೆಂಗಳೂರಿನ ನಿವೃತ್ತ ಅಧಿಕಾರಿಗಳ ತಂಡ.
  5. ಮೈಸೂರು/ತುಮಕೂರು ಅಮ್ಯಾಕ್ಸ್ ಕಂಪನಿ.
  6. ಗುಬ್ಬಿಯ ಸಿಐಟಿ ಇಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿಗಳ ಅಕ್ಟಿವಿಟಿ ಪಾಯಿಂಟ್ಸ್ ಟೀಮ್.
  7. ಸಾರ್ಟ್ ಅಫ್ ತುಮಕೂರು.
  8. ವಿಶ್ವದ 195/212 ದೇಶಗಳ ಎನ್.ಆರ್.ಕೆ/ ಎನ್.ಆರ್.ಐ ಸಲಹಾ ಸಮಿತಿ.
  9. ಭಾರತ ದೇಶದ 36 ರಾಜ್ಯಗಳ ಎನ್.ಆರ್.ಕೆ ಸಲಹಾ ಸಮಿತಿ.
  10. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಪ್ರತಿನಿಧಿಗಳ ತಂಡ.
  11. ಕರ್ನಾಟಕ ರಾಜ್ಯದ ಎಲ್ಲಾ ಧರ್ಮಗಳ/ ಜಾತಿ/ಉಪಜಾತಿಗಳ ಸಲಹಾ ಸಮಿತಿ.
  12. ಎಂ.ಟೆಕ್ ಮಾಡುವಾಗ ಪ್ರಾಜೆಕ್ಟ್ ವರ್ಕ್ ಆಗಿ ಆಯ್ಕೆ ಮಾಡಿಕೊಂಡಿದ್ದ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರ ರೂಪಿಸುವ ಮಧ್ಯಂತರ ವರಧಿ ಸಿದ್ಧಪಡಿಸಿದ ವಿದ್ಯಾರ್ಥಿ/ಡಾಟಾ ವಿಜ್ಞಾನಿ.
  13. ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಕರ್ನಾಟಕ ರಾಜ್ಯ ಮತ್ತು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಮಾಜಿ  ಸದಸ್ಯರ ತಂಡ ಪರಿಕಲ್ಪನಾ ವರದಿ ಸಿದ್ಧಪಡಿಸಲು ಶ್ರಮಿಸುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಾತ್ವಿಕ ಅನುಮೋದನೆ ಪಡೆÀಯುವವರೆಗೂ, ಯಾರೊಬ್ಬರ ಬಳಿಯೂ, ಯಾವುದೇ ಆರ್ಥಿಕ ನೆರವು ಪಡೆಯದೇ ಇರಲು ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ.  ವಿವಿದ ತಂಡದವರು ಹಣ ಬಂದಾಗ ನಿಗಧಿತ ಸೇವಾ ಶುಲ್ಕ ಪಡೆಯುವ ಷರತ್ತಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇನೆ.