27th July 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ, ಜಿಂದಾಲ್ ನಗರದಲ್ಲಿರುವ PRESTIGE-ZINDAL CITY ಯಲ್ಲಿ ಶಕ್ತಿಪೀಠ ಫೌಂಡೇಷನ್  HUMAN LIBRARY ಯನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಕಂಪನಿಯ ಛೇರ್ಮನ್ ಮತ್ತು ಸಿಇಓ ರವರೊಂದಿಗೆ ಸಮಾಲೋಚನೆ ನಡೆಸಲು ನಿರ್ಧಾರ ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರ ಅತಿ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿ ಸಿದ್ಧಪಡಿಸುತ್ತಿರುವ ಶಕ್ತಿಪೀಠ ಫೌಂಡೇಷನ್ ಗೆ ರಾಜ್ಯದ 31 ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಪರಿಣಿತ ತಜ್ಞರನ್ನು ಹುಡುಕುವ ಕಾರ್ಯ ಆರಂಭವಾಗಿದೆ.

ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಅಪಾರ್ಟ್‍ಮೆಂಟ್‍ಗಳಲ್ಲಿ, ರಾಜ್ಯದ ಬಹುತೇಕ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಜನರು ವಾಸವಾಗಿರಬಹುದು ಎಂಬ ಅನಿಸಿಕೆಯಿಂದ ಡಾಟಾ ಬೇಸ್ ಸಂಗ್ರಹಮಾಡಲಾಗುತ್ತಿದೆ.

ಈ ಹಿನ್ನಲೆಯಲ್ಲಿ PRESTIGE-ZINDAL CITY ಯಲ್ಲಿ ಶಕ್ತಿಪೀಠ ಫೌಂಡೇಷನ್ ನ ಕಾರ್ಯ ಚಟುವಟಿಕೆ ಆರಂಭಿಸಲು ಯೋಚಿಸಲಾಗಿದ್ದು, ಸಮೀಕ್ಷೆ ನಡೆಸಲಾಗುತ್ತಿದೆ.

ದಿನಾಂಕ:26.09.2022 ರಂದು ಶರನ್ನವರಾತ್ರಿ ದಿವಸ HUMAN LIBRARY  ಪ್ರಥಮ ಸಭೆಯನ್ನು ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ಈ ಸಭೆಗೆ ಕಂಪನಿಯ ಛೇರ್ಮನ್ ಮತ್ತು ಸಿಇಓ ರವರನ್ನು ಆಹ್ವಾನಿಸಲು ಯೋಚಿಸಲಾಗಿದೆ.

PRESTIGE-ZINDAL CITY  ಯಲ್ಲಿ ನ ನಿವಾಸಿಗಳು ಸಂಪರ್ಕಿಸಲು ಈ ಮೂಲಕ ಕೋರಿದೆ.