TUMAKURU: SHAKTHIPEETA FOUNDATION
ಭಾರತದ ಇತಿಹಾಸದಲ್ಲಿ 2047 ರವರೆಗಿನ ಅಭಿವೃದ್ಧಿ ಅಧ್ಯಯನಕ್ಕೆ, ನಾಲೇಡ್ಜ್ ಬ್ಯಾಂಕ್-2047 ಆರಂಭಿಸಲು, ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ರವರ ಜಯಂತಿ ದಿವಸ, ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ತುಮಕೂರು ರೀಸರ್ಚ್ ಫೌಂಡೇಷನ್ ಉದ್ಘಾಟನೆ ಕಾರ್ಯಕ್ರಮ ಸರಳವಾಗಿ ನಡೆಯಿತು.
![](https://epaper.shakthipeeta.in/wp-content/uploads/2023/10/IMG-20231002-WA0028-1024x682.jpg)
ತುಮಕೂರು ಫೈಲÀಟ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡು ರಾಜ್ಯ ಸರ್ಕಾರದ ಮೂಲಕ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಂತರ ಕರ್ನಾಟಕ ರಾಜ್ಯ ಮಟ್ಟಕ್ಕೆ ವಿಸ್ತರಣೆ ಮಾಡಲು, ತುಮಕೂರು ವಿಶ್ವ ವಿದ್ಯಾನಿಯಲದಲ್ಲಿ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುವರು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
![](https://epaper.shakthipeeta.in/wp-content/uploads/2023/10/IMG-20231002-WA0036-1024x682.jpg)
ಫೋಟೋದಲ್ಲಿ ಇರುವವರ ಸಮ್ಮುಖದಲ್ಲಿ ಶ್ರೀ ಎಂ.ವೆಂಕಟೇಶ್ವರಲುವರು, ಮಾನ್ಯಕುಲಪತಿ (ಪರೀಕ್ಷಾಂಗ),ಯವರಾದ ಶ್ರೀ ಕೆ. ಪ್ರಸನ್ನಕುಮಾರ್ ರವರು. ಡಾ. ಎ.ಎಂ ಮಂಜುನಾಥ್ರವರು, ಪ್ರೋ. ಪರಶುರಾಮ್ ರವರು ಮಾಡಿದ ಉಪನ್ಯಾಸದ ಮತ್ತು ನನ್ನ ಉದ್ಘಾಟನಾ ಮಾತಿನ ಹೂರಣ
- ತುಮಕೂರು ಜಿಲ್ಲೆಯ, 10 ತಾಲ್ಲೋಕುಗಳ, 50 ಹೋಬಳಿಗಳ, 330 ಗ್ರಾಮಪಂಚಾಯಿತಿಗಳ 2727 ಗ್ರಾಮಗಳು ಮತ್ತು 11 ನಗರ ಸ್ಥಳೀಯ ಪ್ರದೇಶಗಳ 253 ವಾರ್ಡ್ಗಳಲ್ಲಿ ಇರುವ ಬಡಾವಣೆವಾರು, ಪ್ರತಿಯೊಂದು ಗ್ರಾಮದ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬಡಾವಣೆಗಳಲ್ಲಿ ‘ಊರಿಗೊಂದು/ಬಡಾವಣೆಗೊಂದು ಪುಸ್ತಕ’(VISION DOCUMENT-2047) ರಚಿಸಲು, ಪ್ರತಿ ವ್ಯಾಪ್ತಿಯಲ್ಲೂ ಆಯಾ ವ್ಯಾಪ್ತಿಯ ವಿದ್ಯಾರ್ಥಿಗಳ, ನಾಲೆಡ್ಜ್ಬಲ್ ವ್ಯಕ್ತಿಗಳು, ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ನೌಕರರನ್ನು ಒಳಗೊಂಡ ರೀಸರ್ಚ್ ಫೌಂಡೇಷನ್ ಸ್ಥಾಪಿಸುವುದು.
- ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಪೌಂಡೇಷನ್ಗೆ, ಅಗತ್ಯ ಮೂಲಭೂತ ಸೌಕರ್ಯ ಗಳು ಸೇರಿದಂತೆ ಪ್ರಸ್ತಾವನೆ ಸಲ್ಲಿಸುವುದು.
- ಸ್ಟೂಡೆಂಟ್ ಎಕಾನಮಿಕ್ ಝೋನ್, ಎಜುಕೇಷನ್ ಹಬ್ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಂಪ್ಚರಿಂಗ್ ಗೌರ್ವನಮೆಂಟ್ ಆಫ್ ಇಂಡಿಯಾ ಫಂಡ್ಸ್ ಗೆ ಪ್ರಸ್ತಾವನೆ ಸಲ್ಲಿಸುವುದು.
- ತುಮಕೂರು ರೀಸರ್ಚ್ ಫೌಂಡೇಷನ್ ರೂಪುರೇಷೆ ಸಿದ್ಧಪಡಿಸಿ ಸರ್ಕಾರಗಳ ಅನುಮೋದನೆ ಪಡೆಯುವುದು.
- ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸುವ ಮೊದಲು ಜಿಲ್ಲೆಯ ಶಾಲಾ ಕಾಲೇಜುಗಳ ಮೂಲಕ ವ್ಯಾಪಕ ಜನ ಜಾಗೃತಿ ಮೂಡಿಸಿ, ಜ್ಞಾನ ದಾನಿಗಳಿಂದ ಸಲಹೆ ಪಡೆಯುವುದು.
![](https://epaper.shakthipeeta.in/wp-content/uploads/2023/10/IMG-20231002-WA0027-1024x549.jpg)
ಭಾಗವಹಿಸಿದ್ಧ ಎಲ್ಲರಿಗೂ ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿ ನೀಡಲಾಯಿತು. ದಿನಾಂಕ:03.10.2023 ರಂದೇ, ಮೇಲ್ಕಂಡ ಅಂಶಗಳ ಬಗ್ಗೆ ಇಂಟರ್ನ್ಷಿಪ್ ಗಾಗಿ ಸಲಹೆ ಪಡೆಯಲು ಸಭೆ ಆಯೋಜಿಸಿರುವುದಾಗಿ ಉಪಕುಲಸಚಿವರಾದ ಶ್ರೀಮತಿ ಮಂಗಳಗೌರಿರವರು ಪ್ರಕಟಿಸಿದರು.