TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಸರ್ಕಾರದಿಂದ, ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಿರುವ ವಿವಿಧ 10 ಯೋಜನೆ ನನೆಗುದಿಗೆ ಬಿದ್ದಿವೆಯಂತೆ. ಈ 10 ಯೋಜನೆಗಳು ಯಾವ ಕಾರಣಕ್ಕೆ ನನೆಗುದಿಗೆ ಬಿದ್ದಿವೆ ಎಂಬ ಮಾಹಿತಿ ಸಂಗ್ರಹಮಾಡಿ, ರಾಜ್ಯದ ಎಲ್ಲಾ ಸಂಸದರಿಗೂ ಮಾಹಿತಿ ಒದಗಿಸುವುದು ಅಗತ್ಯವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆ, ಈ 10 ಯೋಜನೆಗಳ ಪಟ್ಟಿ ಮಾಡಿ, ಕಡತದ ಅನುಸರಣೆ ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಪ್ರತಿಯೊಂದು ಇಲಾಖೆಯು ಈ ರೀತಿ ಪಟ್ಟಿ ಮಾಡಿ, ರಾಜ್ಯದ ಎಲ್ಲಾ ಸಂಸದರಿಗೂ ರವಾನಿಸುವುದು ಸೂಕ್ತವಾಗಿದೆ.
ಪ್ರತಿಯೊಂದು ಇಲಾಖಾವರು ಪಟ್ಟಿ ಮಾಡಿ, ದೆಹಲಿಯಲ್ಲಿನ ಕಚೇರಿಗಳ ಜಿ.ಐ.ಎಸ್ ಲೇಯರ್ ಮಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು ಹಾಗೂ ಎಲ್ಲಾ ಇಲಾಖಾವಾರು ಮಾಹಿತಿಗಳನ್ನು ಡಿಜಿಟಿಲಿಕರಣ ಮಾಡಲು ಶಕ್ತಿಪೀಠ ಫೌಂಡೇಷನ್ ಪ್ರಸ್ತಾವನೆ ಸಿದ್ದಪಡಿಸುತ್ತಿದೆ.
ಆಸಕ್ತರು ಕೈ ಜೋಡಿಸಬಹುದಾಗಿದೆ.
– ಅಗೋಚರ ಶಕ್ತಿ