27th July 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಅಧ್ಯಯನ ಪೀಠ ದ ವತಿಯಿಂದ ದಿನಾಂಕ:08.03.2024 ರ ಮಹಾಶಿವರಾತ್ರಿ ದಿವಸ ಜಗತ್ತಿನ, ಕೆಳಕಂಡ ಮಾಹಿತಿಗಳ ಸಂಗ್ರಹ ಮತ್ತು ಅಧ್ಯಯನಕ್ಕೆ ಚಾಲನೆ ನೀಡಲು, ಸುಮಾರು 9   ಜನ ಬುದ್ಧಿಜೀವಿಗಳು ಮುಂದಾಗಿದ್ದಾರೆ. ಇವರ ಜೊತೆಯಲ್ಲಿ ಧರ್ಮಗಳ/ಜಾತಿ/ಉಪಜಾತಿಗೊಂದು ಉಪಸಮಿತಿ ರಚಿಸಲು ಆಲೋಚನೆ ಮಾಡಿದ್ದಾರೆ.

ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ Àನಾಗಿ ಆಯ್ಕೆ ಮಾಡಿರುವ ಹಾಗೂ ಜಾತಿಗಣತಿ ಸಮೀಕ್ಷೆ ಹಿನ್ನಲೆಯಲ್ಲಿ, ಸರ್ಕಾರದೊಂದಿಗೆ ನಾವು ಕೈಜೋಡಿಸಬೇಕೆಂದು, ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

  1. ಪ್ರಪಂಚದ ಸರ್ವಧರ್ಮಗಳ  ಮಾಹಿತಿ.
  2. ಭಾರತ ದೇಶದ ಜಾತಿ/ಉಪಜಾತಿಗಳ ಮಾಹಿತಿ.
  3. ಕರ್ನಾಟಕ ರಾಜ್ಯದ ಜಾತಿ/ಉಪಜಾತಿಗಳ ಮಾಹಿತಿ.
  4. ಬೆಂಗಳೂರು ಸಿಟಿಯಲ್ಲಿ  ವಾಸವಿರುವ ಜಾತಿ/ಉಪಜಾತಿಗಳ ಮಾಹಿತಿ.
  5. ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ  ವಾಸವಿರುವ ಜಾತಿ/ಉಪಜಾತಿಗಳ ಮಾಹಿತಿ.
  6. ಬೆಂಗಳೂರು ಸರ್ವಧರ್ಮಗಳ, ಸರ್ವ ಜಾತಿ/ಉಪಜಾತಿಗಳ ತವರುಮನೆ ಮಾಹಿತಿ.
  7. ಅತಳವಿತಳಪಾತಾಳ ಲೋಕಗಳ ಮಾಹಿತಿ.
  8. ಯುಗಗಳ ಮಾಹಿತಿ.
  9. ಹಿಂದೂಧರ್ಮ ಮತ್ತು ಇತರ ಧರ್ಮಗಳ ಭಾಂದವ್ಯಗಳ ಮಾಹಿತಿ.

ತುಮಕೂರಿನ ಶಕ್ತಿಪೀಠ ಫೌಂಡೇಷನ್, ಈ ಅಧ್ಯಯನ ಪೀಠಕ್ಕೆ ಎಲ್ಲಾ ವಿಧವಾದ ಸಲಹೆ ಮತ್ತು ಸಹಕಾರ ನೀಡಲು ಮುಂದಾಗಿದೆ. ಮಹಾಶಿವರಾತ್ರಿ ದಿವಸ  ಸ್ಪಷ್ಟರೂಪುರೇಷೆ ನಿರ್ಧರಿಸಲು, ಇಂದು ಬೆಳಿಗ್ಗೆ ವಾಕ್ ಮಾಡುವಾಗಿ ನಿರ್ಧಾರ ಕೈಗೊಂಡಿದ್ದಾರೆ.

3571 ಪ್ಲಾಟ್‍ಗಳಿರುವ ಜಿಂದಾಲ್ ಸಿಟಿಯಲ್ಲಿನ ಎಲ್ಲಾ ಧರ್ಮಗಳ, ಜಾತಿ/ಉಪಜಾತಿಗಳ ಜನರು,   ಸಹಕಾರ ನೀಡುವ ಮೂಲಕ ಸರ್ಕಾರದ ಕೆಲಸ ದೇವರ ಕೆಲಸ ಎಂದು ಸಹಕರಿಸುವುದು ಸೂಕ್ತವಾಗಿದೆ.

ಅಗೋಚರ ಶಕ್ತಿ