25th July 2024
Share

TUMAKURU:SHAKTHIPEETA FOUNDATION

ಪಿಜೆಸಿ: 3571 ಪ್ಲಾಟ್‍ಗಳ ನಿವಾಸಿಗಳಿಂದ ಅಭಿಪ್ರಾಯ ಸಂಗ್ರಹ ಹಾಗೂ ಕೆಳಕಂಡ 7 ಇಲಾಖೆಗಳೊಂದಿಗೂ ಸಮಾಲೋಚನೆ ಆರಂಭ.

  1. ನಗರಾಭಿವೃದ್ಧಿ ಇಲಾಖೆ.
  2. ಕಂದಾಯ ಇಲಾಖೆ.
  3. ಪ್ರವಾಸೋಧ್ಯಮ ಇಲಾಖೆ.
  4. ಹಿಂದುಳಿದ ವರ್ಗಗಳ ಇಲಾಖೆ.
  5. ಕನ್ನಡ ಮತ್ತು ಸಂಸ್ಕøತಿ ಇಲಾಖೆ.
  6. ಮುಜರಾಯಿ ಇಲಾಖೆ.
  7. ವಕ್ಛ್ ಇಲಾಖೆ

ಅಧ್ಯಯ£ ಆರಂಭಿಕÀ/ಮಧ್ಯಂತರ ವರದಿ

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೋಕು, ದಾಸಾನುಪುರ-2 ಹೋಬಳಿ, ಚಿಕ್ಕಬಿದರೆಕಲ್ಲು ಗ್ರಾಮದ, ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ ಆವರಣ ದಲ್ಲಿ ಇರುವ ಸರ್ವೆನಂಬರ್ 29/2 ರಲ್ಲಿನ ಸರ್ಕಾರಿ ಬಿ-ಖರಾಬು 26 ಗುಂಟೆ ಎಂದು ಕೆಲವು ದಾಖಲೆಗಳಲ್ಲಿ ಇದೆ, ಇನ್ನೂ ಕೆಲವು ದಾಖಲೆಗಳಲ್ಲಿ 16 ಗುಂಟೆ ಇದೆ. ನನ್ನ ಅಧ್ಯಯನ ವರದಿಯ ಪ್ರಕಾರ, ಈ ಜಮೀನಿನ ಇತಿಹಾಸ.

  1. ನಾನು  ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‍ಮೆಂಟ್‍ನಲ್ಲಿ ಪ್ಲಾಟ್ ಕೊಂಡು ಕೊಳ್ಳಲು ಬಯಸಿದ್ದಾಗ, ಅವರು ನೀಡಿದ್ದ ದಾಖಲೆಗಳ ಅಧ್ಯಯನದಲ್ಲಿ ಸರ್ಕಾರಿ ಬಿ.ಖರಾಬು ಜಮೀನಿನ ಮಾಹಿತಿ ದೊರಕಿತು.
  2. ಚಿಕ್ಕಬಿದರೆಕಲ್ಲು ವಿಲೇಜ್ ಮ್ಯಾಪ್ ಗಮನಿಸಿದಾಗ ಕುಂಟೆ ಖರಾಬು ಇರುವುದು ತಿಳಿಯಿತು.
  3. ದಿನಾಂಕ:22.10.2022 ರಂದೇ, ಈ ಜಮೀನಿನಲ್ಲಿ ಆಸಕ್ತ ನಿವಾಸಿಗಳ ನೇತೃತ್ವದಲ್ಲಿ ‘ಪಂಚವಟಿ’ ಗಿಡ ಹಾಕಿಸಲಾಯಿತು. ನಿವಾಸಿಗಳು ಸ್ವಯಂ ಇಚ್ಚೆಯಿಂದ ನಿರ್ವಹಣೆ ಮಾಡುತ್ತಿದ್ದಾರೆ.
  4. ಹಳೇ ಪಹಣಿಯಲ್ಲಿ ಖರಾಬು ಮಾಹಿತಿ ಇದೆ, ಕಂಪ್ಯೂಟರ್ ಪಹಣಿಯಲ್ಲಿ ಖರಾಬು ಮಾಯಾವಾಗಿದೆ.
  5. ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‍ಮೆಂಟ್ ಲೇ-ಔಟ್‍ನಲ್ಲಿ ಬಿ ಖರಾಬು ಜಮೀನನ್ನು ಆವರಣ ಗೋಡೆ ಹಾಕಿ ಪ್ರತ್ಯೇಕವಾಗಿ ಬಿಟ್ಟಿರುತ್ತಾರೆ. ಈಗ ಅದು ಟ್ರೀ ಪಾರ್ಕ್ ಆಗಿದೆ.
  6. ದಿನಾಂಕ:20.06.2000 ದಂದು ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಯವರು ಭೂ ಪರಿವರ್ತನೆ ಮಾಡುವಾಗ, ಇದನ್ನು ಈಗಾಗಲೇ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡುಲು ಅದೇಶ ಮಾಡಿರುತ್ತಾರೆ.
  7. ಪಹಣಿಯಲ್ಲಿ ನಮೂದಿಸಲು ಜಿಲ್ಲಾಧಿಕಾರಿಯವರು ತಹಶೀಲ್ಧಾರ್ ರವರಿಗೆ ಸೂಚನೆ ನೀಡಿದ್ದಾರೆ. ಆದರೂ ಇದೂವರೆಗೂ ಪಹಣಿಯಲ್ಲಿ ನಮೂದಾಗಿರುವುದು ದಾಖಲೆ ಸಿಕ್ಕಿಲ್ಲ.
  8. ದಿನಾಂಕ:06.09.2016 ರಲ್ಲಿ ಜಂಟಿ ಸಹಭಾಗಿತ್ವದಲ್ಲಿ ಭೂ ಪರಿವರ್ತನೆ ಮಾಡುವಾಗ 16 ಗುಂಟೆ ಬಿ. ಖರಾಬು ಬಿಟ್ಟು ಭೂ ಪರಿವರ್ತನೆ ಮಾಡಲು ಕರಾರು ಪತ್ರದಲ್ಲಿ ನಮೂದಿಸಿದ್ದಾರೆ.
  9. ದಿನಾಂಕ:06.09.2016 ರಲ್ಲಿ ಇ.ಸಿ ಯಲ್ಲೂ 16 ಗುಂಟೆ ಬಿ. ಖರಾಬು ನಮೂದಿಸಿದ್ದಾರೆ.
  10. ಹಿಸ್ಸಾ ಸರ್ವೇ ಟಿಪ್ಪಣಿಯಲ್ಲಿ 26 ಗುಂಟೆ ಖರಾಬು ಮಾಹಿತಿ ಇದೆ.
  11. ದಿನಾಂಕ:30.11.1907 ರ ರಿಸರ್ವೇ ಟಿಪ್ಪಣೆಯಲ್ಲಿ 26 ಗುಂಟೆ ಖರಾಬು ಮಾಹಿತಿ ಇದೆ.
  12. ದಿನಾಂಕ:30.11.1907 ರ ರಿಸರ್ವೇ ಟಿಪ್ಪಣೆಯಲ್ಲಿ 26 ಗುಂಟೆ ಖರಾಬು ನಕ್ಷೆಯಲ್ಲೂ ಗುರುತು ಮಾಡಿದ್ದಾರೆ.
  13. ದಿನಾಂಕ:20.12.2016 ರ ಪ್ರೆಸ್ಟೀಜ್ ಸೌತ್ ಸಿಟಿ ಹೋಲ್ಡಿಂಗ್ಸ್ ಟೈಟಲ್ ವರದಿಯಲ್ಲೂ 16 ಗುಂಟೆ ಬಿ. ಖರಾಬು ಜಮೀನು ನಮೂದು ಮಾಡಿದ್ದಾರೆ.
  14. ಸಾಮಾಜಿಕ ಹಾಗೂ ಧಾರ್ಮಿಕ ಅಧ್ಯಯನ ಪೀಠ ದ ವತಿಯಿಂದ, ಉದ್ದೇಶಿತ ಎರಡು ಯೋಜನೆಗಳಿಗೆ ಸೇರಿ, ಕೇವಲ 60 ಅಡಿ ಅಗಲ ಮತ್ತು 60 ಅಡಿ ಉದ್ದದಲ್ಲಿ ಕೇವಲ 3600 ಚದುರ ಅಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ, ಉಳಿದ ಜಮೀನಿನನಲ್ಲಿ ಗಿಡಗಳನ್ನು ಬೆಳೆಸಲು ಆಸಕ್ತಿ ಹೊಂದಿದ್ದಾರೆ.
  15. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ, ಆಸಕ್ತ ನಿವಾಸಿಗಳ ಒಂದು ತಂಡ  ಸರ್ಕಾರಿ ಸ್ವತ್ತನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ.
  16. ಆಳವಾದ ಅಧ್ಯಯನ ಮುಂದುವರೆದಿದೆ, ದಾಖಲೆಗಳ ಸಂಗ್ರಹ ಮಾಡಲು ಆರಂಭಿಸಲಾಗಿದೆ, ಚಿಕ್ಕಬಿದರೆಕಲ್ಲು ಗ್ರಾಮದ ಹಿರಿಯ ನಾಗರೀಕರಿಂದಲೂ ಮತ್ತು ನಿವೃತ್ತ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ನೌಕರರಿಂದ ಮಾಹಿತಿ ಸಂಗ್ರಹವೂ ಆರಂಭವಾಗಿದೆ.