TUMAKURU:SHAKTHI PEETA FOUNDATION
ದೆಹಲಿಯ ಭಾರತ್ ಮಂಟಪದಲ್ಲಿ ದಿನಾಂಕ:02.04.2025 ರಿಂದ 03.04.2025 ರವರೆಗೆ 3 ದಿವಸಗಳ ಕಾಲ ನಡೆದ ‘ಸ್ಟಾಟ್ ಅಫ್ ಮಹಾಕುಂಭ’ ದಲ್ಲಿ ಶ್ರೀ ಲಂಕಾ ಸೇರಿದಂತೆ, ಭಾರತ ದೇಶದ 18 ರಾಜ್ಯಗಳ ಕೃಷಿಗೆ ಸಂಭಂಧಿಸಿದ ಸ್ಟಾಟ್ ಅಫ್ ದಾರರ ಜೊತೆ ಸಮಾಲೋಚನೆ ನಡೆಸಲಾಯಿತು.
ಬೆಂಗಳೂರು ಎಂದು ಹೇಳಿದ ತಕ್ಷಣ ಅವರೆಲ್ಲಾ ನೀಡಿದ ಪ್ರತಿಕ್ರೀಯೆ ರೀತಿ ನಿಜಕ್ಕೂ ಅದ್ಭುತವೆನಿಸಿತು.ಮುಂದುವರೆದು ವಿಶ್ವದ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧನೆ ವಿಚಾರ ಚರ್ಚೆ ಮಾಡಿದಾಗ, ಅವರ ಭಾವನೆ ಇನ್ನೂ ಆಳಕ್ಕೆ ಇಳಿಯ ತೊಡಗಿತು.
ವಿಕಸಿತ ಭಾರತ @ 2047 ರ ಅಂಗವಾಗಿ, ನಂಬರ್ ಒನ್ ಕರ್ನಾಟಕ @ 2047 ಘೋಷಣೆಯಡಿಯಲ್ಲಿ, ತಮ್ಮ ಸೇವೆಯನ್ನು ರೈತರಿಗೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ನೀಡಲು, ಭಾರತ ದೇಶದ ಮಟ್ಟದ ಒಂದು ಕೃಷಿಗೆ ಸಂಭಂಧಿಸಿದ ಸ್ಟಾಟ್ ಅಫ್ ದಾರರ ‘ನಾಲೇಡ್ಜ್ ಬ್ಯಾಂಕ್ @ 2047’ ಆರಂಭಿಸಲು ಸಮಾಲೋಚನೆ ನಡೆಸಲಾಯಿತು.
1. ಕೃಷಿಗೆ ಸಂಭಂಧಿಸಿದ ಸ್ಟಾಟ್ ಅಫ್ ದಾರರಿಗೆ, ಬೆಂಗಳೂರಿನಲ್ಲಿ ಕೋ ವರ್ಕಿಂಗ್ ಸ್ಪೇಸ್ ಆವರಣ ತೆರೆಯುವುದು.
2. ಭಾರತದ ದೇಶದ ಅಗ್ರಿ ಸ್ಟಾಟ್ ಅಫ್ಗಳು, ಅವರ ಸೇವೆಯನ್ನು ಕರ್ನಾಟಕ ರಾಜ್ಯದ್ಯಾಂತ ವಿಸ್ತರಣೆ ಮಾಡಲು ಪ್ರೋತ್ಸಾಹ ನೀಡುವುದು.
3. ಕರ್ನಾಟಕ ರಾಜ್ಯದ ಬೆಂಗಳೂರು- ಮುಂಬೈ ಎಕಾನಮಿಕ್ ಕಾರಿಡಾರ್, ತುಮಕೂರು ಜಿಲ್ಲೆಯ ವಸಂತಾನರಸಾಪುರದ, ತುಮಕೂರು ಇಂಡಸ್ಟ್ರಿಯಲ್ ನೋಡ್ನ ಸುಮಾರು 12500 ಕೈಗಾರಿಕಾ ಪ್ರದೇಶದಲ್ಲಿ ಉದ್ದಿಮೆ ಆರಂಭಿಸಲು ಪ್ರೋತ್ಸಾಹ ನೀಡುವುದು.
4. ಕರ್ನಾಟಕ ರಾಜ್ಯದ ಬೆಂಗಳೂರು- ಮುಂಬೈ ಎಕಾನಮಿಕ್ ಕಾರಿಡಾರ್ಗೆ ಹೊಂದಿಕೊಂಡಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಾರಿಡಾರ್ ಗೆ ಕೇವಲ ಒಂದು ಕೀಮೀ ದೂದಲ್ಲಿ ಶಕ್ತಿಪೀಠ ಕ್ಯಾಂಪಸ್ ಆವರಣದಲ್ಲಿ, ಭಾರತ ದೇಶದ ಪ್ರತಿ ರಾಜ್ಯಕ್ಕೊಂದು ನಿವೇಶನ ಪಡೆದು ಅಧ್ಯಯನ ಕೇಂದ್ರ ಸ್ಥಾಪಿಸಲು ಪ್ರೋತ್ಸಾಹ ನೀಡುವುದು.
5. ವಿಶ್ವದ 108 ಶಕ್ತಿಪೀಠಗಳ ಕ್ಷೇತ್ರಗಳಲ್ಲಿ ಪಂಚವಟಿ ಗಿಡಹಾಕಲು ವೃಕ್ಷ ಆಂದೋಲನ ಕೈಗೊಳ್ಳಲು, ಈಗಾಗಲೇ ಜ್ಯೋರ್ತಿಲಿಂಗ ಕೇತ್ರಗಳಲ್ಲಿ ವೃಕ್ಷ ಆಂದೋಲನ ಕೈಗೊಂಡಿರುವವರ ಜೊತೆ ಸಂಪರ್ಕ ಸಾಧಿಸಲು ಚಿಂತನೆ ನಡೆಸಲಾಯಿತು.