TUMAKURU:SAHAKTHIPEETA FOUNDATION
ರಾಜ್ಯದ್ಯಾಂತ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರವಾರು, ಹಾಲಿ ಇರುವ ಮತ್ತು ಉದ್ದೇಶಿತ ಕೃಷಿ ಆಶ್ರಮಗಳ ಅಧ್ಯಯನ ವರದಿ ಸಿದ್ಧಪಡಿಸಿ, 2047 ರ ವೇಳೆಗೆ ಕೃಷಿ ಯೋಜನೆಗಳು ಹೇಗಿರಬೇಕು ಎಂಬ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ದಿನಾಂಕ: 18.04.2025 ರಂದು ‘ಕೃಷಿ ಆಶ್ರಮಗಳ ಅಧ್ಯಯನ ಯಾತ್ರೆ’ (ಸೂಕ್ತ ಹೆಸರು ಇಂದು ಸಂಜೆ ಘೋಷಣೆಯಾಗಲಿದೆ. ತಾವೂ ಸಲಹೆ ನೀಡಬಹುದು)
ಇಂದು ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರ, ಶಿರಾ ವಿಧಾನಸಭಾ ಕ್ಷೇತ್ರ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ, ತುಮಕೂರು ನಗರ ವಿಧಾನಸಭಾ ಕ್ಷೇತ್ರ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಾಗುವುದು ಎಂದು ಶ್ರೀ ಬಿ.ಎಂ.ನಾಗಭಾಷಣ ಬೀಮಸಮುದ್ರರವರು ವಿಷಯ ಹಂಚಿಕೊಂಡಿದ್ದಾರೆ. ಮುಂದಿನ ದಿನಾಂಕಗಳ ಪ್ರವಾಸ ಕಾರ್ಯಕ್ರಮಗಳನ್ನು ಒಂದು ವಾರ ಮೊದಲೆ ತಿಳಿಸಲಾಗುವುದು.
ತಂಡದಲ್ಲಿ ಶ್ರೀ ಬಿ.ಎಂ.ನಾಗಭಾಷಣ ಬೀಮಸಮುದ್ರರವರು, ಶ್ರೀ ಜಗನ್ನಾಥ್ರವರು, ಶ್ರೀ ಮಾರುತಿರಾವ್ ರವರು, ಶ್ರೀ ಎಸ್.ಪಿ.ರಾಜೇಶ್ ರವರು ಭಾಗವಹಿಸಲಿದ್ದಾರೆ. ಅವರ ಜೊತೆ ನಾನು ಸಹ ಇರುತ್ತೇನೆ.
1. ಕನ್ನೇರಿ ಶ್ರಿಗಳ ಕನಸಿನ ಮಾಡೆಲ್ ಕೃಷಿ ಆಶ್ರಮ ಮಾಡಲು ಆಸಕ್ತಿ ಇರುವವರು.
2. ಕೃಷಿ ಆಶ್ರಮಗಳ ಜಿಐಎಸ್ ಲೇಯರ್ ಮಾಡಿ, ರೂಟ್ ಮ್ಯಾಪ್ ಸಿದ್ಧಪಡಿಸಲು, ಆಸಕ್ತಿ ಇರುವವರು.
3. ಕೃಷಿ ಆಶ್ರಮಗಳ ವೆಬ್ಸೈಟ್ ಮಾಡಿ ನಿರ್ವಹಣೆ ಮಾಡಲು ಆಸಕ್ತಿ ಇರುವವರು.
4. ಕೃಷಿ ಆಶ್ರಮಗಳ ಅಧ್ಯಯನ ವರದಿಗಳ ಆಧಾರದ ಮೇಲೆ ಪ್ರಸ್ತಾವನೆ ಸಿದ್ಧಪಡಿಸಲು ಆಸಕ್ತಿ ಇರುವವರು.
5. ಕೃಷಿ ಆಶ್ರಮಗಳ ಸೋಶಿಯಲ್ ಮಿಡಿಯಾ ನಿರ್ವಹಣೆ ಮಾಡಲು ಆಸಕ್ತಿ ಇರುವವರು.
6. 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಆಶ್ರಮಗಳ ಸಂಚಾಲಕರಾಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು.
7. 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಆಶ್ರಮಗಳ ಪ್ರಥಮ ಸಭೆ ಆಯೋಜಿಸಲು ಕಾರ್ಯನಿರ್ವಹಿಸಲು ಆಸಕ್ತಿ ಇರುವವರು.
8. ಕೃಷಿ ಆಶ್ರಮಗಳಲ್ಲಿ ತಮ್ಮ ಅನುಭವದ ಕಾಮಗಾರಿಗಳ ಪರಿಣಿತಿ ಆಧಾರದ ಮೇಲೆ ಸೇವೆ ಸಲ್ಲಿಸುವವರು.
9. ಕೃಷಿ ಆಶ್ರಮಗಳಲ್ಲಿ ಒಂದು ನಿರ್ಧಿಷ್ಟ ಬೆಳೆವಾರು ಮ್ಯೂಸಿಯಂ ಸ್ಥಾಪಿಸಲು, ಸಂಶೋಧನೆ ಮಾಡಲು, ಸ್ಟಾಟ್ ಅಫ್ ಮಾಡಲು, ಪ್ರಾತ್ಯಾಕ್ಷಿಕೆ ಮಾಡಲು ಆಸಕ್ತಿ ಇರುವವರು.
ಶ್ರೀ ಬಿ.ಎಂ.ನಾಗಭಾಷಣ ಬೀಮಸಮುದ್ರರವರನ್ನು ಡಿಜಿಟಲ್ ಸಂಪರ್ಕ ಮಾಡುವುದು ಸೂಕ್ತವಾಗಿದೆ. ಇಂದಿನ ಪ್ರವಾಸ ಸಂದರ್ಭದಲ್ಲಿ, ಈ ಮೇಲ್ಕಂಡ 9 ಅಂಶಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಿ, ಯಾವ ಅಂಶಗಳಿಗೆ ಆಧ್ಯತೆ ನೀಡಬೇಕು ಅಥವಾ ಇನ್ನೂ ಯಾವ ಅಂಶಗಳನ್ನು ಸೇರ್ಪಡೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುವುದು.
– ಕುಂದರನಹಳ್ಳಿ ರಮೇಶ್, ನಂಬರ್ ಒನ್ ಕರ್ನಾಟಕ @ 2047 ಕನಸುಗಾರ.