TUMAKURU:SHAKTHIPEETA FOUNDATION
ಒಬ್ಬ ವ್ಯಕ್ತಿ ನನ್ನೊಂದಿಗೆ ಮಾತನಾಡುವಾಗ, ಕೃಷಿ ಆಶ್ರಮಗಳ ಅನುಭವಗಳನ್ನು ಹಂಚಿಕೊಳ್ಳಲು ಒಂದು ಡಿಜಿಟಲ್ ಪ್ಲಾಟ್ ಫಾರಂ ಮಾಡಲು ನನಗೆ ಇಚ್ಚೆ ಇದೆ. ನಮ್ಮದೊಂದು ಚಾರಿಟಬಲ್ ಫೌಂಡೇಷನ್ ಇದೆ. ಆ ಮೂಲಕ ನಾವೇ ಉಚಿತವಾಗಿ ಅರಂಭಿಸಲು ಸಿದ್ದರಿದ್ದೇವೆ ಎಂದು ವಿಷಯ ಹಂಚಿಕೊಂಡರು.
ಈ ಬಗ್ಗೆ ಕೃಷಿ ಆಶ್ರಮಗಳ ಪಿತಾಮಹಾರೊಂದಿಗೆ ಸಮಾಲೋಚನೆ ಮಾಡಿ, ಒಂದು ಎಂ.ಓ.ಯು ಮಾಡಿಕೊಂಡು ಮುಂದುವರೆಯಲು ಸಲಹೆ ನೀಡಲಾಗಿದೆ.
1. ಉಚಿತ ಎಂದರೆ ಭಯ ?
2. ಉಚಿತ ಎಂದರೆ ಅಕೌಂಟಬಿಲಿಟಿ ಇಲ್ಲ.
3. ಉಚಿತ ಎಂದರೆ ಯಾವುದೋ ಹಿಡನ್ ಅಜೆಂಡಾ ಇರಬಹುದು ಎಂಬ ಅನುಮಾನ.
4. ತಿಪ್ಪೆಗೆ ಎಸೆದರೂ ಲೆಕ್ಕ ಬೇಕು. ಒಂದು ವೇಳೆ ಉಚಿತಕ್ಕೆ ಒಪ್ಪಿಗೆ ನೀಡಿದರೂ ಎಂ.ಓ.ಯು ಬೇಕು, ಅದಕ್ಕೆ ಕನ್ನೇರಿ ಶ್ರಿಗಳ ಒಪ್ಪಿಗೆಯೊಂದಿಗೆ ಸಹಿಯೂ ಇರಬೇಕು.
5. ಯಾರೇ ಆಗಲಿ ಸೇವೆಗೆ ತಕ್ಕ ಸೇವಾ ಶುಲ್ಕ ಪಡೆಯಬೇಕು. ಉತ್ತಮ ಗುಣಮಟ್ಟದ ಸೇವೆಯನ್ನು, ಕಾಲಮಿತಿಯೊಳಗೆ ನೀಡುವುದು ಸೂಕ್ತವಾಗಿದೆ.
ಈ ಹಿನ್ನಲೆಯಲ್ಲಿ ಎಲ್ಲರೂ ಒಪ್ಪುವ ರೀತಿಯಲ್ಲಿ ಮುಂದುವರೆಯುವುದು ಸೂಕ್ತವಾಗಿದೆ. ಅದ್ದರಿಂದ ತಮ್ಮ ತಮ್ಮ ಕೃಷಿ ಆಶ್ರಮಗಳ ಕಥೆಯನ್ನು ಬರೆಯಲು ಆರಂಭಿಸಿ, ಶೀಘ್ರದಲ್ಲಿ ಒಂದು ರೂಪುರೇಷೆ ಸಿದ್ಧಪಡಿಸಿ, ಒಂದು ಟೆಂಪ್ಲೇಟ್ ಸಿದ್ಧಪಡಿಸಿ, ಡಿಜಿಟಲ್ ಪ್ಲಾಟ್ ಫಾರಂ ಮಾಡುವುದು ಸೂಕ್ತವಾಗಿದೆ.
ಆಸಕ್ತಿ ಇರುವವರು ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರನ್ನು ಡಿಜಿಟಲ್ ಸಂಪರ್ಕಿಸಿ.