1st June 2025
Share

TUMAKURU:SHAKTHIPEETA FOUNDATION

  ರಾಜ್ಯದ್ಯಾಂತ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರವಾರು, ಹಾಲಿ ಇರುವ ಮತ್ತು ಉದ್ದೇಶಿತ ಕೃಷಿ ಆಶ್ರಮಗಳ ಅಧ್ಯಯನ ವರದಿ ಸಿದ್ಧಪಡಿಸಿ, 2047 ರ ವೇಳೆಗೆ ಕೃಷಿ ಯೋಜನೆಗಳು ಹೇಗಿರಬೇಕು ಎಂಬ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ದಿನಾಂಕ: 30.04.2025 ಮತ್ತು 01.05.2025 ರಂದು ಎರಡು ದಿವಸಗಳ ಕಾಲ ಎರಡನೇ ಹಂತದ ‘ಕೃಷಿ ಆಶ್ರಮಗಳ ಅಧ್ಯಯನ ಪ್ರವಾಸ’ ಆರಂಭವಾಗಲಿದೆ.

ಮೊದಲನೇ ಹಂತದಲ್ಲಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ಕೆಲವು ಕೃಷಿ ಆಶ್ರಮಗಳು ಮತ್ತು ನದಿ ಹುಟ್ಟುವ ಸ್ಥಳಗಳಿಗೆ ಭೇಟಿ ನೀಡಲಾಗಿತ್ತು.

ಎರಡನೇ ಹಂತದಲ್ಲಿ ಮೈಸೂರಿಗೆ ಹೋಗುವ ಮಾರ್ಗದಲ್ಲಿನ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮಾರ್ಗದ ಅಕ್ಕ ಪಕ್ಕ ಇರುವ ಕೃಷಿ ಆಶ್ರಮಗಳಿಗೆ ಭೇಟಿ ನೀಡಲು  ಶ್ರೀ ಬಿ.ಎಂ.ನಾಗಭಾಷಣ ಬೀಮಸಮುದ್ರರವರು, ಶ್ರೀ ಮಾರುತಿರಾವ್ ರವರು  ಮತ್ತು ಅವರ ತಂಡ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸಲಿದ್ದಾರೆ. ಆಸಕ್ತರು ಅವರನ್ನು ಸಂಪರ್ಕಿಸಲು ಮನವಿ.

ದಿನಾಂಕ:30.04.2025 ರೊಳಗೆ ಗ್ರೂಪ್‍ನ ಪ್ರತಿಯೊಬ್ಬ ಸದಸ್ಯರು, ಹೊಸದಾಗಿ ಕೃಷಿ ಆಶ್ರಮ ಸ್ಥಾಪಿಸಲು ಆಸಕ್ತಿ ಇರುವ ಕನಿಷ್ಠ 3 ಜನ ರೈತರನ್ನು ಸೇರ್ಪಡೆ ಮಾಡಲು ಮನವಿ.