1st June 2025
Share

TUMAKURU:SHAKTHIPEETA FOUNDATION

ದಿನಾಂಕ: 04.05.2025 ರಂದು ತುಮಕೂರಿನ ಶಕ್ತಿ ಭವನದಲ್ಲಿ ನಡೆಯುವ ಕಾರ್ಯಕ್ರಮಗಳ ಹೊಣೆಗಾರಿಕೆ.

1.         1008 ಕೃಷಿ ಆಶ್ರಮಗಳ ಸಮಾಲೋಚನಾ ಸಭೆಯ ಸಂಪೂರ್ಣ ಹೊಣೆಗಾರಿಕೆ ಕೃಷಿ ಆಶ್ರಮಗಳ ಹರಿಕಾರ ಶ್ರೀ ಬಿ.ಎಂ.ನಾಗಭೂಷಣ್ ರವರದ್ದಾಗಿರುತ್ತದೆ.  ರಾಜ್ಯದಲ್ಲಿ ಯಾವುದೇ ಕೃಷಿ ಆಶ್ರಮದಲ್ಲಿ ರಾಜ್ಯ ಮಟ್ಟದ ಸಭೆ ನಡೆಸಿದಾಗ ಅವರ ಮಾರ್ಗದರ್ಶನ ಪಡೆಯಲೇ ಬೇಕು.

2.         ಕಾರ್ಯಕ್ರಮದ  ಶಿಸ್ತುಗಾಗಿ ‘5 ಎಸ್ ಕಾರ್ಯಕ್ರಮ ಪ್ರತಿಯೊಂದು ಕೃಷಿ ಆಶ್ರಮದ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳ ಬೇಕು. . (ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ  5 ಎಸ್ ತಜ್ಞರಾದ ಬೆಂಗಳೂರಿನ ಶ್ರೀ ಸಿದ್ಧಗಂಗಪ್ಪನವರು 9343777577)

3.         1008 ಕೃಷಿ ಆಶ್ರಮಗಳು ಸಹ, ತಮ್ಮ ತಮ್ಮ ಕೃಷಿ ಆಶ್ರಮಗಳಲ್ಲಿ  ಒಂದೊಂದು ಬೆಳೆಯನ್ನು ಆಯ್ಕೆ ಮಾಡಿಕೊಳ್ಳ ಬೇಕಿದೆ. ಪಂಚವಟಿ ಗಿಡ ಬೆಳೆಸಬೇಕಿದೆ. ವಿವಿಧ ವನಗಳನ್ನು ನಿರ್ಮಾಣ ಮಾಡಬೇಕಿದೆ. (ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಪರಿಸರ ತಜ್ಷರಾದ ಶ್ರೀ ಜಗನ್ನಾಥ್ ರವರು  9206931326)

4.         ಕರ್ನಾಟಕ ರಾಜ್ಯದ್ಯಾಂತ 31 ಜಿಲ್ಲೆಗಳ ಕೃಷಿ ಆಶ್ರಮದ 31 ಜನ ಮತ್ತು ಇತರೆ ಪರಿಣಿತರು ಸೇರಿ 50 ಜನರಿಗೆ ಬಹಿರಂಗ ಮುಕ್ತ ಆಹ್ವಾನ ನೀಡಲಾಗಿದೆ. ಆಗಮಿಸುವವರು ಮೊದಲೇ ಉಚಿತವಾಗಿ ನೋಂದಾಯಿಸಿಕೊಳ್ಳ ಬೇಕು. (ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಮಣ್ಣು ಸಂಶೋಧಕರಾದ ಶ್ರೀ ಮಾರುತಿರಾವ್ ರವರು 9945111097)

5.         ರಾಜ್ಯಾಧ್ಯಂತ ಕೃಷಿ ಆಶ್ರಮಗಳಲ್ಲಿ ಸಿದ್ಧಪಡಿಸುವ ಉತ್ಪನ್ನಗಳೊಂದಿಗೆಗಿನ ವಿವಿಧ ಜ್ಯೂಸ್, ಉಪಹಾರ, ಸ್ನಾಕ್ಸ್ ಸರಬರಾಜು ಮಾಡುವವರು  ದಿನಾಂಕ:30.04.2025 ರೊಳಗೆ ಮೆನುವಿನೊಂದಿಗೆ ಕೊಟೇಷನ್ ಕಳುಹಿಸಿ.ಆರ್ಡರ್ ಖಚಿತ ಮಾಡಿಕೊಳ್ಳಿ. (ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಹಾವೇರಿ ಜಿಲ್ಲೆಯ ಪುಣ್ಯಕೋಟಿ ಕೃಷಿ ಆಶ್ರಮದ ಶ್ರೀ ಈರಣ್ಣನವರು-9902981651)

6.         ಶಕ್ತಿಭವನ ದಲ್ಲಿ ಸುಮಾರು 50 ಜನರು ಕುಳಿತುಕೊಳ್ಳಲು ಅವಕಾಶವಿದೆ. ಒಂದು ವೇಳೆ ಹೆಚ್ಚಿಗೆ ನೊಂದಾಯಿಸಿಕೊಂಡಲ್ಲಿ ಕಟ್ಟಡದ ಮುಂಭಾಗದಲ್ಲಿ ಹೊಂಗೆಯ ಮರದ ನೆರಳಿನಲ್ಲಿ ಕುಳಿತು ಕೊಳ್ಳಬಹುದು.

7.         ಶಕ್ತಿಭವನ ಹೊಸದಾಗಿ ನಿರ್ಮಾಣ ಮಾಡಿರುವ ಮಾದರಿ ‘ನಾಲೇಡ್ಜ್ ಬ್ಯಾಂಕ್ @ 2047’ ಕಟ್ಟಡ,  ಕಟ್ಟಡದಲ್ಲಿ ಎಲ್ಲೇಲ್ಲಿ ಏನೇನು ಹೇಗೆ ಜೋಡಣೆ ಮಾಡಬೇಕು ಎಂಬ ಬಗ್ಗೆ ಬೀದರ್ ಜಿಲ್ಲೆಯ ಶ್ರೀ ವನಲೋಕ ಸಂತೋಷ್ ರವರ ತಂಡ ಅಂದೇ ವರದಿ ನೀಡಲಿದ್ದಾರೆ. ಸಭೆಯ ಸಲಹೆ ಪಡೆಯಲಾಗುವುದು.

8.         ಶಕ್ತಿಭವನ ‘ಫಾರ್ಮರ್ –1’ ಅಥವಾ ‘ಅಗ್ರಿಕಲ್ಚರ್ @ 2047’  ಲೈವ್ ಸಂಶೋಧನೆಗೆ ಪ್ರಮುಖ ಪಾತ್ರ ವಹಿಸಲಿದೆ. ವಿಶ್ವದ ಎಲ್ಲಾ ದೇಶಗಳ ಜನರು ಸಹ ಇಲ್ಲಿಗೆ ಆಗಮಿಸಿ ಕೃಷಿ ಆಶ್ರಮಗಳ ಜೊತೆ ಒನ್ ಟು ಒನ್ ಚರ್ಚೆ ಮಾಡಲಿದ್ದಾರೆ.ಇದೊಂದು ಕೋ ವರ್ಕಿಂಗ್ ಸ್ಪೇಸ್ ಆಗಿ ಕಾರ್ಯನಿರ್ವಹಿಸಲಿದೆ. (ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ತುಮಕೂರು ಸ್ಟಾಟ್ ಅಫ್ – ಶ್ರೀ ಸುಹೃತ್ ಜಿ.ಉಜ್ಜನಿ ರವರು 8660946945).

9.         ‘ಮಾದರಿ ಕೃಷಿ ಆಶ್ರಮ ಕ್ಕೆ ಯೋಜನಾವಾರು ಸಲಹಾಗಾರರಿಗೆ ಸೇವೆ ಸಲ್ಲಿಸುವವರು, ತಮ್ಮ ಅನುಭವ, ಸೇವೆ, ಶುಲ್ಕ ಇತ್ಯಾದಿ ವಿವರಗಳೊಂದಿಗೆ ನೊಂದಾಯಿಸಿಕೊಳ್ಳ ಬಹುದು. (ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಕೃಷಿ ಆಶ್ರಮದ ಶ್ರೀ ಎಸ್.ಪಿ. ರಾಜೇಶ್ ರವರು – 9845979139 ).

ಭಾಗವಹಿಸುವವರು ಯಾವುದಾದರೂ ಕರಳಕಂಡ ಅಥವಾ ಇನ್ನೂ ಯಾವುದಾದರೂ ಅಂಶ ಇದ್ದಲ್ಲಿ, ಹೊಣೆಗಾರಿಕೆ ಪಡೆಯುವುದಾದರೆ ವಿಷಯ ಹಂಚಿಕೊಳ್ಳ ಬಹುದು.

1.         ಭಾಗವಹಿಸುವವರಿಗೆ ಭಾಗವಹಿಸುವಿಕೆ ಸರ್ಟಿಫೀಕೇಟ್ ವಿತರಣೆ.

2.         ಕಾರ್ಯಕ್ರಮದ ಯೂ ಟ್ಯೂಬ್ ಎಪಿಸೋಡ್ 

3.         ಕಾರ್ಯಕ್ರಮದ ಫೋಟೋ

4.         ಕಾರ್ಯಕ್ರಮದ ವರದಿ

5.         ಭಾಗವಹಿಸುವವರ ಅತಿಥಿ ಸತ್ಕಾರ.

6.         ಭಾಗವಹಿಸುವವರು ತಮ್ಮ ಅನುಭವಗಳ ಲಿಖಿತ ವರದಿ ದಾಖಲೆಗಳ ಸಂಗ್ರಹ.

7.         ರಾಜ್ಯಾದ್ಯಾಂತ 31 ಜಿಲ್ಲೆಗಳ ಆಹ್ವಾನಿತರಿಗೆ ಕರೆ ಮಾಡುವುದು.

8.         ಹೊಸದಾಗಿ ಕೃಷಿ ಆಶ್ರಮ ತೆರೆಯುವ 3 ಜನ ಸದಸ್ಯರನ್ನು ಸೇರ್ಪಡೆ ಮಾಡಲು ಕೃಷಿ ಆಶ್ರಮದ ವಾಟ್ಸ್ ಅಫ್ ಗ್ರೂಪ್‍ನ  ಎಲ್ಲಾ ಸದಸ್ಯರಿಗೆ ಕರೆ ಮಾಡಿ ಮನವಿ ಮಾಡುವುದು.

9.         ಕೃಷಿ ಆಶ್ರಮದ ವಾಟ್ಸ್ ಅಫ್ ಗ್ರೂಪ್‍ನ  ಎಲ್ಲಾ ಸದಸ್ಯರಿಗೆ ಕರೆ ಮಾಡಿ ವಿಧಾನಸಭಾ ಕ್ಷೇತ್ರವಾರು, ವಿಳಾಸ, ನಿರ್ಧಿಷ್ಟ ಬೆಳೆ ಪಟ್ಟಿ ಮಾಡುವುದು.

ವಿಶೇಷ ಸೂಚನೆ : ಶಕ್ತಿಭವನದಲ್ಲಿ ಒಂದು ಕುಟುಂಬ ಕಾರ್ಯನಿರ್ವಹಿಸಲಿದೆ. ಅವರು ರಾಜ್ಯಾದ್ಯಾಂತ ಕೃಷಿ ಆಶ್ರಮಗಳಲ್ಲಿ ಸಿದ್ಧಪಡಿಸುವ, ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ, ಕನಿಷ್ಠ 500 ಮನೆಗಳ ಹೊಣೆಗಾರಿಕೆ ಪಡೆಯಲಿದ್ದಾರೆ. ಆದ್ದರಿಂದ ಕೃಷಿ ಆಶ್ರಮಗಳು ಉತ್ಪನ್ನ ಮಾಡುವ ಶ್ಯಾಂಪಲ್ ತಂದು ಪ್ರದರ್ಶನ ಮಾಡಬಹುದು, ನಿಮ್ಮ ಉತ್ಪನ್ನಗಳನ್ನು ನೇರವಾಗಿ ತಲುಪಿಸಿದರೆ, ಅವರಿಗೆ ಎಷ್ಟು ಸೇವಾ ಶುಲ್ಕ ನೀಡುತ್ತೀರಿ, ಉತ್ಪನ್ನಗಳನ್ನು ತುಮಕೂರಿಗೆ ಹೇಗೆ ಸರಬರಾಜು ಮಾಡುತ್ತೀರಿ ಎಂಬ ಬಗ್ಗೆ ವಿವರಗಳೊಂದಿಗೆ ಬನ್ನಿ (ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ತುಮಕೂರು ಜಿಲ್ಲೆಯ ಶ್ರೀ ಮಧು ಶೇಖರ್- 9482107724).