TUMAKURU:SHAKTHIPEETA FOUNDATION
ಇದೂವರೆಗೂ ಅನಧಿಕೃತವಾಗಿ 7 ಜಿಲ್ಲೆಗಳ ಮತ್ತು ಅಧಿಕೃತವಾಗಿ 4 ಜಿಲ್ಲೆಗಳಲ್ಲಿ ಕೃಷಿ ಆಶ್ರಮಗಳ ಅಧ್ಯಯನ ಪ್ರವಾಸದಲ್ಲಿ, ನನಗೆ ಆದ ಅನುಭವ ಕರ್ನಾಟಕ ರಾಜ್ಯದಲ್ಲಿ ‘ಮುಂದೊಂದು ದಿನ ಕೃಷಿ ಆಶ್ರಮಗಳ ಕ್ರಾಂತಿ’ ನಡೆಯಲಿದೆ.
ಕೃಷಿ ಆಶ್ರಮ ಯಾತ್ರೆಯಲ್ಲಿ ಬರುವವರು ಸಾವಿರಾರು ಜನ, ಹೋಗುವವರು ನೂರಾರು ಜನ ಎಲ್ಲದಕ್ಕೂ ಉದಾಸೀನವೇ ಮದ್ದು. ಈ ಮಾತು ಹೇಳಿದವರು ಕನ್ನೇರಿ ಶ್ರೀಗಳು. ಕನ್ನೇರಿ ಮಠದಲ್ಲಿನ ಸಂಕಲ್ಪಯಾತ್ರೆಯಲ್ಲಿ ನಿರ್ಣಯ ಕೈಗೊಂಡಂತೆ ಕೃಷಿ ಆಶ್ರಮ ಮಾಗದರ್ಶಿ ಸೂತ್ರದ ಪ್ರಥಮ ಸಮಾಲೋಚನಾ ಸಭೆ, ತುಮಕೂರಿನ ನಮ್ಮ ಶಕ್ತಿಭವನದಲ್ಲಿ ದಿನಾಂಕ:04.05.2025 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರಿಗೂ ನಡೆಯಲಿದೆ.
ಕೃಷಿ ಆಶ್ರಮಗಳ ತಜ್ಞ ಶ್ರೀ ಬಿ.ಎಂ.ನಾಗಭೂಷಣ್ ಭೀಮಸಮುದ್ರ ಮತ್ತು ಅವರ ತಂಡ. ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಕೃಷಿ ಆಶ್ರಮಗಳ ಪ್ರಮುಖರಿಗೆ ಡಿಜಿಟಲ್ ಆಹ್ವಾನ ನೀಡಿದ್ದಾರೆ, ಈ ಸಮಾಲೋಚನಾ ಸಭೆ ರಾಜ್ಯ ಮಟ್ಟದ್ದಾಗಿದೆ.
1008 ಕೃಷಿ ಆಶ್ರಮಗಳ ಗ್ರೂಪ್ನಲ್ಲಿ 362 ಜನ ಸದಸ್ಯರು ಇದ್ದಾರೆ, ಸಭೆಯಲ್ಲಿ ಭಾಗವಹಿಸಲು ಇಚ್ಚಿಸಿದಲ್ಲಿ ಇಂದು ಸಂಜೆಯೊಳಗೆ 9886030272 ಗೆ ಖಾತ್ರಿ ಪಡಿಸಿ. ದೂರದಿಂದ ಬರುವವರೆಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಹಾಸಲು ಹೊದಿಯಲು ಬ್ಯಾಗ್ನಲ್ಲಿ ಇರಲಿ.
ಈಗಾಗಲೇ ಪ್ರಕಟಿಸಿರುವ 134 ಅಂಶಗಳ ಜೊತೆಗೆ ನಿಮ್ಮ ನಿಮ್ಮ ಐಡಿಯಾದೊಂದಿಗೆ ಬನ್ನಿ, ಕರಡು ಪ್ರತಿ ಸಿದ್ಧಪಡಿಸಿ, ದಿನಾಂಕ:04.05.2026 ರೊಳಗೆ 1008 ಕೃಷಿ ಆಶ್ರಮಗಳ ರಚನೆ ಮಾಡಿ, ಎಲ್ಲರ ಒಪ್ಪಿಗೆಯೊಂದಿಗೆ ಮಾರ್ಗದರ್ಶಿ ಸೂತ್ರದ ಕೈಪಿಡಿಯನ್ನು ಬಿಡುಗಡೆ ಮಾಡೋಣ ? ತಾವೂ ಏನಂತೀರಿ ?