1st June 2025
Share

TUMAKURU:SHAKTHIPEETA FOUNDATION

ನದಿ ನೀರಿನ ಸಾಮಾಜಿಕ ನ್ಯಾಯಕ್ಕಾಗಿ, ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ಘೋಷಣೆಯೊಂದಿಗೆ ತುಮಕೂರು ವಿಶ್ವ ವಿದ್ಯಾನಿಲಯ ಹಾಗೂ ಅಭಿವೃದ್ಧಿ ರೆವ್ಯೂಲ್ಯೂಷನ್ ಫೋರಂ ಸಹಭಾಗಿತ್ವದಲ್ಲಿ  ಸ್ಥಾಪಿತವಾಗಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ವತಿಯಿಂದ ಜಲಗ್ರಂಥ’ ರಚಿಸಲು ದಿನಾಂಕ:02.05.2025 ರಂದು ತುಮಕೂರು ವಿಶ್ವ ವಿದ್ಯಾನಿಲಯ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವಲುರªರÀ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸ್ಥಾಪಿಸಲು, ಕಳೆದ 8 ವರ್ಷದಲ್ಲಿ ನಡೆದ ಪ್ರಥಮ ಸಭೆ.

  ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡಿ, ಪ್ರತಿಯೊಂದು ನದಿ ಹುಟ್ಟು, ಹರಿಯುವ, ಡ್ಯಾಂಗಳನ್ನು ನಿರ್ಮಾಣ ಮಾಡಿರುವ ಸ್ಥಳ ವೀಕ್ಷಣೆ ಜೊತೆಗೆ,  ವಿವಿಧ ವಿಶ್ವ  ವಿದ್ಯಾನಿಲಯಗಳು, ಸಂಘಸಂಸ್ಥೆಗಳು, ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು,ನೀರಾವರಿ ಹೋರಾಟ ಸಮಿತಿಗಳು, 1008 ಕೃಷಿ ಆಶ್ರಮಗಳು, ನಿವೃತ್ತ ಇಂಜಿನಿಯರ್, ಚುನಾಯಿತ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ಮಾಡಲು ದಿನಾಂಕ:04.05.2025 ರಂದು ಶಕ್ತಿಭವನದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯುವ ಸಭೆಯಲ್ಲಿ  ರೂಪುರೇಷೆ ನಿರ್ಧರಿಸಲಾಗುವುದು.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ದಿನಾಂಕ:04.05.2025 ರಂದು 25 ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಇಡೀ ವರ್ಷ ಪೂರ್ತಿ ರಾಜ್ಯಾಧ್ಯಾಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆಸಕ್ತರು ಸಭೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ.

ಕುಂದರನಹಳ್ಳಿ ರಮೇಶ್ – ಅಧ್ಯಕ್ಷರು ಅಭಿವೃದ್ಧಿ ರೆವೂಲ್ಯೂಷನ್ ಫೋರಂ.