TUMAKURU:SHAKTHIPEETA FOUNDATION
ತುಮಕೂರಿನ ಶಕ್ತಿಭವನದಲ್ಲಿ ಇಂದು 04.05.2025 ನೇ ಭಾನುವಾರ ಬೆಳೆಗ್ಗೆ 8.30 ರಿಂದ, 1008 ಕೃಷಿ ಆಶ್ರಮಗಳ ಮಾರ್ಗದರ್ಶಿ ಕೈಪಿಡಿ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಸಭೆಯಲ್ಲಿ ವಿಜಯನಗರ ಜಿಲ್ಲೆಯ ಬೆಲವತ್ತಹಣ್ಣು ತಜ್ಞರಾದ ಶ್ರೀ ವಿಶ್ವೇಶ್ವರಸಜ್ಜನ್ರವರು, ಯಾದಗಿರಿ ಜಿಲ್ಲೆಯ ಮಣ್ಣು ತಜ್ಞರಾದ ಶ್ರೀ ಮಾರುತಿರಾವ್ ರವರು, ಚಿತ್ರದುರ್ಗ ಜಿಲ್ಲೆಯ ಶ್ರೀ ರವಿತೇಜರವರು ಮತ್ತು ತುಮಕೂರು ಜಿಲ್ಲೆಯ ಶ್ರೀ ಮಧುಶೇಖರ್ ರವರು ಪಾಲ್ಗೊಂಡಿದ್ದಾರೆ.

ಅಧಿಕೃತ ಸಭೆ 10 ಘಂಟೆಗೆ ಆರಂಭವಾಕಿದ್ದರೂ, ಮೊದಲು ಬಂದವರ ಸಮಯ ಹಾಳಾಗಬಾರದು ಎಂಬ ದೃಷ್ಠಿಯಿಂದ ಬೆಲವತ್ತ ಹಣ್ಣಿನ ವೆಲ್ಕಮ್ ಜ್ಯೂಸ್ನೊಂದಿಗೆ, ಅನೌಪಚಾರಿಕ ಚರ್ಚೆ ಆರಂಭವಾಗಿದೆ.
ಶಕ್ತಿಭವನ ನಿರ್ಮಾಣವಾದ ನಂತರ ದಿನಾಂಕ:10.05.2024 ರಂದು ವಿಶೇಷ ಪೂಜೆಯೊಂದಿಗೆ ಆರಂಭ ಮಾಡಿದ್ದರೂ, ಇದೂವರೆಗೂ ರಾಜ್ಯ ಮಟ್ಟದ ಯಾವುದೇ ಸಭೆ ಮಾಡಿರಲಿಲ್ಲ. ಈ ಸಭಾಂಗಣಕ್ಕೆ ಹೆಸರು ಸಹ ನಾಮಕರಣ ಮಾಡಿಲ್ಲ.
ಸುಮಾರು 75 ಜನರು ಕುಳಿತು ಚರ್ಚೆ ಮಾಡಬಹುದಾಗಿದೆ. ಇಂದು ಸುಮಾರು 50 ಜನರು ಬರುವ ನೀರಿಕ್ಷೆ ಇದೆ. ಕೃಷಿ ಆಶ್ರಮಗಳ ತಜ್ಞರಾದ ಶ್ರೀ ಬಿ.ಎಂ.ನಾಗಭೂಷಣ್ ರವರು ಎಲ್ಲರಿಗೂ ಡಿಜಿಟಲ್ ಮೂಲಕ ಆಹ್ವಾನ ನೀಡಿದ್ದಾರೆ.
1008 ಕೃಷಿ ಆಶ್ರಮ ವಾಟ್ಸ್ ಅಫ್ ಗ್ರೂಪ್ನಲ್ಲಿ, ರಾಜ್ಯದ್ಯಾಂತ ಕಾಕತಾಳೀಯವಾಗಿ 365 ಜನ ಸದಸ್ಯರು ಇದ್ದಾರೆ. ವರ್ಷದ 365 ದಿವಸಕ್ಕೂ ಒಬ್ಬೊಬ್ಬ ಕೃಷಿ ಸೈನಿಕರ ಪಡೆ ಸಿದ್ಧವಾಗಿದೆ. ನನ್ನ ಪ್ರಕಾರ ಈ ವೇಳೆಗೆ 1008 ಜನರು ಸೇರ್ಪಡೆ ಆಗಬೇಕಿತ್ತು.
ಆದರೇ 1008 ಕೃಷಿ ಆಶ್ರಮ ವಾಟ್ಸ್ ಅಫ್ ಗ್ರೂಪ್ ಸದಸ್ಯರು, ತಲಾ 3 ಜನ ರೈತರನ್ನು ಸೇರ್ಪಡೆ ಮಾಡುವ ಬಹಿರಂಗ ಆಹ್ವಾÀನವನ್ನು ಏಕೋ ಎನೋ ಗಂಭೀರವಾಗಿ ತೆಗೆದು ಕೊಂಡಿಲ್ಲ.
ದಯವಿಟ್ಟು ಎಲ್ಲಾ ಸದಸ್ಯರು ಇಂದಿನಿಂದ ಆಂದೋಲನ ರೂಪದಲ್ಲಿ, ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು, ತಮ್ಮ ಸ್ನೇಹಿತರು, ಸಂಭಂದಿಕರುಗಳು ಕನಿಷ್ಠ 10 ಗುಂಟೆಯಲ್ಲಾದರೂ ಅಥವಾ ಮನೆಯ ತಾರಸಿಯಲ್ಲಾದರೂ, ಉತ್ತಮವಾಗಿ ಸಾವಯವ ಕೃಷಿ ಮಾಡಲು ಆಸಕ್ತಿ ಇರುವವರನ್ನು, ಕನಿಷ್ಠ ಪಕ್ಷ ತಲಾ 3 ಜನ ರೈತರನ್ನು ಗ್ರೂಪ್ಗೆ ಸೇರ್ಪಡೆ ಮಾಡಲು ಮತ್ತೊಮ್ಮೆ ಮನವಿ ಮಾಡಲಾಗಿದೆ.