TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದಲ್ಲಿ 1008 ಕೃಷಿ ಆಶ್ರಮಗಳನ್ನು ಆರಂಭಿಸುವ ಮೂಲಕ, ಕನ್ನೇರಿ ಶ್ರೀಗಳ ಕೃಷಿ ಭಂಡಾರದ ಜ್ಞಾನವನ್ನು ಬಳಸಿಕೊಳ್ಳುತ್ತಿರುವ, ರೈತ ಸಂಶೋಧಕರಿಗೆ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಬೆನ್ನು ತಟ್ಟುವ ಕೆಲಸ ಮಾಡಿದ್ದು ವಿಶೇಷವಾಗಿತ್ತು.
ಅವರು ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ, ರಾಜ್ಯ ಮಟ್ಟದ 1008 ಕೃಷಿ ಆಶ್ರಮಗಳ ಸಮಾಲೋಚನಾ ಸಭೆಯಲ್ಲಿ, ಭಾರತ ದೇಶದ ನದಿ ಪಾತ್ರಗಳ ನಕ್ಷೆಯನ್ನು ಅನಾವರಣ ಮಾಡಿ ಮಾತನಾಡಿದರು.

ರೈತರಿಗೆ ಶಾಶ್ವತ ನೀರು, ಉತ್ತಮ ಬೀಜ, ಸಮಯಪ್ರಜ್ಞೆ, ಅಗತ್ಯ ಮೂಲ ಸೌಕರ್ಯಗಳ ಜೊತೆಗೆ ಉತ್ತಮ ಜ್ಞಾನದ ಅವಶ್ಯಕತೆಯಿದೆ. ಇದಕ್ಕೆ ಪ್ರೋತ್ಸಾಹಿಸಲು ಒಬ್ಬ ಸಂತ ಮುಂದೆ ಬಂದಿರುವುದು ನಿಜಕ್ಕೂ ಮೆಚ್ಚಲೇಬೇಕು.
ಕಳೆದ ಹಲವಾರು ವರ್ಷಗಳಿಂದ ನಾನು ಅವರ ಅನುಯಾಯಿಯಾಗಿದ್ದೇನೆ, ರೈತರ ಬಗ್ಗೆ, ಕೃಷಿ ಬಗ್ಗೆ ಅವರಿಗೆ ಇರುವ ಜ್ಞಾನವನ್ನು ರೈತರು ಮತ್ತು ಸರ್ಕಾರಗಳ ಜಂಟಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಭೂಮಿ ಹೆಜ್ಜೆಗೆ ಒಂದು ಅಂಗ, ವಾತಾವರಣವೂ ವಿಭಿನ್ನವಾಗಿರುತ್ತದೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ಬೆಳೆಗೆ ಯೋಗ್ಯವಾಗಿರುತ್ತದೆ. ಅಂತಹ ಜ್ಞಾನ ಅರಿತು, ಬೇಡಿಕೆಗಳಿಗೆ ಅಗತ್ಯವಾಗಿ ಬೆಳೆ ಬೆಳೆಯುವ ಮಾಹಿತಿಗಳನ್ನು ಕಾಲ ಕಾಲಕ್ಕೆ ರೈತರಿಗೆ ತಲುಪಿಸುವ ಕೆಲಸ ಆಗಬೇಕಿದೆ.
‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಎಂಬ ಘೋಷಣೆಯೊಂದಿಗೆ, ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಿಸಲು, ಉದ್ದೇಶಿತ 1008 ಕೃಷಿ ಆಶ್ರಮಗಳು ಜನಾಂದೋಲನ ರೂಪಿಸಲು ಮುಂದಾಗಲು ಕರೆ ನೀಡಿದರು.
ಈ ವರ್ಷ ಸಂಪೂರ್ಣವಾಗಿ ಶ್ರಮಿಸಿ ಉದ್ದೇಶಿತ ‘ಜಲಗ್ರಂಥ’ ಪೂರ್ಣಗೊಳಿಸಿ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಇರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ, ‘ಕೃಷಿ ಗ್ರಂಥ’ ವನ್ನು ರಚಿಸಲು ರೈತರಿಗೆ ಕರೆ ನೀಡಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೀರಾವರಿ ಮಾಹಿತಿಯನ್ನು ಒಳಗೊಂಡ ನಕ್ಷೆಯನ್ನು ಸಿದ್ಧಪಡಿಸಿ, ಚುನಾಯಿತ ಜನಪ್ರತಿನಿಧಿಗಳ ಕಚೇರಿಗಳಲ್ಲೂ ಪ್ರದರ್ಶನ ಮಾಡುವ ಮೂಲಕ, ಅವರನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಲು ಸಲಹೆ ನೀಡಿದರು.
ನಾನು ಕುಂದರನಹಳ್ಳಿ ರಮೇಶ್ ರವರಿಗೆ ನಿಮ್ಮ ಮೂಲಕ ಹೇಳುವುದಿಷ್ಟೆ, ಮೊದಲು ಜಲಗ್ರಂಥ ಬಿಡುಗಡೆ ಮಾಡಿ, ಎಲ್ಲಾ ರಾಜಕಾರಣಿಗಳಿಗೆ ನೀಡುವ ಕೆಲಸಕ್ಕೆ ಮೊದಲ ಆಧ್ಯತೆ ನೀಡಬೇಕು. ಸಣ್ಣ ಸಣ್ಣ ಮಾತಿಗೆ ಸಿಟ್ಟಾಗಿ, ಮುನಿಸಿಕೊಂಡು, ರಾಜಕಾರಣಿಗಳಿಂದ ದೂರ ಉಳಿದರೆ, ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ,
ರೈತರು, ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ರೂಪುಗೊಂಡ ಯೋಜನೆಗಳಿಗೆ ಹೆಚ್ಚು ಬಲಬರಲಿದೆ. ಕೇಂದ್ರ ಜಲಶಕ್ತಿ ಸಚಿವರಾಗಿ ಶ್ರೀ ವಿ.ಸೋಮಣ್ಣನವರು ಇರುವುದರಿಂದ ನೀರಾವರಿ ಯೋಜನೆಗಳಿಗೆ ಹೆಚ್ಚು ಬಲ ಬರಲಿದೆ. ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ಸಿಂಗ್ ಚೌಹಾಣ್ರವರು ನನ್ನ ಸ್ನೇಹಿತರು , ತಾವು ಸಲ್ಲಿಸುವ ಅಧ್ಯಯನ ವರದಿಯೊಂದಿಗೆ, ಅವರೊಂದಿಗೆ ಚರ್ಚಿಸುವ ಭರವಸೆ ನೀಡಿದರು.
ರಾಜ್ಯಾದ್ಯಾಂತ ಎಲ್ಲಾ ನೀರಾವರಿ ತಜ್ಞರ ವರದಿಯನ್ನು ಒಳಗೊಂಡ ‘ಜಲಗ್ರಂಥ’ವನ್ನು, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ತನ್ನ 25 ನೇ ವಾರ್ಷಿಕ ದಿನದ ವೇಳೆಗೆ ಬಿಡುಗಡೆ ಮಾಡಲು ಮತ್ತು ನಿಖರವಾದ ಮಾಹಿತಿಗಳನ್ನು ತಮ್ಮ, ತಮ್ಮ ವ್ಯಾಪ್ತಿಯ ನೀರಾವರಿ ಹೋರಾಟಗಾರರ, ಸಂಶೋಧಕರ ಜ್ಞಾನವನ್ನು ಹಂಚಿಕೊಳ್ಳಳು 1008 ಕೃಷಿ ಆಶ್ರಮದ ಜ್ಞಾನಿಗಳಿಗೆ ಕರೆ ನೀಡಿದರು.
ಕೃಷಿ ಆಶ್ರಮ ತಜ್ಞ ಶ್ರೀ ಬಿ.ಎಂ.ನಾಗಭೂಷಣ್ ಭೀಮಸಮುದ್ರರವರು, ಕೃಷಿ ಆಶ್ರಮಗಳು ನಡೆದು ಬಂದ ದಾರಿ ಮತ್ತು ಮುನ್ನೋಟಗಳ ಬಗ್ಗೆ ಬಸವರಾಜ್ರವರೊಂದಿಗೆ ಹಂಚಿಕೊಂಡರು. ಗಮನ ಸೆಳೆದರು.
ನೀರಾವರಿ ಸಂಶೋಧಕರಾದ ಶ್ರೀ ಮಲ್ಲೇಶ್, ಶ್ರೀ ಕೃಷ್ಣಮೂರ್ತಿ, ಶ್ರೀ ಸತ್ಯಾನಂದ್, ಶ್ರೀ ಸಿದ್ಧಗಂಗಪ್ಪನವರು ಸೇರಿದಂತೆ, ರಾಜ್ಯಾದ್ಯಾಂತ ಸುಮಾರು 41 ಜನ ರೈತರು ಭಾಗವಹಿಸಿದ್ದರು.