1st June 2025
Share

TUMAKURU:SHAKTHIPEETA FOUNDATION

 ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ, ರಾಜ್ಯ ಮಟ್ಟದ 1008 ಕೃಷಿ ಆಶ್ರಮಗಳ ಸಮಾಲೋಚನಾ ಸಭೆಯಲ್ಲಿ,  ಸುಮಾರು 41 ಜನ ಭಾಗವಹಿಸಿದ್ದರು. ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಈ ಸಭೆ ಸಂಜೆ ಸುಮಾರು 5 ಗಂಟೆಯವರಿಗೂ ನಡೆದಿದೆ.

ರಾಜ್ಯದಲ್ಲಿ 31 ಜಿಲ್ಲೆಗಳಿದ್ದರೂ, ಕೇವಲ 10 ಜಿಲ್ಲೆಯ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು. ತಲಾ 3 ಜನರಂತೆ  ವೇದಿಕೆಯಲ್ಲಿ ಕುಳ್ಳಿರಿಸಿ, ತಲಾ 10 ವಿಷಯಗಳಂತೆ, ಸುಮಾರು 13 ರೌಂಡ್ ಚರ್ಚೆಯಾಗಿದೆ.

ಭಾಗವಹಿಸಿದವರೆಲ್ಲರೂ ಅವರ ಅನುಭವ ಮತ್ತು 133 ಅಂಶಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಅವರು ಮಾತನಾಡಿದ ವಿಷಯಗಳನ್ನು ಟೈಪ್ ಮಾಡಿ ಕಳುಹಿಸಲು, ಈ ಮೂಲಕ ಬಹಿರಂಗ ಮನವಿ ಮಾಡಲಾಗಿದೆ.

ಎಲ್ಲ ರೈತರ ಅಭಿಪ್ರಾಯಗಳನ್ನು ಶಕ್ತಿಪೀಠ ಇ ಪೇಪರ್ ನಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ದಯವಿಟ್ಟು ಸಹಕರಿಸಲು ಭಾಗವಹಿಸಿದ್ದವರಿಗೆ ಬಹಿರಂಗ ಮನವಿ ಮಾಡಲಾಗಿದೆ.

1008 ಕೃಷಿ ಆಶ್ರಮಗಳ ಬಗ್ಗೆ ಕೈಗೊಂಡ ನಿರ್ಣಯಗಳನ್ನು ಕೃಷಿ ಆಶ್ರಮ ತಜ್ಞ ಶ್ರೀ ಬಿ.ಎಂ.ನಾಗಭೂಷಣ್ ಭೀಮಸಮುದ್ರರವರು ಮತ್ತು ಅವರ ತಂಡ ನೀಡಿದ ನಂತರ ಪ್ರಕಟಿಸಲಾಗುವುದು.

ಜೊತೆಗೆ ಈಗಾಗಲೇ ತುಮಕೂರು, ಚಿತ್ರದುರ್ಗ, ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕೃಷಿ ಆಶ್ರಮಗಳ ಅಧ್ಯಯನ ಪ್ರವಾಸವನ್ನು ಹಮ್ಮಿಕೊಂಡಿದ್ದು, ಪ್ರವಾಸದ ಅನುಭವದ ಮಾಹಿತಿಗಳನ್ನು ಸಹ ಹಂಚಿಕೊಳ್ಳಲಾಗುವುದು.

ಮುಂದಿನ 1008 ಕೃಷಿ ಆಶ್ರಮಗಳ ಅಧ್ಯಯನ ಪ್ರವಾ¸, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮತ್ತು ಆಸಕ್ತ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯಲಿದೆ.

ರಾಜ್ಯದ ಯಾವುದಾದರೂ ಒಂದು, ಕೃಷಿ ಆಶ್ರಮದಲ್ಲಿ ಒಂದು ಸಮಾಲೋಚನಾ ಸಭೆ ಆಯೋಜಿಸಿ, 1008 ಕೃಷಿ ಆಶ್ರಮಗಳ ಅಧ್ಯಯನ ಪ್ರವಾ¸ ರೂಪುರೇಷೆ ನಿರ್ಧರಿಸುವುದು ಸೂಕ್ತವಾಗಿದೆ.