TUMAKURU:SHAKTHI PEETA FOUNDATION

ಉದ್ದೇಶಿತ ಶಕ್ತಿಪೀಠ ಕ್ಯಾಂಪಸ್ನಲ್ಲಿ, ಭೂಮಿಯ ಮೇಲೆ ಭಾರತ ನಕ್ಷೆ ಪ್ರಾತ್ಯಕ್ಷಿಕೆ ನಿರ್ಮಾಣ ಮಾಡಿ, ವಿಶ್ವದ 108 ಶಕ್ತಿಪೀಠಗಳ ತಾತ್ಕಾಲಿಕ ಗುರುತು ಮಾಡಲಾಗಿದೆ.(ಗೊಂದಲವಿದೆ ಕೇಂದ್ರ ಸರ್ಕಾರ ಗೇಜಿಟ್ ನೋಟಿಫೀಕೇಷನ್ ಮಾಡಬೇಕಿದೆ)
ಉದ್ಧೇಶಿತ ಭಾರತ ದೇಶದ 30 ನದಿ ಜೋಡಣೆಗಳ ತಾತ್ಕಾಲಿಕ ಪ್ರಾತ್ಯಕ್ಷಿಕೆ ಗುರುತು ಮಾಡಲಾಗಿದೆ.
ಭಾರತ ದೇಶದ 12 ಜ್ಯೋತಿರ್ಲಿಂಗ ತಾತ್ಕಾಲಿಕ ಪ್ರಾತ್ಯಕ್ಷಿಕೆ ಗುರುತು ಮಾಡಲಾಗಿದೆ.
3 ಸಾಯಿಬಾಬಾ ಸೇರಿದಂತೆ, ಭಾರತದ ಹಲವಾರು ಪ್ರಮುಖ ಕೇತ್ರಗಳ ತಾತ್ಕಾಲಿಕ ಪ್ರಾತ್ಯಕ್ಷಿಕೆ ಗುರುತು ಮಾಡಲಾಗಿದೆ.(ಅಂತಿಮವಾಗಿ ಪಟ್ಟಿ ಮಾಡಬೇಕಿದೆ)
ಕೃತಕ ಅರಭ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿ ಪ್ರಾತ್ಯಕ್ಷಿಕೆ ನಿರ್ಮಾಣ ಮಾಡಲಾಗಿದೆ. ಒಂದು ಕೋಟಿ ಲೀಟರ್ ಮಳೆ ನೀರು ಸಂಗ್ರಹವಾಗಲಿದೆ.
472 ಮೀಟರ್ ರಿಂಗ್ ರಸ್ತೆಯ ಆಯುಷ್ ಪಾಥ್ನಲ್ಲಿ ನವಗ್ರಹಗಳ ಮರಗಳು ಅವುಗಳ ಸ್ಥಾನದಲ್ಲಿ ಬೆಳೆಯುತ್ತಿವೆ.
472 ಮೀಟರ್ ರಿಂಗ್ ರಸ್ತೆಯ ಆಯುಷ್ ಪಾಥ್ನಲ್ಲಿ, ರಸ್ತೆಯ ಎರಡು ಕಡೆ ಸೇರಿ ಸುಮಾರು 944 ಮೀಟರ್ ಉದ್ದದಲ್ಲಿ ಹಲವಾರು ಜಾತಿಯ ಮರ, ಬಳ್ಳಿ ಮತ್ತು ಔಷಧಿ ಗಿಡಗಳು ಬೆಳೆಯುತ್ತಿವೆ, ಮರ ಗಣತಿ ಮಾಡಿ ನಾಮಫಲPಗಳನ್ನುÀ ಹಾಕಬೇಕಿದೆ.
ಅಷ್ಟ ದಿಕ್ಕುಗ¼ಲ್ಲೂ ರಸ್ತೆ ನಿರ್ಮಾಣ ಮಾಡಲಾಗಿದೆ. ಅಲ್ಲಿಯೂ ಹಲವಾರು ಗಿಡಗಳು ಬೆಳೆಯುತ್ತಿವೆ.
ಹಾಲಿ ಇರುವ ಎಲ್ಲಾ ಜಾತಿಯ ಗಿಡ, ಮರ, ಬಳ್ಳಿ, ಗೆಡ್ಡೆ ಗೆಣಸು ಇತ್ಯಾಧಿ ಗಣತಿ ಮಾಡಿ, ಇರುವ ಮತ್ತು ಹೊಸದಾಗಿ ಹಾಕುವ ಅಳಿವಿನಂಚಿನಲ್ಲಿರುವ ಪ್ರಭೇಧಗಳು ಸೇರಿದಂತೆ, 1008 ಪ್ರಭೇದಗಳ ಗಿಡ, ಮರ, ಬಳ್ಳಿ, ಗೆಡ್ಡೆ ಗೆಣಸು ಇತ್ಯಾಧಿ ಹಾಕುವ ಕೆಲಸವನ್ನು 2025 ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಕರ್ನಾಟಕ ರಾಜ್ಯದ ಸುಮಾರು 30000 ಗ್ರಾಮಗಳು/ಬಡಾವಣೆಗಳಲ್ಲಿ, ಪತ್ತೆ ಹಚ್ಚುವ/ ಸಿಗುವ ಅಳಿವಿನಂಚಿನಲ್ಲಿರುವ ಪ್ರಭೇಧಗಳನ್ನು ಗುರುತಿಸಿ, ಸಂರಕ್ಷಣೆ ಮಾಡುವ ಕೆಲಸವೂ ನಡೆಯಬೇಕಿದೆ.
ಕನ್ನೇರಿ ಶ್ರೀಗಳ ಮಾರ್ಗದರ್ಶನಲ್ಲಿ, ಕರ್ನಾಟಕ ರಾಜ್ಯದ್ಯಾಂತ ರಚನೆಯಾಗುತ್ತಿರುವ 1008 ಕೃಷಿ ಆಶ್ರಮಗಳು ಕನಿಷ್ಠ ಪಕ್ಷ ಒಂದೊಂದು ಪ್ರಭೇಧಗಳನ್ನು ಗುರುತಿಸಿ, ನಮ್ಮ ಶಕ್ತಿಪೀಠ ಕ್ಯಾಂಪಸ್ನಲ್ಲಿ ಪ್ರಾತ್ಯಕ್ಷಿಕೆಗೆ ಒಂದೆರಡು ಗಿಡಹಾಕಿ, ತಮ್ಮ ತಮ್ಮ ಕೃóಷಿ ಆಶ್ರಮದಲ್ಲಿ, ಆ ಒಂದು ಜಾತಿಯ ಗಿಡದ ಪ್ರಭೇದ/ತಳಿ ಸಂಶೋಧನೆ, ಅಧ್ಯಯನ, ಲೈವ್ ಮ್ಯೂಸಿಯಂ, ಬೆಲೆ ನಿಗಧಿ, ಕೆಮಿಕಲ್ ಕೃಷಿಯಿಂದ ಸಾವಯವ ಕೃಷಿಗೆ ತಗುಲುವ ಖರ್ಚುವೆಚ್ಚಗಳು ಇತ್ಯಾಧಿ ಡಾಟಾ ಬೇಸ್ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸದ ಜೊತೆಗೆ, ಪ್ರಪಂಚದ್ಯಾಂತ ನೂರಾರು ಪ್ರವಾಸಿಗರನ್ನು ತಮ್ಮ ಕೃಷಿ ಆಶ್ರಮಗಳಿಗೆ ಸೆಳೆಯುವ ಕೆಲಸ ಮಾಡುವ ಆಲೋಚನೆಯಿದೆ.
ಯಾವ ಕೃಷಿ ಆಶ್ರಮದವರು, ಯಾವ ಜಾತಿಯ ಗಿಡಗಳನ್ನು ಆಯ್ಕೆ ಮಾಡಿಕೊಳ್ಳತ್ತಾರೋ, ಅದೇ ಜಾತಿಯ ಗಿಡದ ಪಕ್ಕದಲ್ಲಿ, ಅವರ ಕೃಷಿ ಆಶ್ರಮದ ಹೆಸರು, ವಿಳಾಸಗಳನ್ನು ಗಿಡದ ನಾಮಫಲಕದಲ್ಲಿ ಹಾಕಲು ಯೋಚಿಸಲಾಗಿದೆ.
ಇಂದಿನಿಂದ(14.05.2025) 1000 ಪ್ರಭೇದದ ಗಿಡಗಳನ್ನು ಹಾಕುವ ತನಕ, ಯಾವ ಆಶ್ರಮ/ನಾಲೇಡ್ಜಬಲ್ ಪರ್ಸನ್/ ನಾಟಿ ವೈಧ್ಯರು/ಪಾರಂಪರಿಕ ವೈಧ್ಯರು/ಹಕೀಮರು/ ವ್ಯಕ್ತಿ/ಕುಟುಂಬ/ ವಿದ್ಯಾರ್ಥಿ/ ಪರಿಣಿತ ತಜ್ಞರು/ ಇಲಾಖೆಗಳು/ ದಾನಿಗಳು ಸಹಕರಿಸುತ್ತಾರೋ, ಎಲ್ಲವನ್ನೂ ತಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲಾಗುವುದು.
ಕರ್ನಾಟಕ ರಾಜ್ಯದ್ಯಾಂತ ಕೃಷಿ ಆಶ್ರಮಗಳ ಕ್ರಾಂತಿ ಮಾಡೋಣ ಬನ್ನಿ. ನಂಬರ್ ಒನ್ ಕರ್ನಾಟಕ @ 2047 ಪರಿಕಲ್ಪನೆಯ ಜೊತೆ, ಕೇಂದ್ರ ಮತ್ತು ರಾಜ್ಯಸರ್ಕಾರಗಳ ಜೊತೆಗೆ ಕೈಜೋಡಿಸೋಣ.
