26th June 2025
Share

TUMAKURU:SHAKTHIPEETA FOUNDATION

ಚಿತ್ರದುರ್ಗ ಜಿಲ್ಲೆಯ ಭೌಮ್ಯಾಶ್ರಮದ ಶ್ರೀ ರವಿತೇಜರವರು ಕರೆ ಮಾಡಿ, ಸಾರ್ ನೀವೂ PERMACULTURE ಬಗ್ಗೆ ಅಧ್ಯಯನ ಮಾಡಿದ್ದೀರಾ ಎಂದು ಕೇಳಿದರು. ಇಲ್ಲಾ ಗುರುಗಳೇ ನನ್ನ ಮಗ ಈ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ.  ನನಗೂ ಈ ಬಗ್ಗೆ ಕುತೋಹಲವಿದೆ, ಜನರು ಏನೇನು ಹೆಸರು ಇಟ್ಟುಕೊಂಡು ಕೃಷಿಯಲ್ಲಿ ಹೊಸ ಹೊಸ ಅವಿಷ್ಕಾರಗಳನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿಯ ಅಗತ್ಯವಿದೆ.

ಹೊಸದಾಗಿ ಕೃಷಿ ಮಾಡುವವರಿಗೆ ಬಹಳ ಗೊಂದಲ ಮಯವಾಗಿದೆ. ನನ್ನ ಬಳಿ ಕೆಲವರು ವಿಷಯ ಹಂಚಿಕೊಂಡಿದ್ದು ಸಾರ್, ಕೃಷಿ ಇಷ್ಟೊಂದು ದುಬಾರಿನಾ. ರೈತರು ಹೇಗೆ ಜೀವನ ಮಾಡುತ್ತಾರೆ ಎಂದಾಗ, ನಾನು ನೀವೂ ಏಕೆ ಹೀಗೆ ಹೇಳುತ್ತೀರಿ ಎಂದಾಗ, ಅವರ ತಂಡದ ಬಳಿ ಹಣ ಲೂಟಿ ಮಾಡಿ, ಮಿಲ್ಲೇಟ್ಸ್ ದಂಧೆ, ಸಾವಯವ ದಂಧೆ ರುಚಿ ತೋರಿಸಿರುವ ಪ್ರಕರಣ ಬೆಳಕಿಗೆ ಬಂತು.

ಹೌದು ಮಾಹಿತಿ ಇಲ್ಲದೆ, ಅನುಭವ ಇಲ್ಲದೇ ಏನೇ ಮಾಡಿದರೂ, ಈ ರೀತಿ ಮೋಸ ಹೋಗುವುದು ಇಂದು ಶತಸಿದ್ಧ. ಮೋಸ ಮಾಡುವವರು ಹೊಸಬರೇನೂ ಅಲ್ಲ, ನಮ್ಮ ಹಿತೈಷಿಗಳಂತೆ ನಟಿಸುವವರೇ.

ಅಷೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಹಲವಾರು ಜನರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುವವರೂ ಇದ್ದಾರೆ. ಅಂತಹವರನ್ನು ನಾಲೇಡ್ಜ್ ಬ್ಯಾಂಕ್ @ 2047’ ನಲ್ಲಿ ಸೇರ್ಪಡೆ ಮಾಡುವುದು ನನ್ನ ಜ್ಞಾನದಾಹ. ನಾನು ಸಹ ರೈತನಾದರೂ ಸಾವಯವ ಕೃಷಿಯಲ್ಲಿ ಹೇಗೆ ಹೆಚ್ಚಿಗೆ ಆದಾಯ ಗಳಿಸಬಹುದು ಎಂಬ ‘ಲೈವ್ ಸಂಶೋಧನೆ ‘ ಮಾಡಲು ಆರಂಭಿಸಿದ್ದೇನೆ.

ಕೃಷಿ ಆಶ್ರಮಗಳಿಗೆ ಮಾರ್ಗದರ್ಶನ ನೀಡುವಾಗ, ‘ಕೃತಿ ಮಾತನಾಡಬೇಕು’ ಎಂಬ ಘೋಷಣೆ ಮಾಡಿದ ಕನ್ನೇರಿ ಶ್ರೀಗಳ ಮಾತು, ಅನುಭವ ಮಾತಾಗಬೇಕು’ ಎಂಬ ವಿಜಯನಗರ ಜಿಲ್ಲೆಯ ಶ್ರೀ ವಿಶ್ವೇಶ್ವರ ಸಜ್ಜನ್ ರವರ ಮಾತು. ನಿಜಕ್ಕೂ ಅರ್ಥಪೂರ್ಣ.

ರವಿತೇಜರವರು ಕೃಷಿ ಅವಿಷ್ಕಾರಗಳ ಮಾಹಿತಿ ಸಂಗ್ರಹ ಮಾಡಿ, ನನಗೆ ಜ್ಞಾನದಾನ’ ಮಾಡುತ್ತಿದ್ದಾರೆ.  ಈ ರೀತಿಯ ಯಾವುದೇ ಹೆಸರಿನ ಕೃಷಿ ಅವಿಷ್ಕಾರಗಳ ಬಗ್ಗೆ ಜ್ಞಾನದಾನ ಮಾಡಲು ಬಹಿರಂಗ ಮನವಿ.