31st May 2025
Share

TUMAKURU:SHAKTHIPEETA FOUNDATION

 ಮಾಜಿ ಮುಖ್ಯಮಂತ್ರಿಯವರಾದ ಪುಣ್ಯಾತ್ಮ ದಿ.ಎಸ್.ಎಂ.ಕೃಷ್ಣರವರ ದೂದೃಷ್ಠಿಯಿಂದ ವಿಶ್ವದ ಭೂಪಟದಲ್ಲಿ ಬೆಂಗಳೂರು ಐಟಿ ಹಬ್’ ಆಗಿ ತಲೆ ಎತ್ತಿದೆ. ದೇಶಕ್ಕೆ ಜಿಎಸ್‌ಟಿ ದುಡಿಯುವ ಎರಡನೇ ರಾಜ್ಯವಾಗಲು ಬೆಂಗಳೂರು ಐಟಿಬಿಟ ಕಾರಣ. ಅಲ್ಲಿಂದ ಬಂದ ಎಲ್ಲಾ ಮುಖ್ಯಮಂತ್ರಿಯವರು ಪಕ್ಷ ಭೇದ ಮಾಡದೆ ಬೆಂಬಲ ನೀಡುತ್ತಿದ್ದಾರೆ.

ಇದು ಕೃತಕ ಬುದ್ಧಿಮತ್ತೆ ಯುಗ’ ಬೆಂಗಳೂರಿನ ಹೆಚ್.ಎಂ.ಟಿ ಜಮೀನಿನನಲ್ಲಿ ಕೃತಕ ಬುದ್ಧಿಮತ್ತೆ ವಿಲೇಜ್’ ನಿರ್ಮಾಣ ಮಾಡಲು, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ.ಕುಮಾರ ಸ್ವಾಮಿಯವರು ಪ್ರಸ್ತಾವನೆಯನ್ನು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಸಲ್ಲಿಸಿದ್ದಾರೆ.

ಮಾನ್ಯ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್‌ರವರು ಬೆಂಗಳೂರಿನಲ್ಲಿ ಸೆಂಟರ್ ಆಫ್ ಎಕ್ಸ್ಲೆನ್ಸ್ ಆರ್ಟಿಫೀಷಿಯಲ್ ಇಂಟಲಿಜೆನ್ಸ್’ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮೋದಿಜಿಯವರು ಗುಜರಾತ್‌ನಲ್ಲಿ ಕೃತಕ ಬುದ್ಧಿಮತ್ತೆ ವಿಲೇಜ್’ ಸ್ಥಾಪಿಸಲು ಮುಂದಾಗಿರುವುದು ಸ್ವಾಗತ. ವಿಕಸಿತ ಭಾರತ @ 2047’ ಘೋಷಣೆಯಡಿಯಲ್ಲಿ, ದೇಶದ ಎಲ್ಲಾ ರಾಜ್ಯಗಳು ಟೀಮ್ ಇಂಡಿಯಾ’ ರೀತಿ ಕಾರ್ಯನಿರ್ವಹಿಸುವುದು ಸೂಕ್ತವಾಗಿದೆ.

ಗುಜರಾತ್ ನೆಪವೊಡ್ಡಿ  ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ ಮೋದಿಜಿ. ಅತಿ ಹೆಚ್ಚು ಸಂಸದರನ್ನು ನೀಡಿರುವ ಕರ್ನಾಟಕಕ್ಕೂ ಮಂಜೂರು ಮಾಡಿ, ಬೆಂಗಳೂರಿಗೆ  ಕೃತಕ ಬುದ್ಧಿಮತ್ತೆ ಕೀರಿಟಕ್ಕೆ’ ಮುನ್ನುಡಿ ಬರೆಯಲು ಮನವಿ.

ಈ ಭಾರಿಯ ದೆಹಲಿ ಪ್ರವಾಸದಲ್ಲಿ, ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗಿದೆ. ಕರ್ನಾಟಕ ರಾಜ್ಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ, ಮುಂದಿನ ಕಡತ ಅನುಸರಣೆ ಬಗ್ಗೆ ರೂಪುರೇಷೆ ನಿರ್ಧರಿಸಲಾಗುವುದು.

ವಿಶೇಷವಾಗಿ ನಂಬರ್ ಒನ್ ಕರ್ನಾಟಕ @ 2047’ ಮತ್ತು ರಾಜ್ಯದ ರೈತರಿಗೆ ಅನೂಕೂಲವಾಗುವ ಈ ಯೋಜನೆಗೆ, ರಾಜ್ಯದ ಎಲ್ಲಾ ಕೃಷಿ ಆಶ್ರಮಗಳು ಮತ್ತು ಪ್ರಗತಿಪರ ರೈತರ ನೇತೃತ್ವದಲ್ಲಿ ನಿಯೋಗ‘ ಹೋಗಲು ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಕರ್ನಾಟಕ ರಾಜ್ಯದ ಎಲ್ಲಾ 28 ಜನ ಲೋಕಸಭಾ ಸದಸ್ಯರು ಮತ್ತು 14 ಜನ ರಾಜ್ಯಸಭಾ ಸದಸ್ಯರಿಗೂ ಮೋದಿಜಿಯವರ ಬಳಿ ನಿಯೋಗ ಹೋಗಲು  ಪತ್ರ ಬರೆಯಲಾಗುವುದು.