TUMAKURU:SHAKTHIPEETA FOUNDATION
ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ‘ವಿಕಸಿತ ಭಾರತ @ 2047’ ನಾಗಾಲೋಟದಲ್ಲಿ ಇದ್ದಾರೆ, ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ‘ಕರ್ನಾಟಕ ಅಭಿವೃದ್ಧಿ ಮಾಡೆಲ್’ ಜಪಮಾಡುತ್ತಿದ್ದಾರೆ, ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ‘ಬ್ರಾö್ಯಂಡ್ ಬೆಂಗಳೂರು’ ಅಬ್ಬರಿಸುತ್ತಿದ್ದಾರೆ.
ದೇಶ ಮತ್ತು ರಾಜ್ಯದ ದೊರೆಗಳಾದ, ಈ ಮೂರು ಜನರ ಪರಿಕಲ್ಪನೆಗಳಿಗೆ, ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳು ಅಭಿನಂದನೆ ಸಲ್ಲಿಸುತ್ತವೆ ಹಾಗೂ ಪಂಚಭೂತಗಳು ವಿಷಕಾರಿಯಾಗುತ್ತಿವೆ. ೨೦೪೭ ರ ವೇಳೆಗೆ ಮತ್ತೆ ಗತಕಾಲದ ವೈಭವ ಸೃಷ್ಠಿ ಮಾಡಲು, ಕರ್ನಾಟಕ ರಾಜ್ಯದ, ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ವಾಣಿವಿಲಾಸ ಕಾಲುವೆಯ ಅಕ್ಕ-ಪಕ್ಕ ಇರುವ 705 ಎಕರೆ ಸರ್ಕಾರಿ ಜಮೀನಿನನಲ್ಲಿ ‘ಪಂಚಭೂತಗಳ ಟೂರಿಸಂ’ ಸ್ಥಾಪಿಸಲು ಆಗ್ರಹ ಮಾಡುತ್ತಿವೆ.
೧. ವಾಯು ಟೂರಿಸಂ
೨. ಭೂಮಿ ಟೂರಿಸಂ
೩. ನೀರು ಟೂರಿಸಂ
೪. ಆಕಾಶ ಟೂರಿಸಂ
೫. ಅಗ್ನಿ ಟೂರಿಸಂ
೬. ಇಕೋ ಟೂರಿಸಂ
೭. ಕಲ್ಚರ್ ಟೂರಿಸಂ
೮. ಅಗ್ರಿ ಟೂರಿಸಂ
೯. ಹೆಲ್ತ್ ಟೂರಿಸಂ
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯದಲ್ಲಿ ಇವೆ ಎನ್ನಲಾದ ೧೩೦೦ ಕ್ಕೂ ಹೆಚ್ಚು, ಜಾತಿ/ಉಪಜಾತಿಗಳ, ರಾಜ್ಯ ಮಟ್ಟದ ಸಂಘಟನೆಗಳ ಸಹಭಾಗಿತ್ವದಲ್ಲಿ, ರೈತರ ಸಹಭಾಗಿತ್ವದಲ್ಲಿ, ಕೇಂದ್ರ ಸರ್ಕಾರ 2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವ ‘ದೇಶಾದ್ಯಾಂತ 50 ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿ’ ಯೋಜನೆಯಡಿಯಲ್ಲಿ, ಈ ಪ್ರಸ್ತಾವನೆ ಸಲ್ಲಿಸಲು ಚಿಂತನೆ ಆರಂಭವಾಗಿದೆ.
ವಾಣಿವಿಲಾಸ ಪ್ರವಾಸೋಧ್ಯಮ ಕೇಂದ್ರವಾಗಿದೆ. ಅಂತರರಾಷ್ಟಿçÃಯ ಮಟ್ಟದಲ್ಲಿ, ರಾಜ್ಯದ್ಯಾಂತ ಊರಿಗೊಂದು/ಬಡಾವಣೆಗೊಂದು ಕೃಷಿ ಆಶ್ರಮಗಳ ಉತ್ಪನ್ನಗಳ ನಿರಂತರ ಮಾರಾಟ ಮಳಿಗೆ ಮತ್ತು ಆಹಾರ ಮಳಿಗೆಗಳಿಗೂ ಒತ್ತು ನೀಡುವುದು ಸೂಕ್ತವಾಗಿದೆ.
ಈ ಹಿನ್ನಲೆಯಲ್ಲಿ ದಿನಾಂಕ:28.05.2025 ನೇ ಬುಧವಾರ ಮಧ್ಯಾಹ್ನ 3 ಗಂಟೆಗೆ, 705 ಎಕರೆ ಜಮೀನಿನ ಮಾಲೀಕತ್ವದ ಜಲಸಂಪನ್ಮೂಲ ಇಲಾಖೆಯ ಸಚಿವರು ಹಾಗೂ ಮಾನ್ಯ ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ರವರ ಅಡ್ವೆöÊಸರ್ ಶ್ರೀ ಕೆ.ಜೈಪ್ರಕಾಶ್ರವರೊಂದಿಗೆ ಸಮಾಲೋಚನೆ ಮಾಡಲಾಗುವುದು. ಆಸಕ್ತರು ಭಾಗವಹಿಸಬಹುದು.
೧. ವಿಶ್ವೇಶ್ವರಯ್ಯ ಜಲ ನಿಗಮ
೨. ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ.
೩. ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗ.
೪. ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್
೫. ಆರ್ಟಿಫಿಷಿಯಲ್ ಇಂಟಲಿಜೆನ್ಸ್.
೬. ಪ್ರವಾಸೋಧ್ಯಮ ಇಲಾಖೆ.
೭. ಮುಜರಾಯಿ ಇಲಾಖೆ.
೮. ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
೯. ಸಮಾಜ ಕಲ್ಯಾಣ ಇಲಾಖೆ
೧೦. ಕರ್ನಾಟಕ ರಾಜ್ಯದ್ಯಾಂತ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯಗಳಲ್ಲಿ ಇರುವ ಬಯೋಡೈವರ್ಸಿಟಿ ಮ್ಯಾನೇಜ್ಮೆಂಟ್ ಕಮಿಟಿ.
ಹೀಗೆ ಅಗತ್ಯವಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ವಿವಿಧ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ, ತುಮಕೂರು ವಿಶ್ವವಿದ್ಯಾನಿಲಯ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹಭಾಗಿತ್ವದ ‘ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ’ ದ ಮೂಲಕ ಒಂದು ವಿಶೇಷ ಪ್ರಸ್ತಾವನೆ ಸಿದ್ಧಪಡಿಸಲು ಶ್ರಮಿಸಲಾಗುವುದು.
ದೆಹಲಿಯ ಅಧ್ಯಯನ ಪ್ರವಾಸದಲ್ಲಿ, ಕರ್ನಾಟಕ ಕೇಡರ್ನ ಅಧಿಕಾರಿಗಳೊಂದಿಗೆ, ಈ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಆಸಕ್ತರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ.