TUMAKURU:SHAKTHIPEETA FOUNDATION
ತುಮಕೂರಿನ Ananya institute of commerece and management ಕಾಲೇಜಿನಲ್ಲಿ ಸುಮಾರು 1000 ವಿದ್ಯಾರ್ಥಿಗಳು, ನೌಕರರು ಮತ್ತು ಅಧ್ಯಾಪಕ ವರ್ಗದವರು ಇದ್ದಾರಂತೆ.
ಮಹಾರಾಷ್ಟçದ, ಕನ್ನೇರಿ ಮಠದ ಶ್ರೀಗಳ ನೇತೃತ್ವದಲ್ಲಿ, ಕರ್ನಾಟಕ ರಾಜ್ಯಧ್ಯಾಂತ, 224ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, 1008 ಕೃಷಿ ಆಶ್ರಮಗಳನ್ನು ಆರಂಭಿಸಲು ಡಿಜಿಟಲ್ ಆಂದೋಲನ ಕೈಗೊಂಡಿದ್ದಾರೆ.
ಪ್ರತಿಯೊAದು ಕೃಷಿ ಆಶ್ರಮವೂ, ಒಂದೊAದು ಪ್ರಭೇಧದ ಬೆಳೆಗಳ ಬಗ್ಗೆ ಸಂಶೋಧನೆ, ಬೆಳೆಗೆ ತಕ್ಕಂತೆ ನೀರು ಬಳಕೆ, ಅಧ್ಯಯನ, ಲೈವ್ ಮ್ಯೂಸಿಯಂ, ಸ್ಟಾರ್ಟ್ ಅಫ್, ಕ್ಲಸ್ಟರ್, ಮೌಲ್ಯವರ್ಧನೆ, ನರ್ಸರಿ, ರಫ್ತು ಹೀಗೆ ಅಗತ್ಯವಿರುವ ಎಲ್ಲಾ ತಜ್ಞರನ್ನು ಒಳಗೊಂಡ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಚಿಂತನೆ ಆರಂಭವಾಗಿದೆ.
ಕೇAದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲೂ ನಂಬರ್ ಒನ್ ಕರ್ನಾಟಕ @ 2047 ಯೋಜನೆಯಡಿಯಲ್ಲಿ, ಈ ಯೋಜನೆ ಅಳವಡಿಸಿಕೊಳ್ಳಲು ಚರ್ಚೆ ಆರಂಭವಾಗಿದೆ.
ನಾನು ಒಂದು ಕಾರ್ಯಕ್ರಮಕ್ಕೆ, ಅನನ್ಯ ಕಾಲೇಜಿಗೆ ಹೋಗಿದ್ದಾಗ, ಉಪನ್ಯಾಸಕಿ ಶ್ರೀಮತಿ ಪ್ರಿಯ ರವರೊಂದಿಗೆ, ಮಾತನಾಡುವಾಗ ನಿಮ್ಮ ಕಾಲೇಜಿನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ, ಎಂದು ಕೇಳಿದೆ, ಆಗ ಅವರು ಎಲ್ಲಾ ಸೇರಿ 1000 ಆಗಬಹುದು ಎಂದರು.
ತಕ್ಷಣ ನನಗೆ ಒಂದು ಐಡಿಯಾ ಹೊಳೆಯಿತು, ಆದರೂ ಮಾತನಾಡಲಿಲ್ಲ. ಸ್ವಲ್ಪ ದಿವಸ ಬಿಟ್ಟ ನಂತರ, ನೀವೂ ಎಕೆ ಒಬ್ಬೊಬ್ಬ ವಿದ್ಯಾರ್ಥಿಗಳಿಂದ, ಒಂದೊAದು ಪ್ರಭೇದದ ಪ್ರಭಂಧ ಬರೆಸಬಾರದು. ಅವರಿಗೆ ಇಂರ್ನ್ ಷಿಪ್ ಆಗುತ್ತದೆ. ರಾಜ್ಯದ ರೈತರಿಗೆ ಹಾಗೂ ಕೃಷಿ ಆಶ್ರಮಗಳಿಗೆ ಸಹಕರಿಸಲೂ ಬಹುದು. ಇದೊಂದು ವಿಶ್ವವೇ ಗಮನ ಸೆಳೆಯುವ ವಿಷಯವಾಗಲಿದೆ. ಎಂದಾಗ ಮೇಡಂ ಪ್ರಾಂಶುಪಾಲರೊAದಿಗೆ ಸಮಾಲೋಚನೆ ನಡೆಸಿ, ವಿಷಯ ತಿಳಿಸುತ್ತೇನೆ ಎಂದಾಗ ನನಗೆ ಖುಷಿಯಾಯಿತು.
ತಕ್ಷಣ ನಾನು ತುಮಕೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಡಾ. ವೆಂಕಟೇಶ್ವರಲು ರವರೊಂದಿಗೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ರಾಜಸಾಬ್ ರವರೊಂದಿಗೆ, ಕೃಷಿ ಆಶ್ರಮದ ಡಾ. ಬಿ.ಎಂ.ನಾಗಭೂಷಣರವರೊAದಿಗೆ, ಟಿಡಿಯೂ ಯೂನಿವರ್ಸಿಟಿಯ ಶ್ರೀ ಜಗನ್ನಾಥ್ ರಾವ್ರವರೊಂದಿಗೆ, ಕರ್ನಾಟಕ ರೀಸರ್ಚ್ ಫೌಂಡೇಷನ್ನ ಡಾ.ವೆಂಕಟೇಶ್ ರವರೊಂದಿಗೆ ಸಮಾಲೋಚನೆ ನಡೆಸಿದಾಗ, ಎಲ್ಲರೂ ಸಹ ಇದೊಂದು ಅತ್ಯುತ್ತಮವಾದ ಕಾರ್ಯಕ್ರಮ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ದಿನಾಂಕ:05.06.2025 ರಂದು ತುಮಕೂರು ವಿಶ್ವ ವಿದ್ಯಾನಿಲಯದಲ್ಲಿಯೇ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮತ್ತು ಹಲವಾರು ಸಂಸ್ಥೆಗಳ ಸಹಭಾಗಿತ್ವದಲ್ಲಿ, ಸರಳ ಸಮಾರಂಭ ನಡೆಸಿ, ಚಾಲನೆ ನೀಡಲು ಡಾ. ವೆಂಕಟೇಶ್ವರಲು ರವರು ವಿಷಯ ಪ್ರಸ್ತಾಪ ಮಾಡಿದ್ದಾರೆ.
ಈ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಲಹೆ ನೀಡಲು ಬಹಿರಂಗ ಆಹ್ವಾನ ನೀಡಲಾಗಿದೆ.
ಚಿ. ವಿ.ಆರ್ ಪ್ರಶಾಂತ್ ಗೌಡರವರು ಈಗಾಗಲೇ ಒಂದು ಪ್ರಭೇದದ ಪ್ರಬಂಧ ಬರೆಯುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಿದ್ದಾರೆ.