25th April 2024
Share

Delhi:Shakthipeeta foundation

ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಒಕ್ಕಲಿಗರನ್ನು ಸೇರ್ಪಡೆ ಮಾಡಿ ಕುಂಚಿಟಿಗರನ್ನು ಕೈಬಿಡಲಾಗಿತ್ತು .

ಮಾಜಿ ಪ್ರಧಾನಿ H.D.Sri ದೇವೇಗೌಡರು ಒಕ್ಕಲಿಗರು ಮತ್ತು ಇತರೆ ಉಪ ಜಾತಿಗಳನ್ನು ಸೇರ್ಪಡೆ ಮಾಡಿ.ಉದ್ದೇಶಪೂರ್ವಕವಾಗಿ ಕುಂಚಿಟಿಗರನ್ನು ಕೈಬಿಟ್ಟಿದ್ದಾರೆ ಎಂಬ ಅಪವಾದಕ್ಕೆ ಒಳಗಾಗಿದ್ದರು .

ಇಂದು ಲೋಕಸಭೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ ಎಸ್ ಬಸವರಾಜ್ ರವರು ಕುಂಚಿಟಿಗರನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಲು ಆಗ್ರಹ ಮಾಡಿದ್ದಾರೆ .

ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಕೇಂದ್ರ ಸರಕಾರ ವಿಳಂಬ ಮಾಡಿದ್ದರಿಂದ ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಬಸವರಾಜ್ ರವರು ಲೋಕಸಭಾ ಅಧಿವೇಶನದಲ್ಲಿ ಗಮನ ಸೆಳೆದಿದ್ದಾರೆ.