![](https://epaper.shakthipeeta.in/wp-content/uploads/2020/11/Capture.png)
TUMAKURU:SHAKTHIPEETA FOUNDATION
ತುಮಕೂರು ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಮಾದರಿಯಲ್ಲಿ ‘75 ನೇ ಸ್ರ್ಯಾತಂತ್ರ್ಯ ದಿವಸದ ಅಂಗವಾಗಿ 75 ಯೋಜನಾವಾರು/ವಿಷಯವಾರು ದಿಶಾ ಸಮಿತಿ ಸಭೆ ನಡೆಸಲು’ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.
ಯಾವ ವಿಷಯಕ್ಕೆ ಸಂಭಂದಿಸಿದ ಯೋಜನೆಗಳಾಗಿರುತ್ತವೋ ಆಯಾ ಅಧಿಕಾರಿಗಳು ಯೋಜನಾವಾರು/ವಿಷಯವಾರು ಅವರ ಕಚೇರಿಯಲ್ಲಿ ಅಥವಾ ಸ್ಥಳ ಸಾಕಾಗದೆ ಇದ್ದಲ್ಲಿ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆಗಳನ್ನು ಕರೆಯಲು ಚಿಂತನೆ ನಡೆಸಿದ್ದಾರೆ.
![](https://epaper.shakthipeeta.in/wp-content/uploads/2020/01/Capture-28.png)
ಯೋಜನೆಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಇದು ಬಹಳ ಉಪಕಾರಿಯಾಗಲಿದೆ. 75 ಸಭೆಗಳನ್ನು ಆಯೋಜಿಸಲು ಒಂದು ವಿಷನ್ ಗ್ರೂಪ್ ರಚಿಸಲು ಸಹ ಉದ್ದೇಶಿಸಿದ್ದಾರೆ.
ಈ ಎಲ್ಲಾ ಸಭೆಗಳ ಮಾಹಿತಿ ಮತ್ತು ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಸಂಸದರ ವೆಬ್ ಸೈಟ್/ದಿಶಾ ಪೋರ್ಟಲ್ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಸಾರ್ವಜನಿಕರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಲಿದ್ದಾರೆ.