19th April 2024
Share

TUMAKURU:SHAKTHIPEETA FOUNDATION

  1. ರಾಜ್ಯದ 31 ಜಿಲ್ಲೆಗಳಿಗೂ ಒಬ್ಬೊಬ್ಬ ಪ್ರತಿನಿಧಿ ನೇಮಕ ಮಾಡುವುದು, ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದಲ್ಲಿದೆ.
  2. ಅಧಿಕಾರಿ ಅಥವಾ ನಿವೃತ್ತ ಅಧಿಕಾರಿ ಅಥವಾ ಆಸಕ್ತಿ ಇರುವವರನ್ನು ನೇಮಕ ಮಾಡುವುದು ಒಳ್ಳೆಯದು.
  3. ಆಯಾ ತವರು ಜಿಲ್ಲೆಯ ಅಥವಾ ಆಸಕ್ತಿ ಇರುವ ಜಿಲ್ಲೆಯ ಅಭಿವೃದ್ಧಿಗೆ ಆಸಕ್ತಿ ಇರುವ ಅಧಿಕಾರಿಗಳÀ  ಪ್ಯಾನಲ್ ಮಾಡಿದ ನಂತರ ಮಾನ್ಯ ಮುಖ್ಯ ಮಂತ್ರಿಯವರಿಗೆ ರಾಜ್ಯ ಮಟ್ಟದ ಸದಸ್ಯ ಕಾರ್ಯದರ್ಶಿಯವರು ಪಟ್ಟಿ ನೀಡ ಬಹುದು.
  4. ಪ್ರತಿ ಜಿಲ್ಲೆಯ ಅಭಿವೃದ್ಧಿಗೆ ಆಸಕ್ತಿ ಇರುವ ಅಧಿಕಾರಿಗಳು ಅಥವಾ ನಿವೃತ್ತ ಅಧಿಕಾರಿಗಳು ಅಥವಾ ಪರಿಣಿತ ತಜ್ಞರ ಅಥವಾ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪ್ಯಾನಲ್ ಮಾಡಿದ ನಂತರ ಮಾನ್ಯ ಮುಖ್ಯ ಮಂತ್ರಿಯವರಿಗೆ ಸದಸ್ಯ ಕಾರ್ಯದರ್ಶಿಯವರು ಪಟ್ಟಿ ನೀಡ ಬಹುದು.
  5. ರಾಜ್ಯ ಸರ್ಕಾರ ಸೂಪರ್ 30 ಇಂಜಿನಿಯರಿಂಗ್ ಕಾಲೇಜುಗಳ ಘೋಷಣೆ ಮಾಡಿರುವ ಇಂಜಿನಿಯರಿಂಗ್ ಕಾಲೇಜಿನ ಪ್ರತಿನಿಧಿಗಳನ್ನು ನೇಮಕ ಮಾಡಬಹುದು.
  6. ರಾಜ್ಯದಲ್ಲಿರುವ ಸರ್ಕಾರಿ ಟ್ರಸ್ಟ್ ಗಳ ಪದಾಧಿಕಾರಿಗಳನ್ನು ನೇಮಕ ಮಾಡಬಹುದು.
  7. ರಾಜ್ಯದ ವಿಶ್ವ ವಿದ್ಯಾಲಯಗಳ ಪ್ರತಿನಿಧಿಗಳನ್ನು ನೇಮಕ ಮಾಡಬಹುದು. ಅಭಿವೃದ್ಧಿ ಪೀಠಗಳಿಗೆ ಜೀವ ತುಂಬ ಬೇಕಿದೆ.
  8. ರಾಜ್ಯದ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಭಿವೃದ್ಧಿ ಪೀಠಗಳ ನಿರ್ದೇಶಕರನ್ನು ನೇಮಕ ಮಾಡಬಹುದು.
  9. ಪ್ರತಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಶ್ರಮಿಸುತ್ತಿರುª ವ್ಯಕ್ತಿ ಅಥವಾ ಸಂಸ್ಥೆಗಳನ್ನು ಖಾಯಂ ಸದಸ್ಯರಾಗಿ ನೇಮಕ ಮಾಡುವುದು.

ಇವರ ಕರ್ತವ್ಯಗಳೇನು?

  1. ಆಯಾ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಕಾರ್ಯವೈಖÀರಿಗಳ ಬಗ್ಗೆ ರಾಜ್ಯ ದಿಶಾ ಸಮಿತಿಗೆ ವರದಿ ನೀಡುವುದು.
  2. ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖಾವಾರು, ಸಚಿವಾಲಯವಾರು 62 ಗ್ರೂಪ್ ಗಳನ್ನು ರಚಿಸಲು ಈಗಾಗಲೇ ಸಲಹೆ ನೀಡಲಾಗಿದೆ. ಒಬ್ಬೊಬ್ಬರು ಸಹ ಎರಡು ಗ್ರೂಪ್‍ನ ಹೆಚ್ಚುವರಿ ಹೊಣೆಗಾರಿಕೆ ಪಡೆದು ಯೋಜನೆಯ ಸಂಪೂರ್ಣ ರಿಯಲ್ ಟೈಮ್ ಡಾಟಾ ಸಂಗ್ರಹಣೆ ಮಾಡುವುದು.
  3. ಕೇಂದ್ರ ಸರ್ಕಾರದ 43 ಯೋಜನೆಗಳ ಬಗ್ಗೆ ಒಂದು ಅಥವಾ ಎರಡು ಯೋಜನೆಯ ಸಂಪೂರ್ಣ ರಿಯಲ್ ಟೈಮ್ ಡಾಟಾ ಸಂಗ್ರಹಣೆ ಮಾಡುವುದು.

ಆಸಕ್ತರು ಸಲಹೆ ನೀಡಬಹುದು.

 ಈ ಅಭಿವೃದ್ಧಿ ತಂಡ ಕಟ್ಟುವುದು ಬಹಳ ಪ್ರಮುಖವಾಗಿದೆ. ನಾಮಕಾವಸ್ತೆ ಪಟ್ಟಿ ಸರಿಯಲ್ಲ. ಇದಕ್ಕಾಗಿ ಬಹಳ ಸರ್ಕಸ್ ಮಾಡುವುದು ಸೂಕ್ತವಾಗಿದೆ.