25th April 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ ನವಗ್ರಹಗಳ ಸ್ಥಳದಲ್ಲಿ ಆಯಾ ಗ್ರಹಗಳ ಗಿಡಗಳಾದ ಸೂರ್ಯ- ಬಿಳಿಎಕ್ಕ, ಗುರು-ಅರಳಿ, ಬುಧ-ಉತ್ತರಾಣಿ, ಶುಕ್ರ-ಅತ್ತಿಮರ, ಚಂದ್ರ-ಮುತ್ತಗ, ರಾಹು-ಗರಿಕೆ, ಶನಿ -ಬನ್ನಿ, ಕೇತು-ದರ್ಭೇ ಗಿಡ ಹಾಗೂ ಹುಲ್ಲುಗಳು ಉತ್ತಮವಾಗಿ ಬೆಳೆಯುತ್ತಿವೆ.

ಆದರೇ ಮಂಗಳ ಗ್ರಹದ ದಿಕ್ಕಿನಲ್ಲಿ ಕಗ್ಗಲೆ ಗಿಡ ಬೆಳೆಸಲು, ಕಳೆದ 2 ವರ್ಷದಿಂದಲೂ ಹರಸಾಹಸ ಮಾಡಲಾಯಿತು. ಸುಮಾರು 3-4 ಭಾರಿ, ಗಿಡ ಹಾಗೂ ಬೀಜಗಳನ್ನು ಹಾಕಿದರು ಬೇಳೆದಿರಲಿಲ್ಲ. ಈ ವರ್ಷ ಮತ್ತು ಹಿಂದಿನ ವರ್ಷ ಮಳೆ ಜಾಸ್ತಿಯಾಗಿ ಹಾಕಿದ ಆನೇಕ ಔಷಧಿಗಿಡಗಳು ನೀರು ಹಿಡಿದುಹೋದರೂ, ಈಗ ಕಗ್ಗಲೆ ಗಿಡ ಚಿಗರು ಹೊಡೆಯುತ್ತಿರುವುದು ತೃಪ್ತಿ ತಂದಿದೆ.

ಮಂಗಳ ಗ್ರಹನಿಗೆ ಏಕೋ ಸಿಟ್ಟು ಬಂದಿರಬಹುದು ,ಅದಕ್ಕೆ ಕಗ್ಗಲೆ ಗಿಡ ಚಿಗುರಿಲ್ಲ ಎಂದು ಕೊಂಡಿದ್ದೆ.