29th March 2024
Share

TUMAKURU:SHAKTHIPEETA FOUNDATION

ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ತಿಂಗಳ ಮೊದಲನೇ ವಾರದಲ್ಲಿ  ತುಮಕೂರಿನಲ್ಲಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ರಾಜ್ಯ ಮಟ್ಟದ ಎರಡನೇ ಕಾರ್ಯಾಗಾರ ನಡೆಯಲಿದೆ.

ಎರಡು ದಿವಸಗಳ ಕಾಲ ನಡೆಯುವ, ಈ ಕಾರ್ಯಾಗಾರದ ಸ್ಪಾನ್ಸರ್ ಆಗಿ ತುಮಕೂರಿನ ಮುಂಜಾನೆ ಬಳಗ’ದ ಮುಖ್ಯಸ್ಥರು ಮೌಖಿಕವಾಗಿ ಒಪ್ಪಿಗೆ ನೀಡಿದ್ದಾರೆ.

ಈ ಕಾರ್ಯಾಗಾರದಲ್ಲಿ ಹೊಸ 31 ಅಂಶಗಳ ಬಗ್ಗೆ ಒಂದು ದಿವಸ ಹಾಗೂ ಜಲಗ್ರಂಥದ ಬಗ್ಗೆ ಒಂದು ದಿವಸÀ ಚರ್ಚೆ ನಡೆಯಲಿದೆ.

ಜಲಗ್ರಂಥದ ಬಗ್ಗೆ ಮೂಕಾನನ ರೆಸಾರ್ಟ್‍ನಲ್ಲಿ ಕೈಗೊಂಡ ನಿರ್ಣಯದ ಮೇರೆಗೆ, ಮುಂದಿನ ಚುನಾವಣೆ ಪ್ರಣಾಳಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ಕೆಳಕಂಡಂತೆ ಘೋಶಿಸಲು ಮನವಿ ಸಲ್ಲಿಸಲಾಗುವುದು. ಇದು ಒಂದು ಕರಡು ಪ್ರತಿ, ತಾವೂ ಸಲಹೆ ನೀಡಬಹುದಾಗಿದೆ.

  1. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲಾಗುವುದು.
  2. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿ, ರಾಜ್ಯದ ಎಲ್ಲಾ ಗ್ರಾಮಗಳಿಗೂ ನದಿ ನೀರಿನ ಅಲೋಕೇಷನ್ ಮಾಡಿ, ಆಧ್ಯತೆ ಮತ್ತು ಆರ್ಥಿಕ ಪರಿಸ್ಥಿಗೆ ಅನುಗುಣವಾಗಿ ಯೋಜನೆ ಜಾರಿಮಾಡಲಾಗುವುದು.
  3. ರಾಜ್ಯದ ಎಲ್ಲಾ ವಿಧವಾದ ಜಲಸಂಗ್ರಹಾಗಾರಗಳನ್ನು ಗಂಗಾಮಾತೆ ದೇವಾಲಯ ಎಂದು ಘೋಷಣೆ ಮಾಡಿ, ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡಲಾಗುವುದು.
  4. ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ಇಂತಿಷ್ಟು ನದಿ ನೀರು ಪಡೆಯಲು ಶ್ರಮಿಸಲಾಗುವುದು ಎಂದು ಘೋಷಣೆ ಮಾಡಲಾಗುವುದು.
  5. ರಾಜ್ಯದ ನದಿ ಜೋಡಣೆಗೆ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಶೇಕಡ— ನೀರು ಬಳಸಲಾಗುವುದು ಎಂದು ಘೋಷಣೆ.
  6. ನದಿ ನೀರು ರಾಷ್ಟ್ರೀಯ ಸ್ವತ್ತು ಎಂದು ಘೋಶಿಸಲು ಶ್ರಮಿಸಲಾಗುವುದು.
  7. ರಾಜ್ಯಾಧ್ಯಾಂತ ಅಂತರ್ಜಲ ಅಭಿವೃದ್ಧಿ ಕಾರಿಡಾರ್ ಅಥವಾ ವಾಟರ್ ಗ್ರಿಡ್ ಕೆನಾಲ್ ನಿರ್ಮಾಣ ಮಾಡಲಾಗುವುದು.
  8. ಪ್ರವಾಹದ ನದಿ ನೀರು ಸಂಗ್ರಹಿಸಲು, ರಾಜ್ಯಾಧ್ಯಾಂತ ಹೊಸ ಬಫರ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗುವುದು.
  9. ರಾಜ್ಯಾಧ್ಯಾಂತ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡಲಾಗುವುದು.

ಈ ಬಗ್ಗೆ ಸಮಾಲೋಚನೆ ನಡೆಸಲು ದಿನಾಂಕ:07.01.1997 ರಿಂದ ಇದೂವರೆಗೂ ನನಗೆ ತಿಳಿದಿರುವ ಕೆಳಕಂಡ ನೀರಾವರಿ ಪರಿಣಿತರ ಜ್ಞಾನ ದಾನ ಪಡೆಯಲು ಉದ್ದೇಶಿಸಲಾಗಿದೆ.

  1. ಈಗಗಾಲೇ ಜಲಸಂಪನ್ಮೂಲ ಅಪರಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿರುವ 220 ಅಂಶಗಳ ಮಾಹಿತಿ.
  2. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ
  3. ನೀರಾವರಿ ತಜ್ಞ ಕ್ಯಾಪ್ಟನ್ ರಾಜರಾವ್ ವರದಿ
  4. ನೀರಾವರಿ ತಜ್ಞ ಅಂಗಡಿ ವರದಿ
  5. ನೀರಾವರಿ ತಜ್ಞ ದೇಸಾಯಿ ವರದಿ
  6. ನೀರಾವರಿ ತಜ್ಞ ಕೆ.ಸಿ.ರೆಡ್ಡಿ ವರದಿ
  7. ನೀರಾವರಿ ತಜ್ಞ ಬಾಳೆಕುಂದ್ರಿ ವರದಿ
  8. ನೀರಾವರಿ ತಜ್ಞ ಮುಗ್ಧಂ ವರದಿ
  9. ಇತರೆ ನೀರಾವರಿ ತಜ್ಞರ ವರದಿಗಳು.
  10. ಗುಲ್ಭರ್ಗದ ಶ್ರೀ ಸಜ್ಜನ್ ರವರು ಸಿದ್ಧಪಡಿಸಿರುವÀ ವರದಿ.
  11. ಬಿಜಾಪುರದ ಶ್ರೀ ಸಜ್ಜನ್ ಸಿದ್ಧಪಡಿಸಿರುವÀ ವರದಿ.
  12. ಶಿವಮೊಗ್ಗದ ಶ್ರೀ ಹರೀಶ್ ರವರು ಸಿದ್ಧಪಡಿಸಿರುವÀ ವರದಿ.
  13. ಮಂಡ್ಯದ ಶ್ರೀ ಕೃಷ್ಣಮೂರ್ತಿಯವರು ಸಿದ್ಧಪಡಿಸಿರುವÀ ವರದಿ.
  14. ಬೆಂಗಳೂರಿನ ಶ್ರೀ ರಂಗನಾಥ್ ರವರು ಸಿದ್ಧಪಡಿಸಿರುವÀ ವರದಿ.
  15. ತುಮಕೂರಿನ ಶ್ರೀ ವೇದಾನಂದಾಮೂರ್ತಿಯವರು ಸಿದ್ಧಪಡಿಸಿರುವÀ ವರದಿ.
  16. ತುಮಕೂರಿನ ಶ್ರೀ ಸತ್ಯಾನಂದ್ ರವರು ಸಿದ್ಧಪಡಿಸಿರುವÀ ವರದಿ.
  17. ಧಾರವಾಡದ ಶ್ರೀ ಗಲಗಲಿಯವರು ಸಿದ್ಧಪಡಿಸಿರುವÀ ವರದಿ.
  18. ಮೈಸೂರಿನ ಶ್ರೀ ವೆಂಕಟರಾವ್ ರವರು ಸಿದ್ಧಪಡಿಸಿರುವÀ ವರದಿ.
  19. ಹಾವೇರಿಯ ಶ್ರೀ ಬಸವರಾಜ್ ಸುರಣಗಿಯವರು ಸಿದ್ಧಪಡಿಸಿರುವÀ ವರದಿ.
  20. ಉಡುಪಿಯ ಶ್ರೀ ಶ್ಯಾನುಭೋಗ್ ರವರು ಸಿದ್ಧಪಡಿಸಿರುವÀ ವರದಿ.
  21. ರಾಜ್ಯಾಧ್ಯಾಂತ ಇತರೆ ನೀರಾವರಿ ತಜ್ಞರು ಸಿದ್ಧಪಡಿಸಿರುವ ವರದಿಗಳು.
  22. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ/ಸಂಸ್ಥೆಗಳ ಬಳಿ ಇರುವ ಇತರೆ ವರದಿಗಳು.
  23. ಕೇಂದ್ರ ಸರ್ಕಾರದ ನದಿ ಜೋಡಣೆ ಮಾಹಿತಿ.
  24. ರಾಜ್ಯಾದ್ಯಾಂತ ನೀರಾವರಿ ಹೋರಾಟಗಾರರ ಬಳಿ ಇರುವ ಮಾಹಿತಿ.
  25. ರಾಜ್ಯಾದ್ಯಾಂತ ನೀರಾವರಿ ಸಂಶೋಧನಾ ಸಂಸ್ಥೆಗಳ ವರದಿ.

ಹೀಗೆ ರಾಜ್ಯಾಧ್ಯಾಂತ ‘ಜಲಬಿಕ್ಷೆ’ ಬೇಡಲಾಗುವುದು. ಇನ್ನೂ ಯಾರದರೂ ಯಾವುದಾದರೂ ವರದಿ ಸಿದ್ಧಪಡಿಸಿದ್ದರೆ ಮಾಹಿತಿ ನೀಡಲು ಈ ಮೂಲಕ ಬಹಿರಂಗ ಮನವಿ. ಎಲ್ಲಾ ಮಾಹಿತಿಗಳ ಸಂಗ್ರಹ ಮಾಡಿ ಸರ್ವ ಪಕ್ಷಗಳಿಗೆ ನೀಡಲಾಗುವುದು.

ನ್ಯಾಯಾಲಯದಲ್ಲಿ ಪಿಐಎಲ್ ಹಾಕಲು ಉದ್ದೇಶಿರುವುದರಿಂದ, ಉಚಿತವಾಗಿ ಸಹಕಾರ ನೀಡಲು ವಕೀಲರಿಗೂ  ಬಹಿರಂಗ ಮನವಿ.