TUMAKURU:SHAKTHIPEETA FOUNDATION
ಭೂಮಿಯ ಮೇಲೆ ಕೃತಕವಾಗಿ 38 ಗುಂಟೆ ವಿಸ್ತೀರ್ಣದಲ್ಲಿ, ಸುಮಾರು 540 ಮೀಟರ್ ಉದ್ದದ ಸುತ್ತಳತೆಯ ಭಾರತ ನಕ್ಷೆ ನಿರ್ಮಾಣ ಮಾಡುವ, ನುರಿತ ಜೆಸಿಬಿ, ಮಿನಿ ಇಟಾಚಿ ಅಥವಾ ಕೈಯಲ್ಲಿ 2 ಅಡಿ ಅಗಲ, 1.5 ಅಡಿ ಆಳ ತೆಗೆದು, ಕರೆ ಕಲ್ಲು ಗುಂಡುಗಳನ್ನು, ಜೋಡಣೆ ಮಾಡುವ, ಉದ್ದೇಶಿತ ಕೇಂದ್ರ ಸರ್ಕಾರದ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ ನಿರ್ಮಾಣದ, ನುರಿತ ಕೆಲಸಗಾರರು ಬೇಕಾಗಿದ್ದಾರೆ. ಆಸಕ್ತರು 9886774477 ಕರೆ ಮಾಡಲು ಮನವಿ ಮಾಡಲಾಗಿದೆ.
ದಿನಾಂಕ:14.05.2025 ರಂದು ಆಧುನಿಕ ಯಂತ್ರೋಪಕರಣದಿಂದ ಅಂತಿಮವಾಗಿ, ಭಾರತ ನಕ್ಷೆ ಗಡಿ ಗುರುತಿಸಲಾಗಿದೆ. ಕಳೆದ 5 ವರ್ಷಗಳಿಂದ ಭೂಮಿಯ ಮೇಲೆ ಭಾರತ ನಕ್ಷೆ ನಿರ್ಮಾಣ ಮಾಡುವ ಅಧ್ಯಯನ ಮತ್ತು ಸಂಶೋದನೆ ನಡೆದಿದೆ.


ಬಾಷಣ ಮಾಡುವುದೇ ಬೇರೆ, ಪತ್ರಿಕೆಗಳಲ್ಲಿ ಬರೆಯುವುದು ಬೇರೆ, ಆದರೇ ನಮ್ಮ ಪರಿಕಲ್ಪನೆಯನ್ನು ಭೂಮಿಯ ಮೇಲೆ ಇಳಿಸಬೇಕಾದರೆ ಪಡುವ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
2014 ರಲ್ಲಿ ನಾನು ಉದ್ದೇಶಿತ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳನ್ನು ಒಳಗೊಂಡ ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ ಮಾಡುವ ಜಮೀನು ಹುಡುಕುವಾಗಲೇ ನನ್ನ ಪರಿಕಲ್ಪನೆಗೆ ಸೂಕ್ತವಾದ ಜಮೀನು ಆಯ್ಕೆ ಮಾಡುವುದೇ ಒಂದು ಸಾಹಸವಾಗಿತ್ತು.
ಕೃತಕವಾಗಿ ನಿರ್ಮಾಣ ಮಾಡುವ ಅರಭ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯಲ್ಲಿ ಮಳೆ ನೀರು ಸಂಗ್ರಹ ಮಾಡುವುದು, ಬೇಸಿಗೆಯಲ್ಲಿ ಯಾವುದಾದರೂ ನದಿಯ ನೀರಿನ ಸಂಗ್ರಹಣೆ ಮಾಡುವ ಆಲೋಚನೆ.
ತುಮಕೂರು ಜಿಲ್ಲೆ, ಹಾಸನ ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆ ಸೇರಿದಂತೆ, 3 ಜಿಲ್ಲೆಗಳ ಸುಮಾರು 2500 ಕ್ಕೂ ಹೆಚ್ಚು ಎಕರೆ ಜಮೀನುಗಳನ್ನು ನೋಡಿ, ಹುಡುಕಿ, ಹುಡುಕಿ, ಅಂತಿಮವಾಗಿ ಈ ಜಮೀನನ್ನು ಕೊಂಡುಕೊಳ್ಳಲಾಯಿತು.
ಕಳೆದ 25 ವರ್ಷಗಳ ಹಿಂದೆ ನನ್ನ ಕನಸಿನಲ್ಲಿ ಬಂದಿದ್ದ ದೇವಿ ಜಮೀನು ಇದಾಗಿತ್ತು. ಈಗಲೂ ನನ್ನ ಕನಸಿನಲ್ಲಿ ಬಿದ್ದಿದ್ದ ಮರಗಿಡಗಳ ದೃಷ್ಯ ಕಣ್ಣಿಗೆ ರಾಚುವಂತೆ ಇದೆ. ನಮ್ಮ ತಾಯಿ ದಿ. ಪಾರ್ವತಮ್ಮನವರಿಗೆ ನನಗೆ ಬಿದ್ದಿದ್ದ ಕನಸು ಹೇಳಿದಾಗ, ಅವರು ಮುಂದೆ ಎಂದಾದರೂ ಒಂದು ದಿನ ಕೊಂಡುಕೊಳ್ಳ ಬಹುದೇನೋ, ಅದು ‘ದೇವಿಯ ಪವಾಡ’ ಎಂದು ಹೇಳಿದ್ದರು. ಕೊನೆ ಎಲ್ಲಿಗೆ ನಿಲ್ಲುವುದೋ ಕಾದು ನೋಡಬೇಕು.
‘ತಾಳಿದವನು ಬಾಳಿಯಾನು’ ಎಂಬ ನಾಣ್ಣುಡಿಗೆ ಅನುಗುಣವಾಗಿ, ವಿಶ್ವದ 108 ಶಕ್ತಿದೇವತೆ ಹೇಳಿದ ರೀತಿ, ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ. ಅದರಲ್ಲಿ ಒಂದು ಕಡ್ಡಿ ಅಳ್ಳಾಡಿಸಬೇಕು ಎಂದರೂ, ದೇವಿಯ ಆದೇಶ ಬೇಕೆ ಬೇಕು. ಇದು ಜಗದ ನಿಯಮ.