31st May 2025
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅನುದಾನ ಮಂಜೂರು ಮಾಡಲು ಮಲತಾಯಿ ಧೋರಣೆ ಅನುಸರಿಸುತ್ತಿದೆ, ಎಂದು ಬೊಬ್ಬೆ ಹೊಡೆಯುತ್ತಿದೆಯಂತೆ, ಆದರೇ ವಾಸ್ತವವಾಗಿ, ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಗಿದೆ, ಎಂದು ದೆಹಲಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ನನಗೆ ಅವಮಾನ ಮಾಡಿದ್ದು, ತಲೆ ತಗ್ಗಿಸುವಂತ ಪ್ರಸಂಗ ನಡೆಯಿತು.

ಹೌದು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ಇರುವ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗಕ್ಕೆ, ಕೇಂದ್ರ ಸರ್ಕಾರದ ನೀತಿ ಆಯೋಗ ದಿನಾಂಕ: 29.09.2023  ರಂದು ರೂ 1,62,25,000  ಅನುದಾನವನ್ನು ಮಂಜೂರು ಮಾಡಿದೆಯಂತೆ. ಆದರೇ ಇದೂವರೆಗೂ ಈ ಅನುದಾನವನ್ನು ರಾಜ್ಯ ಸರ್ಕಾರ ಬಳಸಿಕೊಂಡಿಲ್ಲವAತೆ.

ಇದೇ ಆದೇಶದಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ರೂ 1,73,10,000  ಅನುದಾನವನ್ನು ಮಂಜೂರು ಮಾಡಿದ್ದರಂತೆ, ಈ ಅನುದಾನವನ್ನು ಉತ್ತರ ಪ್ರದೇಶ ಸರ್ಕಾರ ಸಂಪೂರ್ಣವಾಗಿ ಬಳಸಿಕೊಂಡಿದೆಯAತೆ.

ಹಾಗಾದರೆ ಕರ್ನಾಟಕ ರಾಜ್ಯದ ಯೋಜನಾ ಇಲಾಖೆಯ ಕಾರ್ಯವೈಖರಿ, ರಾಜ್ಯ ಸರ್ಕಾರಕ್ಕೆ ಮಾಡಿದ ಅವಮಾನವಲ್ಲವೇ ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲದೆ ಮೌನವಾಗಿ ಕುಳಿತು ಕೊಳ್ಳಬೇಕಾಯಿತು.

ಈ ಅನುದಾನ ಬಳಕೆ ಮಾಡಿಕೊಂಡಿದ್ದರೆ, ಕೇಂದ್ರ ಸರ್ಕಾರದ ಇಲಾಖಾವಾರು ಯೋಜನೆಗಳ ಅನುದಾನದ ಸಂಪೂರ್ಣ ವಿವರ ಒಂದೇ ಪೋರ್ಟಲ್‌ನಲ್ಲಿ ದೊರೆಯಲಿದೆಯಂತೆ.

ಇದನ್ನು ಪ್ರಶ್ನೆ ಮಾಡಬೇಕಾದವರೂ ಯಾರು ? ವಿರೋಧ ಪಕ್ಷಗಳಿಗೆ ಈ ಮಾಹಿತಿ ಸಂಗ್ರಹ ಮಾಡುವ, ಸರ್ಕಾರವನ್ನು ಎಚ್ಚರಿಸುವ ಅಧಿಕಾರ ಇಲ್ಲವೇ?

ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಲ್ಲಿ ನನ್ನ ಮನವಿ, ದಯವಿಟ್ಟು ತಮ್ಮ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ನೀತಿ ಮತ್ತು ಯೋಜನಾ ಆಯೋಗದಲ್ಲಿ ಸಭೆಯಲ್ಲಿ ಚರ್ಚಿಸಿ, ಈ ಬಗ್ಗೆ ರಾಜ್ಯದ ಜನತೆಗೆ ಮಾಹಿತಿ ನೀಡುವುದು ಸೂಕ್ತವಾಗಿದೆ.

ಈ ಬಗ್ಗೆ ಮಾಹಿತಿಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಪಡೆಯಲು ಮುಂದಾಗಿದ್ದೇನೆ.