31st May 2025
Share

TUMAKURU:SHAKTHIPEETA FOUNDATION

  2018 ರಿಂದ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದಿಂದ, ದೆಹಲಿಯಲ್ಲಿ ಹೆಚ್ಚುವರಿ ಕರ್ನಾಟಕ ಭವನ ನಿರ್ಮಾಣ ಮಾಡಲು 2 ಎಕರೆ ಜಮೀನು ಮಂಜೂರು ಮಾಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ.

 2023 ರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಎಲ್ಲಾ ಜಾತೀಯ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲ್ಯು ಅಗತ್ಯ ಜಮೀನು ಮಂಜೂರು ಮಾಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ.

ನನಗೆ ಇನ್ನೂ ಅರ್ಥವಾಗದ ವಿಷಯ, 2018 ರಿಂದ ನಮ್ಮ ರಾಜ್ಯದಿಂದ ಆಯ್ಕೆ ಹಾಗಿ ಹೋಗಿರುವ ಸಂಸದರಿಗೆ, ಕೇಂದ್ರ ಸರ್ಕಾರದಲ್ಲಿ ಭಾಗಿಯಾಗಿರುವವರಿಗೆ, ಈ ವಿಚಾರ ಗೊತ್ತಿಲ್ಲವೆ ? ಅಥವಾ ಈ ಬಗ್ಗೆ ಅಸಡ್ಡೆಯೋ ಅಥವಾ ಬಡ ವಿದ್ಯಾರ್ಥಿಗಳ ಕೂಗೂ ಕೇಳಿಲ್ಲವೋ ರಹಸ್ಯವಾಗಿದೆ.

ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ನಾನು 2023 ರಲ್ಲಿ, ಲೋಕೊಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳೆ ರವರೊಂದಿಗೆ, ಲೋಕೊಪಯೋಗಿ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್ ರವರೊಂದಿಗೆ, ದೆಹಲಿ ರೆಸಿಡೆಂಟ್ ಕಮೀಷನರ್ ರವರೊಂದಿಗೆ,  ಸಮಾಲೋಚನೆ ಮಾಡಿ ಜಮೀನು ಹುಡುಕಾಟದ ಕಡತದ ಅನುಸರಣೆ ಮಾಡುತ್ತಿದ್ದೇವೆ.

ಈ ಭಾರಿ ದೆಹಲಿ ಪ್ರವಾಸದಲ್ಲಿ ಕರ್ನಾಟಕ ಭವನದ ಐ.ಎ.ಎಸ್ ಅಧಿಕಾರಿಯೊಬ್ಬರ ಜೊತೆ, ಜಮೀನು ಮಂಜೂರು ಕಡತದ ಅನುಸರಣೆ ವಿಳಂಭವಾಗಲು ಕಾರಣಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಈ ಕಡತದ ಅನುಸರಣೆ ಆಗುತ್ತಿಲ್ಲ ಎಂಬ ವಾದ ನನ್ನದಾಗಿತ್ತು. ಅವರು ಇಲ್ಲ ನಾವು ಕಡತದ ಅನುಸರಣೆ ಮಾಡುತ್ತಿದ್ದೇವೆ ಎಂದು ಹೇಳಿದರು, ನಾನು ಪಟ್ಟು ಬಿಡದಾಗ ಅವರು ಮಾತಿಗೆ ನನ್ನ ಬಳಿ ಉತ್ತರವಿರಲಿಲ್ಲ.  

 ದಿನಾಂಕ:23.10.2024 ರಂದು ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ದೆಹಲಿ ಸರ್ಕಾರದ ಲೆಪ್ಟಿನೆಂಟ್ ಗೌರ್ವನರ್, ಶ್ರೀ ವಿಮಲ್ ಕುಮಾರ್ ಸಕ್ಷೇನಾ ರವರಿಗೆ ಜಮೀನು ಮಂಜೂರು ಮಾಡಲು ಪತ್ರ ಬರೆದಿದ್ದಾರೆ. ಇದರ ಹಿಂದೆ ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ.ಜಯಚಂದ್ರರವರ ಶ್ರಮ ಇದೆ.

ದಿನಾಂಕ:30.10.2024 ರಂದೇ, ಕೇವಲ ಒಂದು ವಾರದಲ್ಲಿಯೇ, ದೆಹಲಿ ಸರ್ಕಾರದ ಲೆಪ್ಟಿನೆಂಟ್ ಗೌರ್ವನರ್ ಶ್ರೀ ವಿಮಲ್ ಕುಮಾರ್ ಸಕ್ಷೇನಾ ರವರು, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ,  ಪತ್ರ ಬರೆದು ದೆಹಲಿಯಲ್ಲಿ ಹಾಲಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಅಲಾಟ್ ಮಾಡಿಸಿಕೊಳ್ಳಿ ಅಥವಾ ದೆಹಲಿ ಸರ್ಕಾರ ನರೇಲದಲ್ಲಿ ಎಜುಕೇಷನ್ ಹಬ್ ನಿರ್ಮಾಣ ಮಾಡಲು ಮುಂದಾಗಿದ್ದೇವೆ, ಇಲ್ಲಿ ಜಮೀನು ಮಂಜೂರು ಮಾಡಿಸಿಕೊಳ್ಳಿ, ದೆಹಲಿಯ  ಮುಖ್ಯಭಾಗದಲ್ಲಿ ಜಮೀನು ಮಂಜೂರಾತಿಗೆ ಜಮೀನೇ ಇಲ್ಲ ಎಂಬ ಮಾಹಿತಿ ಹಂಚಿಕೊAಡಿದ್ದಾರೆ.

  ಇಲ್ಲಿ ಮಲತಾಯಿ ಧೋರಣೆಯೂ ಇಲ್ಲ, ಪಕ್ಷ, ಜಾತಿ, ಧರ್ಮಗಳ ಆರೋಪಗಳಿಗೂ ಅವಕಾಶ ಇಲ್ಲ. ಆದರೇ ದಿನಾಂಕ:30.10.2024 ರಂದು ಬರೆದ ಪತ್ರಕ್ಕೆ ಮಾನ್ಯ ಮುಖ್ಯಮಂತ್ರಿಯವರಿAದ ಯಾವುದೇ ಆದೇಶ ರೆಸಿಡೆಂಟ್ ಕಮೀಷನರ್ ರವರಿಗೆ ಬಂದಿಲ್ಲ. 7 ತಿಂಗಳಾದರೂ, ಕರ್ನಾಟಕ ಸರ್ಕಾರದಿಂದ ಯಾವುದೇ ಪತ್ರ ದೆಹಲಿಗೆ ಹೋಗಿಲ್ಲ. ಇಲ್ಲಿ ನಮ್ಮ ಪಾತ್ರ ಏನು ಹೇಳಿ ಎಂದಾಗ ಬಾಯಿ ಮುಚ್ಚಿಕೊಂಡು ಸಾರಿ, ಹೇಳಿ, ಹೊರಬರಬೇಕಾಯಿತು.

ದೆಹಲಿಯಿಂದ ಬಂದು ಕಡತ ಸೃಷ್ಠಿಸಿರುವ ಕರ್ನಾಟಕ ಸರ್ಕಾರದ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದಾಗ, ಅವರಿಗೆ ಮುಖ್ಯ ಮಂತ್ರಿಯವರ ಪತ್ರದ ಯಾವುದೇ ಮಾಹಿತಿ ಬಂದ ಹಾಗೆ ಕಾಣಿಸಲಿಲ್ಲ. ನನ್ನಲ್ಲಿರುವ ಎರಡು ಪತ್ರಗಳನ್ನು ನೀಡಿ, ಕಡತ ಮುಂದುವರೆಸಲು ಚರ್ಚಿಸಲಾಯಿತು.

ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ,  ಕರ್ನಾಟಕ ರಾಜ್ಯದ, ಉನ್ನತ ಮಟ್ಟದ ಅಧಿಕಾರಿಗಳ ಪ್ರಕಾರ ಎಲ್ಲಿ ಜಮೀನು ನೀಡುತ್ತಾರೋ ಅಲ್ಲಿ ಮಂಜೂರು ಮಾಡಿಸಿಕೊಳ್ಳಲಿ, ನಂತರ ಮಂಜೂರಾತಿ ಪತ್ರ ಪಡೆದು, ದೆಹಲಿಯಲ್ಲಿ ಉಳಿದಿರುವ ಜಮೀನು ಹುಡುಕಿ, ಜಮೀನು ಅದಲು-ಬದಲು ಮಾಡಿಸಿಕೊಳ್ಳಲು ಶ್ರಮಿಸೋಣ, ಈ ರೀತಿ ಬಹಳ ಸರ್ಕಾರಗಳು ಮಾಡಿಕೊಂಡಿವೆ ಎಂಬ ಸಲಹೆಗಳನ್ನೂ ನೀಡಿದ್ದಾರೆ.

ಒಂದು ವೇಳೆ ಸರ್ಕಾರ ಈ ಜಮೀನು ಹುಡುಕಲು ಸ್ಪೆಷಲ್ ಆಫೀಸರ್ ಆಗಿ ನೇಮಕ ಮಾಡಿದಲ್ಲಿ, ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಒಬ್ಬ ಐ.ಆರ್.ಎಸ್ ಅಧಿಕಾರಿ ಮತ್ತು ಅವರ ತಂಡ ಮುಂದೆ ಬಂದಿದೆ, ಅವರಿಗೆ ಬಡ ವಿದ್ಯಾರ್ಥಿಗಳ ಗೋಳಿನ ಅರಿವಿದೆ. ಈ ವಿಚಾರವನ್ನು ಮುಖ್ಯಮಂತ್ರಿಯವರಿಗೆ, ಲೊಕೋಪಯೋಗಿ ಸಚಿವರಿಗೆ, ದೆಹಲಿ ವಿಶೇಷ ಪ್ರತಿನಿಧಿ ಮತ್ತು ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕಿದೆ.

ಅದೇ ರೀತಿ ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 14 ಜನ ರಾಜ್ಯಸಭಾ ಸದಸ್ಯರಿಗೂ, ಇದೂವರೆಗೂ ನಡೆದಿರುವ ಪತ್ರ ವ್ಯವಹಾರಗಳ ಸಹಿತ  ಪತ್ರ ಬರೆಯಲಾಗಿದೆ.

ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಆಯಾ ವ್ಯಾಪ್ತಿಯ ಲೋಕಸಭಾ ಸದಸ್ಯರಿಗೆ, ನಮ್ಮ ಮಕ್ಕಳಿಗೆ ದೆಹಲಿಯಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲು ಸಹಕರಿಸಿ ಎಂದು ಮನವಿ ಪತ್ರ ನೀಡಲು ಚಿಂತನೆ ಆರಂಭವಾಗಿದೆ.