TUMAKURU:SHAKTHIPEETA FOUNDATION
ವಾಣಿ ವಿಲಾಸ ಹೆಸರು ಕೇಳಿದರೆ ಮೈಜುಂ ಎನಿಸುತ್ತಿದೆ. ಇತಿಹಾಸದ ಪ್ರಕಾರ ಮೈಸೂರಿನ ಮಹಾರಾಣಿಯವರ ದಿವ್ಯದೃಷ್ಟಿ, ಮಧ್ಯಕರ್ನಾಟಕದ ಬರದ ನಾಡಿನಲ್ಲಿ ಮಲೆನಾಡು ಸೃಷ್ಠಿಸುವ ವಾಟರ್ ಬ್ಯಾಂಕ್ ಆಗಿ ಕಂಗೋಳಿಸುತ್ತಿದೆ.
ನಾನು ಸಹ ಈಗ ಈ ವಾಟರ್ ಬ್ಯಾಂಕ್ ನೀರಿನ ಪಲಾನುಭವಿ. ನಮ್ಮ ಶಕ್ತಿಪೀಠ ಕ್ಯಾಂಪಸ್ ಪರಿಕಲ್ಪನೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದೆ. ಇಲ್ಲಿ ಅಂತರರಾಷ್ಟಿçÃಯ ಮಟ್ಟದ ಟೂರಿಸಂ ನಿರ್ಮಾಣವಾಗಬೇಕು. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ದೊರಕಬೇಕು ಎಂಬುದು ನನ್ನ ಕನಸಾಗಿದೆ.
ಈ ಹಿನ್ನಲೆಯಲ್ಲಿ ದಿನಾಂಕ:29.05.2025 ರಂದು ಬೆಂಗಳೂರಿನಲ್ಲಿ, ವಾಣಿ ವಿಲಾಸ ಮಾಲೀಕರಾದ ಜಲಸಂಪನ್ಮೂಲ ಇಲಾಖೆಯ, ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳಾದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಣ್ಣಚಿತ್ತಯ್ಯನವರು, ಭಧ್ರಾಮೇಲ್ದಂಡೆ ಮುಖ್ಯ ಇಂಜಿನಿಯರ್ ಶ್ರೀ ಲಮಾಣಿಯವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಯವರ ಸÀ¯ಹಾಗಾರರಾದ ಶ್ರೀ ಕೆ.ಜೈಪ್ರಕಾಶ್ ರವರನ್ನು ಭೇಟಿಯಾಗಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಚರ್ಚೆಯಲ್ಲಿ 1907 ರಲ್ಲಿ ಡ್ಯಾಂ ನಿರ್ಮಾಣವಾದ ದಿನದಿಂದ, ಅಗತ್ಯವಿರುವ ಎಲ್ಲಾ ಮಾಹಿತಿಗಳ ಸಂಗ್ರಹ ಅಗತ್ಯವೆನಿಸಿತು. ಈ ಹಿನ್ನಲೆಯಲ್ಲಿ ವಾಣಿ ವಿಲಾಸ ಬಗ್ಗೆ ಸಂಶೋಧನೆ ಮಾಡಿರುವವರು ಇದ್ದಲ್ಲಿ ನನ್ನ ಗಮನಕ್ಕೆ ತರಲು ಓದುಗರಲ್ಲಿ ಮನವಿ.
ಹೋರಾಟಗಾರರು ಒಂದು ರೀತಿಯಲ್ಲಿ ಪಿ.ಹೆಚ್.ಡಿ ಮಾಡಿರುವವರಗಿಂತ ಹೆಚ್ಚಿಗೆ ತಿಳಿದು ಕೊಂಡಿರುತ್ತಾರೆ. ಅವರು ಸಹ ಸಂಶೋಧಕರು ಎಂದರೆ ತಪ್ಪಾಗಲಾರದು.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುಧಾಕರ್ರವರು ಮತ್ತು ಚಿತ್ರದುರ್ಗ ಲೋಕಸಭಾ ಸದಸ್ಯರು ಮತ್ತು ಜಿಲ್ಲಾ ದಿಶಾ ಕಮಿಟಿ ಅಧ್ಯಕ್ಷರಾದ ಶ್ರೀ ಗೋವಿಂದ ಎಂ ಕಾರಜೋಳ ರವರೊಂದಿಗೆ ಸಮಾಲೋಚನೆ ನಡೆಸಲಾಗುವುದು.
ನಂತರ ಜಲಸಂಪನ್ಮೂಲ ಸಚಿವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಬಳಿ ನಿಯೋಗ ಹೋಗುವ ಆಲೋಚನೆಯೂ ಇದೆ. ಆಸಕ್ತರು ಜೊತೆಗೂಡಬಹುದು.