TUMAKURU:SHAKTHIPEETA FOUNDATION
‘ಕನ್ನೇರಿ ಶ್ರೀಗಳ ಕನಸಿನಂತೆ’ ಕೃಷಿ ಆಶ್ರಮ ಎಂದರೆ, ಒಬ್ಬ ರೈತನ ಜಮೀನಿನಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ತಾರಸಿ ಮನೆಗೆ ಹತ್ತಾರು ಜನರು ಬಂದು, ಅವರು ಸಾವಯವ ಕೃಷಿಯಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಮಾಹಿತಿ ಪಡೆದರೇ, ಅದೇ ಒಂದು ‘ಕೃಷಿ ಆಶ್ರಮ’ ವಾಗಲಿದೆ.
ಇಲ್ಲಿ ಎಲ್ಲರೂ ಎಲ್ಲವನ್ನೂ ಮಾಡಬೇಕೆಂದಿಲ್ಲ. ಇಚ್ಚೆಯುಳ್ಳವರು ಅವರ ಪರಿಕಲ್ಪನೆಯಂತೆ ಕೃಷಿ ಆಶ್ರಮಗಳನ್ನು ತೆರೆಯಬಹುದು. ಯಾರೂ ಏನೇ ಮಾಡಬೇಕೆಂದರೂ, ‘ಕೃಷಿ ಆಶ್ರಮ ಮಾರ್ಗಸೂಚಿ’ ಯಲ್ಲಿ ಎಲ್ಲಾ ಮಾಹಿತಿ ಇರಬೇಕು. ಯಾವ ಕೃಷಿ ಆಶ್ರಮದವರು ಯಾವ ಯೋಜನೆಯನ್ನು ಚೆನ್ನಾಗಿ ಮಾಡಿದ್ದಾರೆ, ಎಂಬ ಮಾಹಿತಿಯೂ ಲಭ್ಯವಾಗಬೇಕು.
ಕೃಷಿ ಆಶ್ರಮಗಳ, ರೈತ ವಿಜ್ಞಾನಿಗಳು, ಸಲಹಾಗಾರರು, ಜ್ಞಾನಿಗಳು ನೀಡುವ ಸಲಹೆಗಳ ಪಟ್ಟಿಯೂ ಮಾರ್ಗಸೂಚಿಯಲ್ಲಿ ಇರಲಿದೆ. ವಿಶ್ವದ 198/212 ದೇಶಗಳ ಪ್ರತಿನಿಧಿಗಳು, ಕರ್ನಾಟಕ ರಾಜ್ಯದ ಯಾವ ಕೃಷಿ ಆಶ್ರಮದಲ್ಲಿ ಏನು ನೋಡಬಹುದು. ಏನು ಕಲಿಯಬಹುದು ಎಂಬ ಮಾಹಿತಿಯೂ ದೊರೆಯಬೇಕು.
ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕೃಷಿ ಆಶ್ರಮಗಳು ಇರಬೇಕು. ಅವುಗಳು ಆಯಾ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ/ಬಡಾವಣೆಗಳಲ್ಲಿನ ಮಾಹಿತಿಯನ್ನು ನೀಡುವವರನ್ನು ಗರುತಿಸಿ ಪಟ್ಟಿ ಮಾಡವಂತಿರಬೇಕು.
‘ನ0ಬರ್ ಒನ್ ಕರ್ನಾಟಕ @ 2047’ ಈ ಘೋಷಣೆಯ ಬಗ್ಗೆ, ನಮ್ಮ ಕೃಷಿ ಆಶ್ರಮಗಳೇ ಬೆಳಕು ಚೆಲ್ಲ ಬೇಕು. ಪ್ರತಿಯೊಂದು ಗ್ರಾಮ/ಬಡಾವಣೆಗಳ ರೈತರು ಆಯಾ ಗ್ರಾಮ ಪಂಚಾಯಿತಿ/ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯಲ್ಲಿ ನಾಮಿನಿ ಸದಸ್ಯ’ ರಾಗ ಬೇಕು.
ಆ ಮೂಲಕ ಅಳಿವಿನಂಚಿನಲ್ಲಿರುವ ಎಲ್ಲಾ ಗಿಡಗಳ ಸಂರಕ್ಷಣೆ, ಪ್ರತಿಯೊಂದು ಬೆಳೆಗಳ ಮಾಹಿತಿ ನೀಡುವಂತಿರಬೇಕು. ‘ಗ್ರಾಸ್ ರೂಟ್ ಲೆವೆಲ್ ಇನ್ನೋವೇರ್ಸ್’ ಹುಡುಕಿ, ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು ಮನೆಯ ಬಾಗಿಲಿಗೆ ತಲುಪುವಂತೆ ಮಾಡುವುದು ಕೃಷಿ ಆಶ್ರಮಗಳ ಗುರಿ ಆಗಬೇಕು.
ಬೆಳೆದ ಬೆಳೆಯ ಮೌಲ್ಯವರ್ಧನೆ, ಉತ್ತಮ ಮಾರುಕಟ್ಟೆ, ಜೊತೆಗೆ ನಮ್ಮ ಕುಟುಂಬದವರು ತಿನ್ನುವ ಆಹಾರ ವಿಷಮುಕ್ತವಾಗಿರಬೇಕು. ವೈಜ್ಞಾನಿಕವಾಗಿ ಸಾವಯವ ಕೃಷಿ ಮಾಡಬೇಕು. ಪಂಚಭೂತಗಳ ರಕ್ಷಣೆ ಆದ್ಯತೆ ಯಾಗಬೇಕು. ಸಾವಯವ ಕೃಷಿ ಹೆಸರಿನಲ್ಲಿ ದಂಧೆ ನಡೆಯ ಬಾರದು. ನಮ್ಮ ಬೆಳೆಗೆ ನಾವೇ ಬೆಲೆ ನಿಗಧಿ ಮಾಡಬೇಕು. ಅದು ಪಾರದರ್ಶಕವಾಗಿರಬೇಕು.
ಸಲೂನ್ ಶಾಪ್ನವರು, ರಾಜ್ಯಾದ್ಯಾಂತ ಬೆಲೆ ನಿಗಧಿ ಮಾಡುತ್ತಾರೆ. ಅದೇ ರೀತಿ ಕೃಷಿ ಆಶ್ರಮಗಳು ಯಾವ ಉತ್ಪನ್ನಕ್ಕೆ, ಯಾವ ಪ್ರದೇಶದಲ್ಲಿ ಎಷ್ಟು ಬೆಲೆ ನಿಗಧಿ ಮಾಡ ಬೇಕು ಎಂಬ ಪರಿಪಾಠ ಇಟ್ಟುಕೊಂಡರೇ ಬಹಳ ಒಳ್ಳೆಯದು.
ಪ್ರಸ್ತುತ ಕೃಷಿ ಆಶ್ರಮಗಳ ಡಿಜಿಟಲ್ ದಾಖಲೆ ಆರಂಭವಾಗಿದೆ. ಕೃಷಿ ಆಶ್ರಮಗಳ ವಿಜ್ಞಾನಿ ಶ್ರೀ ಬಿ.ಎಂ.ನಾಗಭೂಷಣರವರು 108 ಕೃಷಿ ಆಶ್ರಮಗಳು, 109 ರ ಗಡಿದಾಟಿವೆ ಎನ್ನುತ್ತಾರೆ, ವಿಜಯನಗರ ಜಿಲ್ಲೆಯ ಶ್ರೀ ವಿಶ್ವೇಶ್ವರಸಜ್ಜನ್ ರವರು ಕೃಷಿ ಆಶ್ರಮಗಳು ಎಷ್ಟೇ ಇರಲಿ, ಅವುಗಳು ಕೃಷಿಕರ ಜ್ಞಾನ ಕೇಂದ್ರಗಳಾಗ ಬೇಕು ಎನ್ನುತ್ತಾರೆ. ಚಿತ್ರದುರ್ಗ ಜಿಲ್ಲೆಯ ಶ್ರೀ ಜ್ಞಾನೇಶ್ ರವರು ಮತ್ತು ಶ್ರೀ ರವಿತೇಜರವರು ಮೊದಲು 108 ಕೃಷಿ ಆಶ್ರಮಗಳ ಆತ್ಮಾವಲೋಕನ ಆಗಬೇಕು ಎನ್ನುತ್ತಾರೆ.
1008 ಕೃಷಿ ಆಶ್ರಮಗಳ ಕನಸು ಬಿತ್ತಿರುವ ಶ್ರೀ ಬಿ.ಎಂ.ನಾಗಭೂಷಣರವರು, 10008 ಕೃಷಿ ಆಶ್ರಮಗಳು ರಚನೆ ಆಗಬೇಕು ಎನ್ನುವ ಶ್ರೀ ಜಗನ್ನಾಥ್ ರಾವ್ ರವರ ಜೊತೆಗೆ, ನನ್ನ ಕನಸು ಕರ್ನಾಟಕ ರಾಜ್ಯದ 6022 ಗ್ರಾಮ ಪಂಚಾಯಿತಿಗಳ, ಪ್ರತಿಯೊಂದು ಗ್ರಾಮ ಹಾಗೂ 315 ನಗರ ಪ್ರದೇಶಗಳ ಪ್ರತಿಯೊಂದು ಬಡಾವಣೆಗಳ ಕೃಷಿ ಆಶ್ರಮಗಳ ಜ್ಞಾನಿಗಳು, ಆಯಾ ವ್ಯಾಪ್ತಿಯ ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯಲ್ಲಿ ನಾಮಿನಿ ಸದಸ್ಯ’ ರಾಗುವ ಮೂಲಕ ಒಂದು ಇತಿಹಾಸ ಸೃಷ್ಠಿಯಾಬೇಕು.
ರಾಜ್ಯದಲ್ಲಿ ಇರುವ 41000 ಕ್ಕೂ ಹೆಚ್ಚು ಕೆರೆ-ಕಟ್ಟೆಗಳ, ಅಕ್ಕ-ಪಕ್ಕದಲ್ಲಿ ‘ಪಂಚವಟಿ ಗಿಡ’ ಹಾಕುವ ಮೂಲಕ, ‘ವಿಶ್ವ ದಾಖಲೆ’ ಮಾಡುವುದರ ಜೊತೆಗೆ, ಇಡೀ ರಾಜ್ಯದ ಎಲ್ಲಾ ಜಲಸಂಗ್ರಹಾಗಾರಗಳಿಗೆ ‘ಊರಿಗೊಂದು ಕೆರೆ – ಆ ಕೆರೆಗೆ ನದಿ ನೀರು’ ಘೋಷಣೆಯಡಿ, ನದಿ ನೀರು ಅಲೋಕೇಷನ್ ಮಾಡಿಸಲು ಕೃಷಿ ಆಶ್ರಮಗಳ ಬಲವಾದ ಆಯುಧಗಳಾಗಬೇಕು.
ನೀತಿ ಆಯೋಗದ ಸಲಹೆಗಳ ಮೇರೆಗೆ, 2047 ರ ವೇಳೆಗೆ ನಮ್ಮ ರಾಜ್ಯ ಎಲ್ಲಾ ವಿಭಾಗಗಳಲ್ಲೂ ನಂಬರ್ ಆಗಲೇ ಬೇಕು. ಇದಕ್ಕೆ ‘ಮೊದಲ ಮೆಟ್ಟಿಲು ಕೃಷಿ ಆಶ್ರಮಗಳೇ ಆಗಿರಬೇಕು’. ಇದು ಶಕ್ತಿಪೀಠ ಕ್ಯಾಂಪಸ್ ಕನಸು. ಇದಕ್ಕೆ ಪೂರಕವಾದ ಕೃಷಿ ಆಶ್ರಮ ಆರಂಭಿಸುವ ಚಿಂತನೆ ನಮ್ಮದಾಗಿದೆ.
ದಿನಾಂಕ:01.08.1988 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು ಕುಂದರನಹಳ್ಳಿ ಶ್ರೀ ಗಂಗಮಲ್ಲಮ್ಮ ದೇವಿಗೆ ಪೂಜಿಸಿ, ನಮ್ಮೂರಿನ ಪಕ್ಕದ ಬಿದರೆಹಳ್ಳ ಕಾವಲ್ನಲ್ಲಿ ಇರುವ ಸರ್ಕಾರಿ ಜಮೀನಿನನಲ್ಲಿ ಒಂದು ಬೃಹತ್ ಕೈಗಾರಿಕೆ ಸ್ಥಾಪಿಸಲು ಪ್ರತಿಜ್ಞೆ ಮಾಡಿದ್ದು, ಅಲ್ಲಿ ಈಗ ರೂ 6400 ಕೋಟಿ ವೆಚ್ಚದಲ್ಲಿ, ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ‘ಹೆಚ್.ಎ.ಎಲ್ ವತಿಯಿಂದ ಯುದ್ಧ ವಿಮಾನ ಘಟಕ’ ಆರಂಭವಾಗಿದೆ. ಇದಕ್ಕೆ ಬೆನ್ನಲೆಬು ಆಗಿ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ನಿಂತಿದ್ದರು.
ದಿನಾ0ಕ:01.08.2025 ರಂದು ಶಕ್ತಿಪೀಠ ಕ್ಯಾಂಪಸ್ನಲ್ಲಿ, ನಿರ್ಮಾಣವಾಗುತ್ತಿರುವ ವಿಶ್ವದ 108 ಶಕ್ತಿಪೀಠಗಳ, ದೇಶದ 12 ಜ್ಯೀರ್ತಿಲಿಂಗಗಳ, ಸರ್ವಧರ್ಮದ ಪವಿತ್ರ ಸ್ಥಳಗಳ ಪ್ರಾತ್ಯಾಕ್ಷಿಕೆಯ ಅಕ್ಕ ಪಕ್ಕದಲ್ಲಿೆ, ಒಂದೊ0ದು ಕೃಷಿ ಆಶ್ರಮದವರು, ಒಂದೊ0ದು ಪ್ರಭೇದದ ಗಿಡ ಹಾಕುವ ಮೂಲಕ ‘ನಂಬರ್ ಒನ್ ಕರ್ನಾಟಕ @ 2047’ ಘೋಷಣೆಯ ಪ್ರತಿಜ್ಞೆ ಮಾಡೋಣ. ಆ ಮೂಲಕ ‘ಕನ್ನೇರಿ ಶ್ರೀಗಳ ಕನಸಿನಂತೆ’ ಕೃಷಿ ಆಶ್ರಮಗಳ ಬೆಳವಣಿಗೆ ವಿಶ್ವ ವ್ಯಾಪ್ತಿ ಸುದ್ಧಿಯಾಗುವಂತೆ ಚಿಂತನೆ ಆರಂಭಿಸೋಣ.
ನಮ್ಮ ಕ್ಯಾಂಪಸ್ನಲ್ಲಿ 1008 ಪ್ರಭೇಧಗಳ ಗಿಡಗಳನ್ನು ಹಾಕಲು ಸಿದ್ಧತೆ ಆರಂಭವಾಗಿದೆ. ಈಗಾಗಲೇ 400 ಕ್ಕೂ ಹೆಚ್ಚು ತಳಿಗಳ ಗಿಡಗಳು ಬೆಳೆಯುತ್ತಿವೆ. ಇದೇ ದಿವಸ ಶಕ್ತಿಪೀಠ ಕ್ಯಾಂಪಸ್ ಶಂಕುಸ್ಥಾಪನೆ ಆಗಲಿದೆ.
ನಮ್ಮ ಕ್ಯಾಂಪಸ್ ಪಕ್ಕದಲ್ಲಿ ಇರುವ ವಾಣಿವಿಲಾಸ ಕಾಲುವೆಯ ಅಕ್ಕ-ಪಕ್ಕದಲ್ಲಿನ, 750 ಎಕರೆ ಸರ್ಕಾರಿ ಜಮೀನಿನನಲ್ಲಿ ಅಗ್ರಿ ಟೂರಿಸಂ, ಇಕೋಟೂರಿಸಂ, ವಾಟರ್ ಟೂರಿಸಂ ಮತ್ತು ರಾಜ್ಯದಲ್ಲಿ ಇರುವ ಸುಮಾರು 1350 ಕ್ಕೂ ಹೆಚ್ಚು ಜಾತಿ/ಉಪಜಾತಿಗಳ ಕಲ್ಚರ್ ಟೂರಿಸಂ ಸ್ಥಾಪನೆ ಮಾಡಲು ನಿರ್ಣಯ ಕೈಗೊಳ್ಳೋಣ. ಇದನ್ನು ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಕ್ಯಾಂಪಸ್ ಮಾಡುವ ಕನಸು ಕಾಣಲೇಬೇಕು.
ಈ ಎಲ್ಲಾ ಯೋಜನೆಗಳಿಗೆ ರಾಜ್ಯದ 28 ಜನ ಲೋಕಸಭಾ ಸದಸ್ಯರು, 14 ಜನ ರಾಜ್ಯಸಭಾ ಸದಸ್ಯರು, 225 ಜನ ವಿಧಾನಸಭಾ ಸದಸ್ಯರು ಮತ್ತು 75 ಜನ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 342 ಜನ ನಮಗೆ ಬೆನ್ನೆಲಬು ಆಗಿ ನಿಲ್ಲುವಂತಹ ಪಕ್ಷ ರಹಿತ, ಜಾತಿ ರಹಿತ ವಾತವಾರಣ ಸೃಷ್ಠಿ ಮಾಡಲೇ ಬೇಕು.
ಎಲ್ಲಾ ಕೃಷಿ ಆಶ್ರಮಗಳು ದುಡಿಮೆಯ ಜೊತೆಗೆ, ಶೇ 10 ರಷ್ಟು ಸಂಪಾದನೆ, ದೇವರು ಕೊಟ್ಟಿರುವ ದಿನದ 24 ಗಂಟೆ ಸಮಯದಲ್ಲಿ ಶೇ 10 ರಷ್ಟು ಸಮಯವನ್ನು ದೇಶ ಕಟ್ಟಲು ವಿನಿಯೋಗಿಸೋಣ. ನಮ್ಮ ಜ್ಞಾನವನ್ನು ದಾನ ಮಾಡೋಣ ಬನ್ನಿ.
– ಕುಂದರನಹಳ್ಳಿ ರಮೇಶ್