TUMAKURU:SHAKTHIPEETA FOUNDATION
1. ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಂಶೋಧನೆಯಿAದ ವಾಣಿ ವಿಲಾಸ ಕಾಲುವೆಯ ಅಕ್ಕ-ಪಕ್ಕ ಸರ್ಕಾರಿ ಜಮೀನು ಇದೆ ಎಂಬ ಸಂಶೋಧನೆ.
2. 2018 ರಲ್ಲಿ ವಾಣಿ ವಿಲಾಸ ಕಾಲುವೆ ಪಕ್ಕ ಇರುವ/ ನಮ್ಮ ಶಕ್ತಿಪೀಠ ಕ್ಯಾಂಪಸ್ ಗೆ ಹೊಂದಿಕೊAಡಿರುವ, ಉದ್ದೇಶಿತ ಶ್ರೀಗಂಧ ಕೃಷಿ ಆಶ್ರಮದ ಶ್ರೀ ಎಸ್.ಪಿ.ರಾಜೇಶ್ ರವರ ಜಮೀನು ಹದ್ದು ಬಸ್ತು ಪಿಕ್ಸ್ ಮಾಡುವಾಗ, ಹೆಚ್ಚುವರಿ 3 ಎಕರೆ ಜಮೀನು ಸಿಕ್ಕಿದಾಗ, ಈ ಜಮೀನು ಯಾರದು ಎಂಬ ನಮ್ಮ ಆಲೋಚನೆಯೇ ಇಂದು 750 ಎಕರೆ ಸರ್ಕಾರಿ ಜಮೀನು ದೊರೆತ ಹಿನ್ನಲೆ.
3. ನನ್ನ ಮನಸ್ಸಿಗೆ ಐಡಿಯಾ ಹೊಳೆದ ಕೂಡಲೇ, ರಾಜೇಶ್ ಈ ಜಮೀನು ನಮ್ಮದಲ್ಲ, ಸರ್ಕಾರಿ ಜಮೀನು, ಇದನ್ನು ಹೊರತು ಪಡಿಸಿ, ಗಡಿ ಫಿಕ್ಸ್ ಮಾಡಿಕೊಳ್ಳೋಣ ಎಂಬ ಸಲಹೆಗೆ ನನ್ನ ಸಹೋದರ ರಾಜೇಶ್ ಒಪ್ಪಿದರು. ಯಾರಾದರೂ ಇರುವ ಜಮೀನಿನನ್ನು ಬಿಡುತ್ತಾರಾ ಎಂದು ನಮ್ಮ ಜಮೀನು ನೋಡಿಕೊಳ್ಳುತ್ತಿರುವ ಶ್ರೀ ಬಸವರಾಜ್ ರವರು ನಕ್ಕರು.
4. ಈ ಜಮೀನಿನನಲ್ಲಿ ಒಂದು ಜಲಸಂಗ್ರಹಾರ ಮೊಡೋಣ. ಜೊತೆಗೆ ೨೫೦ ಗಿಡ ಹಾಕಿ ಬೆಳೆಸೋಣ ಎಂಬ ನಿರ್ಧಾರಕ್ಕೆ ಬಂದೆವು.
5. ನನ್ನ ಆತ್ಮೀಯ ಸ್ನೇಹಿತ ಜಿ.ಐ.ಎಸ್ ತಜ್ಞ ಶ್ರೀ ಬಸವರಾಜ್ ಸುರಣಗಿಯವರಿಂದ ಎರಡು ಗ್ರಾಮಗಳ ಸಮೀಕ್ಷೆ ನಡೆಸಿ, ನಕ್ಷೆ ಸಿದ್ಧಪಡಿಸಿ, ಇದು ನಿಗಮದ ಜಮೀನು ಎಂದು ಖಾತರಿ ಪಡಿಸಿಕೊಂಡೆವು.
6. ನAತರ ಹಿರಿಯೂರಿನಲ್ಲಿ ತಹಶೀಲ್ದಾರ್ ಆಗಿದ್ದ ಶ್ರೀ ರಂಗೇಗೌಡರವರು ಮತ್ತು ಎ.ಡಿ.ಎಲ್.ಆರ್ ಶ್ರೀ ಕುಲಕರ್ಣಿ ರವರ ಬಳಿ ಸಮಾಲೋಚನೆ ಮಾಡಿದಾಗ, ಅವರು ಇಬ್ಬರು ಹೇಳಿದ ಮಾತು, ರಮೇಶ್ ರವರೇ ನೀವೂ ಎಲ್ಲಿ ಹೋದರೂ ಒಂದು ವಿಶೇಷತೆ ಇದ್ದೇ ಇರುತ್ತದೆ, ಎಂದು ನಕ್ಕು ನನ್ನ ಸಂಶೋಧನೆಗೆ ಸಹಮತ ವ್ಯಕ್ತ ಪಡಿಸಿದರು, ಏಕೆಂದರೆ ಅವರಿÀಬ್ಬರೂ ತುಮಕೂರಿನಲ್ಲಿ ಕಾರ್ಯನಿರ್ವಹಿಸಿದ್ದರು, ನನ್ನ ಚಟುವಟಿಕೆ ಗಮನಿಸಿದ್ದವರು.
7. ಅಂದೇ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪÀಕ ನಿರ್ದೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರ ಗಮನಕ್ಕೆ ತಂದಾಗ, ನನ್ನ ಮನವಿಯನ್ನು ಸ್ವೀಕರಿಸಿ ಸಮೀಕ್ಷೆಗೆ ಆದೇಶ ಮಾಡಿದರು. ಅಂದಿನ ಸಮೀಕ್ಷೆ ಆದೇಶದ ಪಲಿತಾಂಶ ಇಂದು 750 ಎಕರೆ ನಿಗಮದ ಜಮೀನು ಪತ್ತೆ ಆಗಿದೆ.
8. ಮುಖ್ಯ ಇಂಜಿನಿಯರ್ ಆಗಿದ್ದ ಶ್ರೀ ಶಿವಕುಮಾರ್ರವರು, ಶ್ರೀ ರಾಘವನ್ರವರು, ಜೈಪ್ರಕಾಶ್ ರವರ ನಂತರ ಎಂ.ಡಿ.ಯಾಗಿದ್ದ ಶ್ರೀ ಲಕ್ಷö್ಮಣರಾವ್ ಪೇಶ್ವೇ ರವರ ಸಹಕಾರ ನಿಜಕ್ಕೂ ಅದ್ಭುತ.
9. ಈಗ ದಿನಾಂಕ: 29.05.2025 ರಂದು ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ ನಡೆದ ಸಭೆಯಲ್ಲಿ ನಿಗಮದ ವ್ಯªಸ್ಥಾಪಕ ನಿರ್ದೇಶಕರಾದ ಶ್ರೀ ಸಣ್ಣಚಿತ್ತಯ್ಯನವರ ಸಂತೋಷಕ್ಕೆ ಪಾರವೇ ಇಲ್ಲ. ಎಂತಹ ಅದ್ಭುತ ಆಲೋಚನೆ/ ಸಂಶೋಧನೆ, ಇದೂವರೆಗೂ ನನ್ನ ಗಮನಕ್ಕೆ ಏಕೆ ತರಲಿಲ್ಲ. ಎಂಬ ಅವರ ಮಾತು ನಿಜಕ್ಕೂ ಮೆಚ್ಚುವಂತಿತ್ತು.
– ಮುಂದುವರೆಯುವುದು