29th June 2025
Share

TUMAKURU:SHAKTHIPEETA FOUNDATION

  ತುಮಕೂರಿಗೆ ಹೇಮಾವತಿ ಯೋಜನೆ ನೀರು ಬರುತ್ತದೆ ಎಂದು  ಅಧ್ಯಯನ ವರದಿ ನೀಡಿದವರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು, ಹೇಮಾವತಿ ತುಮಕೂರಿಗೆ ಬರುವುದಿಲ್ಲಾ ಸುಳ್ಳು ಹೇಳುತ್ತೀಯ, ರಾಜಕಾರಣಿಗಳನ್ನು ಎತ್ತಿಕಟ್ಟುತ್ತೀಯ ಎಂದು ಅವರಿಗೆ ಸರ್ಕಾರದಿಂದ ಷೋಕಾಸ್ ನೋಟೀಸ್ ಸಹ ನೀಡಲಾಗಿತ್ತಂತೆ.

  ಆರಂಭದಲ್ಲಿ ಹೇಮಾವತಿ ತುಮಕೂರಿಗೆ ಬರುತ್ತದೆ, ಎಂಬ ಅವರ ಮಾತಿಗೆ ಮೊಟ್ಟಮೊದಲು ಬೆಲೆ ಕೊಟ್ಟ ರಾಜಕಾರಣಿ ತುಮಕೂರು ಜಿಲ್ಲೆಯ ಮಾಜಿ ಸಚಿವರಾದ ದಿ.ಹುಚ್ಚುಮಾಸ್ತಿಗೌಡರಂತೆ. ನಂತರ ಮಾಜಿ ಮುಖ್ಯಮಂತ್ರಿಯವರಾದ ದಿ.ದೇವರಾಜ್ ಅರಸ್‌ರವರು ಯೋಜನೆಗೆ ಮುನ್ನುಡಿ ಬರೆದರಂತೆ.

  ಅದೇ ರೀತಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರನ್ನು ಪೂರ್ವಕ್ಕೆ ತಿರುಗಿಸಬಹುದು, ನೇತ್ರಾವತಿ/ಎತ್ತಿನಹೊಳೆ ಸೇರಿದಂತೆ ಇತರೆ ಹಲವಾರು ನದಿಗ¼ ನೀರು ಬರುತ್ತದೆ,  ಎಂಬ ಅವರ ಮಾತಿಗೆ ಮೊಟ್ಟಮೊದಲು ಬೆಲೆ ಕೊಟ್ಟ ರಾಜಕಾರಣಿ, ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮಾಜಿ ಮುಖ್ಯಮಂತ್ರಿಯವರಾದ ದಿ.ಎಸ್.ಎಂ.ಕೃಷ್ಣರವರು ರವರು ಹಾಗೂ ಕಾನೂನು ಮತ್ತು ಪ್ರವಾಸೋಧ್ಯಮ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರು ಯೋಜನೆಗೆ ಮುನ್ನುಡಿ ಬರೆದರು. ಈ ಹೋರಾಟಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ.

  ನಂತರ ಬಂದ ಹಲವಾರು ರಾಜಕಾರಣಿಗಳು ಯೋಜನೆಗಳಿಗೆ ಶ್ರಮಿಸಿರುವುದು ಇತಿಹಾಸ. ನಾನು ಅವರ ಜೊತೆ ಸುಮಾರು 25 ವರ್ಷ ನಿರಂತರ ಒಡನಾಟ ಇಟ್ಟುಕೊಂಡವನು, ಅವರ ಪರಿಕಲ್ಪನೆಯ  ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ಯೋಜನೆಯಡಿ, ಸುಮಾರು 1400 ಟಿ.ಎಂ.ಸಿ ಅಡಿ ನೀರಿನಿಂದ ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಬೇಕು. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಆಧ್ಯತೆ ಮೇರೆಗೆ ಯೋಜನೆ ಜಾರಿಮಾಡಬೇಕು ಎಂಬ ಕನಸು ಅವರದಾಗಿತ್ತು.

 ಹೇಮಾವತಿ ಮೂಲ ಯೋಜನೆಯನ್ನು ನೂರಾರು ಭಾರಿ, ರಾಜಕಾರಣಿಗಳ ಲಾಭಿಗೆ ತಕ್ಕಂತೆ ಅಲೋಕೇಷನ್ ಬದಲಾಯಿಸಿ ಈಗ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರ ಕಿಚ್ಚು ಆರಂಭವಾಗಿದೆ. ‘ ‘ನನ್ನ ಪ್ರಕಾರ ಹೇಮಾವತಿ ನದಿ ನೀರನ್ನು ರಾಜಕಾರಣಿಗಳು ತನಗೆ ಇಷ್ಟ ಬಂದ0ತೆ ಬಳಸಿಕೊಂಡಿದ್ದಾರೆ’ ಎಂದರೆ ತಪ್ಪಾಗಲಾರದು. ಯಾವ ತಜ್ಞ, ಯಾವುದೇ ವೇದಿಕೆಯಲ್ಲಿ ಬರಲಿ ಚಾಲೇಂಜ್ ಮಾಡುತ್ತೇನೆ. ಆತ ಎದೆ ಮುಟ್ಟಿ ಹೇಳಲು ಸಾದ್ಯವೇ ಇಲ್ಲ.ನನಗೆ ಇಂಚಿAಚು ಮಾಹಿತಿ ಅರಿವಿದೆ.

ಈ ಮೂಲಕ್ಕೆ ನಾನು ಈಗ ಹೋಗುವುದಿಲ್ಲ. ಈ ನೆಪದಲ್ಲಿಯಾದರೂ, ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಲಿ. ನದಿ ನೀರಿನಲ್ಲಿ ರಾಜಕೀಯ ಮಾಡಬಾರದು. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಲೇ ಬೇಕು.

ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ದಿ:05.06.2025 ರಂದು ಫೋನ್ ಮಾಡಿ, ನೋಡಪ್ಪಾ ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೂರಬಾರದಂತೆ, ಈಗ ಹೇಮಾವತಿ ಗಲಾಟೆ ಜೋರಾಗಿದೆ. ಈಗ ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ಯೋಜನೆಯಡಿ, ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ, 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೂ, ನದಿ ನೀರಿನ ಅಲೋಕೇಷನ್  ಮಾಡಲು ಪಿ.ಐ.ಎಲ್ ಹಾಕಲು ಒಳ್ಳೆ ಸಮಯ ಎಂದು ಸಲಹೆ ನೀಡಿದರು.

 ಪಿ.ಐ.ಎಲ್ ಹಾಕಲು ನನ್ನ ಬಳಿ, ಮಾಜಿ ಮುಖ್ಯಮಂತ್ರಿಯವರಾದ ದಿ. ಜೆ.ಹೆಚ್.ಪಟೇಲ್ ರವರ ಕಾಲದಿಂದ ನಡೆಸಿದ ಪತ್ರ ನಡವಳಿಕೆಗಳು ಹಾಗೂ ತಮ್ಮ ಅಧ್ಯಕ್ಷತೆಯ (ಶ್ರೀ ಜಿ.ಎಸ್.ಬಸವರಾಜ್‌ರವರ) ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದಂತೆ, ಸುಮಾರು 600 ಟಿ.ಎಂ.ಸಿ ಅಡಿ ನೀರಿನ ಯೋಜನೆಗೆ, ಆಗಿನ ನೀರಾವರಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಮತ್ತು ಆಗಿನ ಮುಖ್ಯಮಂತ್ರಿಯವರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು,

 ಆಗಿನ ಅಧಿಕಾರಿಗಳಾದ ತುಮಕೂರು ಜಿಲ್ಲಾಧಿಕಾರಿಯಾಗಿದ್ದ, ಶ್ರೀ ರಾಕೇಶ್ ಕುಮಾರ್ ರವರು, ತುಮಕೂರು ಜಿಲ್ಲಾ ಪಂಚಾಯತ್ ಸಿ.ಇ.ಓ ಶ್ರೀಮತಿ ಶುಭ ಕಲ್ಯಾಣ್ ರವರು, ಆಗಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಶ್ರೀ ರವಿಕುಮಾರ್ ರವರು, ಆಗಿನ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ರವರು ಮತ್ತು ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ರವರ ಸಹಕಾರದಿಂದ, ಕೇಂದ್ರ ಸರ್ಕಾರದ ನ್ಯಾಷನಲ್ ಇನ್ಪಾಸ್ಟçಚ್ಚರ್ ಪೈಪ್ ಲೈನ್ ಯೋಜನಯಡಿ ನಿಯಮ ಬದ್ಧವಾಗಿ ಸೇರ್ಪಡೆ ಮಾಡಲಾಗಿದೆ. ಇದೇ ನಮ್ಮ ಹೋರಾಟಕ್ಕೆ ಬ್ರಹ್ಮಾಸ್ರö್ತವಾಗಲಿದೆ.

ಕೇಂದ್ರ ಸರ್ಕಾರದ ನೀತಿ ಆಯೋಗದ ಸಲಹೆಯಂತೆ ಇದರಲ್ಲಿ ಸೇರ್ಪಡೆ ಆದ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ 40, ರಾಜ್ಯ ಸರ್ಕಾರ ಶೇ 39 ಮತ್ತು ಶೇ 21  ನ್ನು ಯೋಜನೆ ಮಾಡುವವರು ಹಾಕಬೇಕಾಗುತ್ತದೆ.

ಕೇಂದ್ರ ಸರ್ಕಾರದ ಜಲಜೀವನ್ ಯೋಜನೆ, ಶಾಶ್ವತ ನದಿ ನೀರಿಲ್ಲದೆ, ಪೈಪ್‌ಗಳಲ್ಲಿ ಇರುವೆ ಗೂಡುಗಳು ಕಟ್ಟಿಕೊಂಡಿರುವ ಉದಾಹರಣೆಗಳು ಇವೆ. ನಮ್ಮ ರಾಜ್ಯದವರೇ ಆದ, ಕೇಂದ್ರ ಜಲಶಕ್ತಿ ಸಚಿವರಾಗಿ ಶ್ರೀ ವಿ.ಸೋಮಣ್ಣವರು ಇದ್ದಾರೆ.

 ಅವರ ಆತ್ಮೀಯರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಜಲಸಂಪನ್ಮೂಲ ಸಚಿವರಾಗಿದ್ದಾರೆ. ಈಗ ನದಿ ನೀರಿನ ಅಲೋಕೇಷನ್ ಮಾಡಲು ಜಲಜೀವನ್ ಮಿಷನ್ ಕಾರಿಡಾರ್’ ಯೋಜನೆ ಜಾರಿ ಮಾಡಲು ಒಳ್ಳೆಯ ಅವಕಾಶ.

  ಈಗ ಕಬ್ಬಿಣ ಕಾದಿದೆ, ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರ ಸಹಾಯವನ್ನು ಪಡೆದುಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು, ಹೇಮಾವತಿ ನದಿ ನೀರಿನ ಹೋರಾಟದಂತೆ, ಎಲ್ಲಾ ಪಕ್ಷದ ರೈತರು, ಅವರವರ ಊರಿಗೆ ನದಿ ನೀರಿನ ಅಲೋಕೇಷನ್ ನಿಗದಿ ಗೊಳಿಸಲು ರಾಜ್ಯಾದ್ಯಾಂತ ಬೀದಿಗಿಳಿಯುವುದು  ಹಾಗೂ ನ್ಯಾಯಾಲಯದಲ್ಲಿ ಪಿ.ಐ.ಎಲ್ ಹಾಕುವುದು, ಈ ಮೂರು ಕೆಲಸಗಳು ಒಟ್ಟಿಗೆ ಆರಂಭವಾದರೆ, ನಾವು ಕಳೆದ 35 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಒಂದು ಮುಕ್ತಿ ಸಿಗಲಿದೆ ಎಂಬ ನಿರ್ಣಯಕ್ಕೆ ಬಂದೆವು.

  ಬಸವರಾಜ್‌ರವರು ಪಿ.ಐ.ಎಲ್ ಹಾಕಲು ತಗಲುವ ವೆಚ್ಚವನ್ನು ನಾನೇ ಕೊಡುತ್ತೇನೆ,  ನಿನ್ನ ಆಟ ಶುರು ಮಾಡು ಎಂದಿದ್ದಾರೆ, ಬರೀ ಪಿ.ಐ.ಎಲ್ ಹಾಕಲು ಹಣ ನೀಡಿದರೇ ಉಳಿದ ಖರ್ಚುಗಳಿಗೆ ಏನು ಮಾಡುವುದು.

 ಕನಿಷ್ಠ ಮೂರು ವರ್ಷ ಮಾಸಿಕ 3-4 ಲಕ್ಷ ಖರ್ಚು ಮಾಡಿದರೆ, ಈ ಮೂರು ಕೆಲಸಗಳನ್ನು ಆರಂಭಿಸಿ, ಒಂದು ಅಂತಿಮ ತೀರ್ಮಾನಕ್ಕೆ ಬರಬಹುದು. ಈ ಹಣದ ಹೊಂದಾಣಿಕೆ ಬಹು ಮುಖ್ಯವಾಗಿದೆ. ಅದಕ್ಕೆ ಶ್ರೀ ಜಿ.ಎಸ್.ಬಸವರಾಜ್ ರವರೇ ಮುಂಚೂಣೆ ಪಾತ್ರ ವಹಿಸಬೇಕಿದೆ ಅಥವಾ ಜಲಸಂಪನ್ಮೂಲ ಇಲಾಖೆಯೇ ಭರಿಸಿದರೂ ಒಳ್ಳೆಯದು ಕಾದು ನೋಡೋಣ ಅಥವಾ ನಾನು ದುಡಿದ ಜಮೀನು ಮಾರಿಯಾದರೂ ಒಂದು ಹಂತ ತಲುಪಲೇ ಬೇಕು.

  ರಾಜ್ಯದ ಸುಮಾರು 30000 ಗ್ರಾಮಗಳು ಮತ್ತು ಬಡಾವಣೆಗಳಿಗೂ ನದಿ ನೀರಿನ ಅಲೋಕೇಷನ್ ಮಾಡಿಸಿ, ಕೇಂದ್ರ ಸರ್ಕಾರದಿಂದ ಹಣ ಪಡೆಯ ಬಹುದು ಎಂದು ಹೇಳಿದ್ದೇನೆ. ಮುಂದಿನವಾರ ದೆಹಲಿಗೆ ಹೋಗಿ ಒಂದು ವಾರ ಜಾಂಡಾ ಹೂಡೋಣ, ರೆಡಿಯಾಗು ಎಂದು ಹೇಳಿದ್ದಾರೆ.

 ‘ಈಗ ನನಗೆ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಸಹಕಾರ ಅಗತ್ಯವಿದೆ. ನನಗೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ತಾಜಾ ಮಾಹಿತಿ ಬೇಕಾಗುತ್ತದೆ. ಚುನಾಯಿತ ರಾಜಕಾರಣಿಗಳ ಸಂಪರ್ಕವೂ ಅಗತ್ಯವಿದೆ.’

ವಿಶ್ವ ಪರಿಸರ ದಿನಾಚರಣೆಯಂದು, ವಿಶ್ವದ 108 ಶಕ್ತಿಪೀಠಗಳ ಮುಂದೆ ಪ್ರತಿಜ್ಞೆ ಮಾಡಿ, ಈ ಹೋರಾಟಕ್ಕೆ ಸಿದ್ಧವಾಗಿದ್ದೇನೆ. ಕೈ ಜೋಡಿಸುವವರಿಗೆ ಮುಕ್ತ ಆಹ್ವಾನ. ಶ್ರೀ ಜಿ.ಎಸ್.ಬಸವರಾಜ್‌ರವರ. ಜಿಎಸ್.ಪರಮಶಿವಯ್ಯನವರ ಮತ್ತು ನನ್ನ 35 ವರ್ಷಗಳ ಕನಸಿಗೆ ಚಾಲನೆ ನೀಡುವುದು ನನ್ನ ಮೊದಲ ಆಧ್ಯತೆ.

ಇಂದಿನಿ0ಹೇಮಾವತಿ ಹೋರಾಟದ ದಿಕ್ಕೆ ಬದಲಾಗಲಿದೆ.

ಜೈ ಮಾತಾಜಿ!