TUMAKURU:SHAKTHIPEETA FOUNDATION

ಶ್ರೀಗಂಧ ಕೃಷಿ ಆಶ್ರಮದ ಶ್ರೀ ಎಸ್.ಪಿ.ರಾಜೇಶ್ ರವರು, ತನ್ನ ಜಮೀನನ್ನು ಹದ್ಧುಬಸ್ತು ಫಿಕ್ಸ್ ಮಾಡಿಸಿದಾಗ, ಹೆಚ್ಚುವರಿಯಾಗಿರುವ ಜಮೀನು, ವಿಶ್ವೇಶ್ವರಯ್ಯ ನಿಗಮದ ಜಮೀನು ಎಂದು ಪತ್ತೆ ಹಚ್ಚಿ, ಈ ಹೆಚ್ಚುವರಿ ಸರ್ಕಾರಿ ಜಮೀನಿನಲ್ಲಿ ಬೆಳೆಸುತ್ತಿರುವ ಕಾಡು ಕೃಷಿ ಇದಾಗಿದೆ.
ಇದೇ ರೀತಿ ಸುಮಾರು 100 ಕೀಮೀ ವಾಣಿವಿಲಾಸ ಕಾಲುವೆಯ ಅಕ್ಕ-ಪಕ್ಕ ಒತ್ತುವರಿ ಮಾಡಿ ಕೊಂಡಿರುವ ರೈತರ ಸಹಭಾಗಿತ್ವದಲ್ಲಿ ‘ಗ್ರೀನ್ ಕಾರಿಡಾರ್’ ನಿರ್ಮಾಣ ಮಾಡಿದರೆ ಎಷ್ಟು ಚೆನ್ನ. ಸರ್ಕಾರಿ ಜಮೀನು ಉಳಿಯಲಿದೆ. ರೈತರು ಬೆಳಸುವ ಈ ಮಾದರಿ ನೇಚರ್ ಗೆ ಎಷ್ಟು ಕೊಡುಗೆ ನೀಡಲಿದೆ. ಎಷ್ಟು ಉದ್ಯೋಗ ಸೃಷ್ಠಿಯಾಗಲಿದೆ.
ತನ್ನ ದುಡಿಮೆಯ ಹಣದಲ್ಲಿ, ಸರ್ಕಾರಿ ಜಮೀನಿನನಲ್ಲಿ, ಬರದನಾಡಿನಲ್ಲಿ ಮಾದರಿಯಾಗಿ ಕಾಡು ಬೆಳೆಸಿ, ಈ ರೀತಿ ಅಭಿವೃದ್ಧಿ ಪಡಿಸಿ ಎಂದು ಸರ್ಕಾರಗಳನ್ನು ಒತ್ತಾಯಿಸುವುದು ಎಷ್ಟು ಅರ್ಥಪೂರ್ಣ ?
ಶ್ರೀ ಡಿ.ಕೆ.ಶಿವಕುಮಾರ್ ರವರು, ಮಾನ್ಯ ಉಪಮುಖ್ಯಮಂತ್ರಿಯವರು ಹಾಗೂ ಜಲಸಂಪನ್ಮೂಲ ಸಚಿವರು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು. ಇವರಿಗೆ ದಿನಾಂಕ:05.06.2025 ರಂದು ಮನವಿ ಸಲ್ಲಿಸಲಾಗಿದೆ.
ಮಾನ್ಯರೇ
ವಿಷಯ: ವಾಣಿ ವಿಲಾಸ ಕಾಲುವೆಯ ಅಕ್ಕ-ಪಕ್ಕದ ನಿಗಮದ ಸುಮಾರು 750 ಎಕರೆ ಜಮೀನಿನಲ್ಲಿ ವಾಟರ್ ಟೂರಿಸಂ ಯೋಜನೆ ಅನುಷ್ಠಾನದ ಬಗ್ಗೆ.
ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಜೆಜಿ ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವಡ್ಡನಹಳ್ಳಿಗೆ ಹೊಂದಿಕೊಂಡಿರುವ ಬಗ್ಗನಡು ಕಾವಲ್ ಸರ್ವೆ ನಂಬರ್ 15 ಮತ್ತು 10 ರಲ್ಲಿ ಜಲಭಾರತ/ಜಲಗ್ರಂಥ ಯೋಜನೆಯಡಿ, ಬಾರತ ದೇಶದ ಉದ್ದೇಶಿತ ನದಿಜೋಡಣೆ ಪ್ರಾತ್ಯಾಕ್ಷಿಕೆ, ವಿಶ್ವದ 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆ, 1000 ಪ್ರಭೇದಗಳ ಗಿಡಬೆಳೆಸುತ್ತಿರುವ ಯೋಜನೆ ಆರಂಭಿಸಿದಾಗ, ನಮ್ಮ ಜಮೀನು ಸಮೀಕ್ಷೆ ಮಾಡಿದಾಗ, ಹೆಚ್ಚುವರಿ 3 ಎಕರೆ ಜಮೀನು ದೊರೆತಾಗ, ಇದು ಯಾವ ಜಮೀನು ಎಂಬ ಸಂಶೋಧನೆ ಮಾಡಿ, ವಿಶ್ವೇಶ್ವರಯ್ಯ ಜಲ ನಿಗಮದ ಎಂ.ಡಿಯವರ ಗಮನಕ್ಕೆ ತಂದ ನಂತರ, ನಿಗಮದ ವತಿಯಿಂದ ಸಮೀಕ್ಷೆ ಮಾಡಿದಾಗ ಸುಮಾರು 750 ಎಕರೆ ಜಮೀನು ದೊರೆತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಈ ಜಮೀನು ಬೆಂಗಳೂರು- ಮುಂಬೈ ಎಕನಾಮಿಕ್ ಕಾರಿಡಾರ್ ಹಾಗೂ ಚನ್ನೈ- ಬೆಂಗಳೂರು- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ಗೆ ಹೊಂದಿಕೊಂಡಿರುವ, ವಾಣಿವಿಲಾಸ ಕಾಲುವೆಗಳಿಂದ-ವಾಣಿ ವಿಲಾಸ ಡ್ಯಾಂವರೆಗೂ ಕಾಲುವೆಯ ಅಕ್ಕ-ಪಕ್ಕದಲ್ಲಿ ಕಾಲುವೆ, ಸರ್ವಿಸ್ ರಸ್ತೆ ಹೊರತು ಪಡಿಸಿ ಹೆಚ್ಚುವರಿಯಾಗಿ ಇರುವ ಜಮೀನು ಆಗಿರುತ್ತದೆ. ಎಲ್ಲಾ ಇಲಾಖೆಗಳ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಡಾಟಾ ಮೂಲಕ, ಅಂತರಾಷ್ಟ್ರೀಯ ಮಟ್ಟದ ವಿವಿಧ ಟೂರಿಸಂ ಯೋಜನೆ ನಿರ್ಮಾಣ ಬಹುದಾಗಿದೆ,ಪರಿಕಲ್ಪನೆ ಪಟ್ಟಿ ಲಗತ್ತಿಸಿದೆ, ಅಗತ್ಯ ಕ್ರಮಕೈಗೊಳ್ಳಲು ಕೋರಿದೆ.
ಅಂತರಾಷ್ಟ್ರೀಯ ಮಟ್ಟದ ವಿವಿಧ ಟೂರಿಸಂ ಪರಿಕಲ್ಪನೆ
1. ಹಾಳಾಗುತ್ತಿರುವ ಪಂಚಭೂತಗಳ ರಕ್ಷಣೆಗೆ ಮ್ಯೂಸಿಯಂ ನಿರ್ಮಾಣ ಮಾಡುವುದು.
2. ಕರ್ನಾಟಕ ರಾಜ್ಯದ 7 ನದಿ ಪಾತ್ರಗಳಲ್ಲಿ ಇರುವ 313 ನದಿಗಳ ವಾಟರ್ ಮ್ಯೂಸಿಯಂ/ ಮಿನಿಯೇಚರ್ ನಿರ್ಮಾಣ ಮಾಡುವುದು.
3. ಕರ್ನಾಟಕ ರಾಜ್ಯದಲ್ಲಿ ಭೂಮಿಯ ಮೇಲೆ ಹುಟ್ಟುವ ಎಲ್ಲಾ ಬೆಳೆ-ಕಳೆಗಳ ಪ್ರಾತ್ಯಾಕ್ಷಿಕೆಯೊಂದಿಗೆ, ರೈತರ ಸಹಭಾಗಿತ್ವದಲ್ಲಿ ಬೆಳೆಗಳಿಗೆ ಅಗತ್ಯವಿರುವ ನೀರು ಬಳಸುವ ಅಗ್ರಿ/ಇಕೋ ಟೂರಿಸಂ ‘ಗ್ರೀನ್ ಕಾರಿಡಾರ್’ ನಿರ್ಮಾಣ ಮಾಡುವುದು.
4. ಕರ್ನಾಟಕ ರಾಜ್ಯದಲ್ಲಿ ಇವೆ ಎನ್ನಲಾಗುತ್ತಿರುವÀ ಸುಮಾರು 1350 ಕ್ಕೂ ಹೆಚ್ಚು ಎಲ್ಲಾ ಧರ್ಮಗಳ/ಜಾತಿ/ಉಪಜಾತಿಗಳಿಗೆ ತಲಾ 5 ರಿಂದ 20 ಗುಂಟೆ ಜಮೀನನ್ನು ಗುತ್ತಿಗೆ/ಬಾಡಿಗೆ ನೀಡಿ ಅವರ ಸಂಸ್ಕøತಿ/ಕಲೆ/ಅಭಿವೃದ್ಧಿ, ಇತಿಹಾಸಗಳ ಮ್ಯೂಸಿಯಂ ನಿರ್ಮಾಣ ಮಾಡುವುದು.
5. ರಾಜ್ಯದ 28 ಲೋಕಸಭಾ, 14 ಜನ ರಾಜ್ಯÀಸಭಾ, 225 ವಿಧಾನÀಸಭಾ ಮತ್ತು 75 ವಿಧಾನ ಪರಿಷತ್ ಸದಸ್ಯರು ಸೇರಿದಂತೆ 342 ಜ£ರ ವ್ಯಾಪ್ತಿಯ 1947 ರಿಂದ 2025 ರವರೆಗೆ ಯಾವ, ಯಾವ ಅವಧಿಯಲ್ಲಿ ಹೇಗೆ ಅಭಿವೃದ್ಧಿ ಆಗಿದೆ, 2047 ರ ವರೆಗೆ ಹೇಗೆ ಅಭಿವೃದ್ಧಿ ಆಗಬೇಕು ಎಂಬ ಸಂಶೋಧನೆ, ಅಭಿವೃದ್ದಿ, ಮ್ಯೂಸಿಯಂ ನಿರ್ಮಾಣ ಮಾಡುವುದು