ಇಂದು ಅಂದರೆ ದಿನಾಂಕ:11.06.2025 ರಂದು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಸುಂಕಾಪುರಕ್ಕೆ ಭೇಟಿ ನೀಡಿ, ಹೇಮಾವತಿ ಎಕ್ಸ್ಪ್ರೆಸ್/ ಲಿಂಕಿ0ಗ್ ಕೆನಾಲ್ ಕಾಮಗಾರಿ ವಿಕ್ಷಣೆ ಮಾಡುವುದರಿಂದ ಒಂದಿಷ್ಟು ಮಾಹಿತಿ. ಈ ಹೋರಾಟ ಕೇವಲ ಒಂದು ಪಕ್ಷದ್ದಲ್ಲ, ಎಲ್ಲಾ ರಾಜಕೀಯ ಪಕ್ಷಗಳ ರೈತರ, ಎಲ್ಲಾ ಜಾತೀಯ ಹೇಮಾವತಿ ನೀರು ಬಳಕೆದಾರರ ಹೋರಾಟ, ಯಾವುದೇ ಜಿಲ್ಲೆಯ ಹೋರಾಟವನ್ನು ರಾಜಕಾರಣದಿಂದ ಉದಾಸೀನ ಮಾಡಲೇ ಬಾರದು.
ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರ ಜನ್ಮ ಭೂಮಿಗೆ, ಅನೂಕೂಲವಾಗುವ ಹೇಮಾವತಿ ಎಕ್ಸ್ಪ್ರೆಸ್/ ಲಿಂಕಿ0ಗ್ ಕೆನಾಲ್ ಕಾಮಗಾರಿಗೆ ಪೂರಕವಾಗಿ, ಈ ಯೋಜನೆಯನ್ನೂ ಮುಂದುವರೆಸುವುದು, ಹಾಗೂ ಅವರ ಕರ್ಮಭೂಮಿ ತುಮಕೂರು ಜಿಲ್ಲೆಗೂ ಅನ್ಯಾಯವಾಗದಂತೆ, ರೂಪಿಸ ಬೇಕಾದ, ಉದ್ದೇಶಿತ ಕೇಂದ್ರ ಸರ್ಕಾರದ ನದಿ ಜೋಡಣೆ : ನೇತ್ರಾವತಿ ಟು ಹೇಮಾವತಿ (ಕುಮಾರಧಾರ) ಯೋಜನೆಯಿಂದ ಕಾವೇರಿ ಜಲಾನಯನ ಪ್ರದೇಶಗಳ 11 ಜಿಲ್ಲೆಗಳಿಗೆ ಕಾವೇರಿ, ಕೃಷ್ಣಾ ನದಿ ಪಾತ್ರ ಪಾಲಾರ್ ಮತ್ತು ಪೆನ್ನಾರ್ ನದಿ ಪಾತ್ರಗಳ ಭಾಗಗಳೂ ಸೇರಿದಂತೆ, ಕುಡಿಯುವ ನೀರಿಗಾಗಿ ನೇರಪೈಪ್ಲೈನ್ ಮುಖಾಂತರ ‘ಜಲಜೀವನ್ ಮಿಷನ್ ಕಾರಿಡಾರ್’ ಯೋಜನೆ ಜಾರಿ. ನಿರ್ದಿಷ್ಠ ಯೋಜನೆಗಾಗಿ ಹೊಸದಾಗಿ ತುಮಕೂರು ಜಿಲ್ಲೆಯಲ್ಲಿ ಹೊಸ ಡ್ಯಾಂ ನಿರ್ಮಾಣ ಸಹಿತ.
ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, ಪ್ರತಿಯೊಂದು ಗ್ರಾಮ ಮತ್ತು ನಗರ ಪ್ರದೇಶಗಳಿಗೆ, ಅನೂಕೂಲವಾಗುವ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಘೋಷಣೆಯ ಯೋಜನೆಗೆ, ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ನಿರ್ಣಯದಂತೆ, ಮುಖ್ಯಮಂತ್ರಿಯವರಿ0ದ – ಪ್ರಧಾನ ಮಂತ್ರಿಯವರೆಗೂ ನಡೆದಿರುವ ಪತ್ರ ನಡವಳಿಕೆಗಳು. ಹಲವಾರು ವರ್ಷಗಳ ನೀರಾವರಿ ಹೋರಾಟದ ಅನುಭವಗಳ ಹಿನ್ನಲೆಯ, ದೂರ ದೃಷ್ಠಿಯಿಂದ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ನ್ಯಾಯಾಲಯದಲ್ಲಿ ಗೊಲೆಗೆ ಸಿಕ್ಕಿಸಲು, ಪಕ್ಕಾ ದಾಖಲೆ ರೂಪಿಸಲಾಗಿದೆ.’
ವಿಶೇಷವೆಂದರೆ ಈಗಿನ ಕಾನೂನು ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ರವರು, ಆಗ ಮಾಜಿಯಾಗಿದ್ದರೂ ಅವರ ಮನೆಯಲ್ಲಿಯೇ ಕುಳಿತು, ಅವರೊಂದಿಗೆ ಚರ್ಚೆ ಮಾಡಿ, ಆಗಿನ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಶ್ರೀ ಜಿ.ಎಸ್.ಬಸವರಾಜ್ ರವರಿಂದ ಬರೆದ ಪತ್ರವನ್ನು ಸಿದ್ಧಪಡಿಸಲಾಗಿದೆ, ಅದೇ ಪತ್ರಕ್ಕೆ ಪೂರಕವಾಗಿ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ, ಮುಖ್ಯಮಂತ್ರಿಯವರಿ0ದ ಪತ್ರವನ್ನು ಬರೆಸಲಾಗಿದೆ. ಜೊತೆಗೆ ಅಧಿಕಾರಿಗಳಿಂದ ನಿಯಾಮುನುಸಾರ ಪಕ್ಕಾ ಕಡತವನ್ನು ಸೃಷ್ಠಿಸಲಾಗಿದೆ.
ಕೇಂದ್ರ ಸರ್ಕಾರದ ನೀತಿ ಆಯೋಗದ ಸಲಹೆಯಂತೆ, ಕೇಂದ್ರ ಸರ್ಕಾರದ ನ್ಯಾಷನಲ್ ಇನ್ಪಾಸ್ಟçಚ್ಚರ್ ಪೈಪ್ ಲೈನ್ ಯೋಜನಯಡಿಯಲ್ಲಿ ಸೇರ್ಪಡೆ ಆದ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ 40, ರಾಜ್ಯ ಸರ್ಕಾರ ಶೇ 39 ಮತ್ತು ಶೇ 21 ನ್ನು ಯೋಜನೆ ಮಾಡುವವರು ಹಾಕಬೇಕಾಗುತ್ತದೆ. ಈಗಾಗಲೇ ನಿಯಾಮುನುಸಾರ ಸೇರ್ಪಡೆ ಮಾಡಿಸಲಾಗಿದೆ. ‘ಇದು ಜಿ.ಎಸ್.ಬಸವರಾಜ್ ರವರ ಅಭಿವೃದ್ಧಿ ತಂಡದ ತಂತ್ರವೂ ಆಗಿದೆ.’
ನೀರಾವರಿ ತಜ್ಞರು ಮತ್ತು ಕಾನೂನು ತಜ್ಞರು, ನ್ಯಾಯಾಲಯದಲ್ಲಿ ಪಿ.ಐ.ಎಲ್ ಹಾಕುವ ಮುನ್ನ ರಾಜ್ಯದ ಹಿತ ದೃಷ್ಠಿಯಿಂದ, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಇಲ್ಲಿ ರಾಜಕೀಯ ಪ್ರತಿಷ್ಟೆ ನಗಣ್ಯ. ರಾಜ್ಯದ ಎಲ್ಲಾ ಭಾಗದ ರೈತರ ಹಿತದೃಷ್ಠಿ ಬಹಳ ಮುಖ್ಯ.
ನಕ್ಷೆಯೊಂದಿಗೆ ಕೆಳಕಂಡ ಹೇಮಾವತಿ ಯೋಜನೆಯ ಸರ್ಟಿಫೈಡ್ ನಕಲುಗಳ ಮಾಹಿತಿ ಅಗತ್ಯವಿದೆ.
೧. ಹೇಮಾವತಿ ಮೂಲ ಯೋಜನೆ ನೀರಿನ ಹಂಚಿಕೆ ಮತ್ತು ಯೋಜನಾಮೊತ್ತ.
೨. ಹೇಮಾವತಿ ನೀರಿನ ಹಂಚಿಕೆ ಯೋಜನೆಯ ಬದಲಾವಣೆಗಳ ಹಲವಾರು ಯೋಜನೆ.
೩. ಹಾಲಿ ಇರುವ ಕುಡಿಯುವ ನೀರಿನ ಯೋಜನೆ ಮತ್ತು ಬಹುಗ್ರಾಮ ಯೋಜನೆಗಳ ಸಂಪೂರ್ಣ ಅಧ್ಯಯನ ವರದಿ/ ಲೈವ್ ಸ್ಥಿತಿಗತಿ
೪. ಹೇಮಾವತಿ 0 ಕೀಮೀ ನಿಂದ- 70 ಕೀಮೀ ನವೀಕರಣ ಯೋಜನೆಯ ಟೆಂಡರ್ ಮೊತ್ತ ಹಾಗೂ ಬಿಡುಗಡೆಯಾದ ಮೊತ್ತ. ಇದರಿಂದ ಆದ ಅನೂಕೂಲಗಳು.
೫. ತುಮಕೂರು ನಾಲಾ ಯೋಜನೆಯ 0 ಕೀಮೀ ನಿಂದ- 70 ಕೀಮೀ ನವೀಕರಣ ಯೋಜನೆಯ ಟೆಂಡರ್ ಮೊತ್ತ ಹಾಗೂ ಬಿಡುಗಡೆಯಾದ ಮೊತ್ತ. ಇದರಿಂದ ಆದ ಅನೂಕೂಲಗಳು.
೬. ತುಮಕೂರು ನಾಲಾ ಯೋಜನೆಯ 70 ಕೀಮೀ ನಿಂದ- 165 ಕೀಮೀ ನವೀಕರಣ ಯೋಜನೆಯ ಟೆಂಡರ್ ಮೊತ್ತ ಹಾಗೂ ಬಿಡುಗಡೆಯಾದ ಮೊತ್ತ. ಇದರಿಂದ ಆದ ಅನೂಕೂಲಗಳು.
೭. ಮೊದಲ ಭಾರಿ ಹೇಮಾವತಿ ಎಕ್ಸ್ಪ್ರೆಸ್/ ಲಿಂಕಿAಗ್ಕೆನಾಲ್ ಯೋಜನೆ ಜಾರಿ ಮತ್ತು ರದ್ಧತಿ ಕಡತಗಳು/ಕಾರಣಗಳು.
೮. ಎರಡನೇ ಭಾರಿ ಹೇಮಾವತಿ ಎಕ್ಸ್ಪ್ರೆಸ್/ ಲಿಂಕಿ0ಗ್ ಕೆನಾಲ್ ಯೋಜನೆ ಜಾರಿ ಮತ್ತು ಹೊಸದಾಗಿ ಸೃಷ್ಠಿಸಿದ ಕಡತಗಳು/ಕಾರಣಗಳು. ಟೆಂಡರ್ ಅನುದಾನ, ಬಿಡುಗಡೆಯಾದ ಅನುದಾನ.
೯. ಹೇಮಾವತಿ ಎಕ್ಸ್ಪ್ರೆಸ್/ ಲಿಂಕಿ0ಗ್ ಕೆನಾಲ್ ನಂತರದ, ಸುಂಕಾಪುರದಿAದ- ಕುಣಿಗಲ್ ವರೆಗೆ ಹೇಮಾವತಿ ಕಾಲುವೆ ಹೆಡ್ ಮತ್ತು ವೆಲಾಸಿಟಿ ಬಗ್ಗೆ ತಾಂತ್ರಿಕ ವರದಿ.
೧೦. ಹೇಮಾವತಿ ಎಕ್ಸ್ಪ್ರೆಸ್/ ಲಿಂಕಿ0ಗ್ ಕೆನಾಲ್ ನಂತರದ, ಸುಂಕಾಪುರದಿAದ- ಕುಣಿಗಲ್ ವರೆಗೆ ನೀರಿನ ಸಾಮಾರ್ಥ್ಯಕ್ಕೆ ಅನುಗುಣವಾಗಿ, ಹೇಮಾವತಿ ಕಾಲುವೆ ಮುಚ್ಚಿಸಲು ರೂಪಿಸಬೇಕಾದ ಉದ್ದೇಶಿತ ಯೋಜನೆಯ ರೂಪುರೇಷೆ.
೧೧. ಇಡೀ ವಿಶ್ವದಲ್ಲಿಯೇ, ಹೇಮಾವತಿ ಎಕ್ಸ್ಪ್ರೆಸ್/ ಲಿಂಕಿ0ಗ್ಕೆನಾಲ್ ಯೋಜನೆ ರೂಪಿಸಿರುವ ಯೋಜನೆಯ ಮಾದರಿಗಳು ಮತ್ತು ಅಂತರರಾಷ್ಟಿçÃಯ ಮಟ್ಟದ ನಿಯಮಗಳು/ಕಾನೂನುಗಳು.
೧೨. ಹೇಮಾವತಿ ಯೋಜನೆ ಆರಂಭದಿ0ದ ಮಾಸಿಕವಾರು, ವರ್ಷವಾರು ನೀರಿನ ಹರಿಯುವಿಕೆ ಮತ್ತು ಬಳಸಿರುವ ಮಾಹಿತಿ.
೧೩. ಹೇಮಾವತಿ ಯೋಜನೆಯ ಮೂಲ ಉದ್ದೇಶ ಜಾರಿ ಆಗಿದೆಯೇ ಎಂಬ ಬಗ್ಗೆ, ಅಧಿಕಾರಿಗಳಿಂದ ವಸ್ತು ನಿಷ್ಠ ನಿಖರವಾದ ವರದಿ.
ಜೊತೆಗೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಸೇರಿದಂತೆ, ರಾಜ್ಯದ ಹಲವಾರು ತಜ್ಞರ ಅಧ್ಯಯನ ವರದಿಯ, ಅಧಿಕಾರಿಗಳ ಅಭಿಪ್ರಾಯ ಸಹಿತ, ನಕ್ಷೆಯೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ, ಕಾವೇರಿ ನದಿ ಪಾತ್ರಕ್ಕೆ ಹಾಗೂ ಜಿಲ್ಲೆಗಳಿಗೆ ಪೂರಕವಾಗಿರುವ, ಕೆಳಕಂಡ ವಿವಿಧ ಯೋಜನೆಗಳ ನಿಖರವಾದ ಮಾಹಿತಿ ಅಗತ್ಯವಿದೆ.
೧. ಹೇಮಾವತಿ ಯೋಜನೆ.
೨. ಭದ್ರಾ ಮೇಲ್ದಂಡೆ ಎನ್.ಪಿ.ಪಿ ಯೋಜನೆ
೩. ಎತ್ತಿನಹೊಳೆ – ಎನ್.ಪಿ.ಪಿ ಯೋಜನೆ
೪. ಉದ್ದೇಶಿತ ಮೇಕೆದಾಟು ಯೋಜನೆ.
೫. ಉದ್ದೇಶಿತ ಹೇಮಾವತಿ ಪ್ಲಡ್ ಫ್ಲೋ ಕೆನಾಲ್ ಯೋಜನೆ.
೬. ಉದ್ದೇಶಿತ ಕಾವೇರಿ ಸರ್ಪ್ಲಸ್ ಯೋಜನೆ.
೭. ಉದ್ದೇಶಿತ ಕೇಂದ್ರ ಸರ್ಕಾರದ ನದಿ ಜೋಡಣೆ : ನೇತ್ರಾವತಿ ಟು ಹೇಮಾವತಿ (ಕುಮಾರಧಾರ) ಯೋಜನೆ.
೮. ಉದ್ದೇಶಿತ ಕೇಂದ್ರ ಸರ್ಕಾರದ ನದಿ ಜೋಡಣೆ ಸಬ್ಸ್ಟಿಟೂಷೂನ್ ಮೇಥೆಡ್ ನಿಂದ ದೊರೆಯುವ ನೀರಿನ ಯೋಜನೆ.
೯. ಉದ್ದೇಶಿತ ಲಿಂಗನಮಕ್ಕಿ ಸೇರಿದಂತೆ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಪಾತ್ರಗಳ ನೀರಿನ ಯೋಜನೆ.
೧೦. ಉದ್ದೇಶಿತ ಕಕ್ಕುಟ್ಟು ಹೊಳೆ – ಲಕ್ಷö್ಮಣ ತೀರ್ಥ ಯೋಜನೆ..
೧೧. ಉದ್ದೇಶಿತ ಕೊಂಗನಹೊಳೆ – ಲಕ್ಷö್ಮಣ ತೀರ್ಥ ಯೋಜನೆ..
೧೨. ಉದ್ದೇಶಿತ ಬರಪ್ಹೊಳೆ ಯೋಜನೆ.
೧೩. ಉದ್ದೇಶಿತ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಪಾತ್ರಗಳಿಂದ ತಮಿಳುನಾಡಿಗೆ ೨೦೫ ಟಿ.ಎಂ.ಸಿ ಅಡಿ ನೀರಿನ ಯೋಜನೆ.
ಕರ್ನಾಟಕ ರಾಜ್ಯದ ಜಿಲ್ಲೆ, ಜಿಲ್ಲೆಗಳಲ್ಲಿ ನೀರಾವರಿ ವಿವಾದಗಳಿಂದ, ಕಾವೇರಿ ವಿವಾದಕ್ಕೆ ಹೊಸ ಉಪಹಾರವಾಗುವ ಬದಲು, ಎಲ್ಲಾ ವರ್ಗದವರೂ ಒಪ್ಪುವಂತಹ, ರಾಜ್ಯದಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ನಿವೃತ್ತ ಮತ್ತು ಹಾಲಿ ಅಧಿಕಾರದಲ್ಲಿರುವ, ತಜ್ಞರ ಮೂರು ನಾಲ್ಕು ಗುಂಪುಗಳು ಅನುಮೋದಿಸುವಂತಹ ಯೋಜನೆಗೆ ಶ್ರಮಿಸಲೇ ಬೇಕಿದೆ. ‘ 1947 ರಿಂದ ಎಲ್ಲಾ ಪಕ್ಷದ ರಾಜಕಾರಣಿಗಳು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ಮಾಡಿಸಿರುವ ಪಾಪದ ಯೋಜನೆಗಳಿಂದ’, ಇಬ್ಬರ ಜಗಳ ಮೂರನೆಯವನಿಗೆ ಲಾಭವಾಗಲು ಬಿಡುವುದು ಒಳ್ಳೆಯದಲ್ಲ.
ರಾಜ್ಯದ ಮುಖ್ಯಮಂತ್ರಿಗಳು ಮತ್ತು ವಿಕಸಿತ ಭಾರತ @ 2047 ಕನಸುಗಾರರಾದ, ದೇಶದ ಪ್ರಧಾನ ಮಂತ್ರಿಯವರು ಹೆಮ್ಮೆಯಿಂದ ಮಂಜೂರು ಮಾಡುವಂತಹ ಯೋಜನೆಗೆ, ಈ ಮಾಹಿತಿಗಳ ಅಧ್ಯಯನದ ನಂತರ ಅಗತ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿದ ನಂತರ, ಉನ್ನತ ಮಟ್ಟದ ತಾಂತ್ರಿಕ ಮತ್ತು ಕಾನೂನು ಪರಿಣಿತರು ಸೂಕ್ತವಾದ, ನ್ಯಾಯ ಸಮ್ಮತವಾದ ವರದಿ ನೀಡಲು ಸಜ್ಜಾಗಿದ್ದಾರೆ. ಉತ್ತಮ ಸಲಹೆ ನೀಡಲಿದ್ದಾರೆ.
ತಾವೂ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಎಲ್ಲಾ ಸಚಿವರು ಹಾಗೂ ರಾಜ್ಯದ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಒಮ್ಮತದಿಂದ ಶ್ರಮವಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಒಪ್ಪಿಸದಿದ್ದರೆ, ಸೂಕ್ತ ನ್ಯಾಯಾಲಯದಲ್ಲಿ ಪಿ.ಐ.ಎಲ್ ಹಾಕಲು ಸಿದ್ಧತೆ ಆರಂಭವಾಗಿದೆ, ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಪರಿಣಿತರ ತಂಡ, ರಾಜ್ಯದ ಎಲ್ಲಾ ನೀರಾÀವರಿ ತಜ್ಞರ ಮತ್ತು ಹೋರಾಟಗಾರರ ನಿಖರವಾದ ಮಾಹಿತಿಯೊಂದಿಗೆ, ಪಕ್ಕಾ ಸಿದ್ಧವಾಗುತ್ತಿದೆ ಹಾಗೂ ಎಲ್ಲಾ ಧರ್ಮದ, ಜಾತೀಯ, ಉಪಜಾತೀಯ ರಾಜ್ಯದ ಸಾವಿರಾರು ಮಠಾದೀಶರು, ಮಹಾರಾಷ್ಟçದ ಕನ್ನೇರಿ ಶ್ರೀಗಳ ಅನಿಸಿಕೆಯಂತೆ, ಕೈಜೋಡಿಸಲು ಸಿದ್ಧತೆ ನಡೆಯುತ್ತಿದೆ ಎಂಬ ಅಂಶವನ್ನೂ ತಮ್ಮ ಆಧ್ಯ ಗಮನಕ್ಕೆ ತರಬಯಸುತ್ತೇನೆ.
ಈ ವಿಚಾರವನ್ನು ಮುಕ್ತವಾಗಿ ತಮ್ಮೊಂದಿಗೆ ಚರ್ಚಿಸಲು, ದೆಹಲಿಗೆ ಬಂದು ತಮಗೆ ಕರೆ ಮಾಡಿದ್ದು, ಆದರೇ ತಾವೂ ಹುಬ್ಬಳ್ಳಿಯಲ್ಲಿ ಇದ್ದುದರಿಂದ ಹಾಗೂ ತಾವೂ ನೀಡಿದ ಸಲಹೆಯಂತೆ, ಕರ್ನಾಟಕ ಭವನದ ರೂಂ ಖಾಲಿ ಮಾಡಿ, ನಮ್ಮ ಮನೆಗೆ ಬಂದು ಅಲ್ಲೇ ಇರು, ನಾನು ಸೋಮವಾರ ಬರುತ್ತೇನೆ ಎಂದು ತಿಳಿಸಿದರೂ, ನಾನು ರಿಟರ್ನ್ ಟಿಕೇಟ್ ಮಾಡಿಸಿಕೊಂಡಿದ್ದರಿ0ದ ಬೆಂಗಳೂರಿಗೆ ಬರಬೇಕಾಯಿತು.
ಕ್ಷಮೆ ಇರಲಿ ಇದೊಂದು ಬಹಿರಂಗ ನನ್ನ ಮನದಾಳದ ಮನವಿ. ಶ್ರೀ ಜಿ.ಎಸ್.ಬಸವರಾಜ್ರವರ ಜೀವನದ ಗುರಿಯೂ ಹೌದು. ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಎಂದರೇ, ಜಿ.ಎಸ್.ಬಿ.ರವರ ಮುಂದಿನ —- ವನ್ನು ದೇವರೇ ಬಲ್ಲ.
– ಕುಂದರನಹಳ್ಳಿ ರಮೇಶ್,