TUMAKURU:SHAKTHIPEETA FOUNDATION
ತೆರೆದ ಕಾಲುವೆ ಮೂಲಕ ಅಥವಾ ಬೋರ್ ವೆಲ್ ಗಳಿಂದ ಜಲಜೀವನ್ ಮಿಷನ್ ಯೋಜನೆಗೆ ಕುಡಿಯುವ ನೀರು ಒದಗಿಸುವುದು ಕಷ್ಟವಾಗಲಿದೆ. ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಯಲ್ಲಿ ನೇತ್ರಾವತಿ ಯಿಂದ ಹೇಮಾವತಿ ನದಿ ಜೋಡಣೆಯೂ ಒಂದು ಯೋಜನೆಯಾಗಿದೆ.
ಈ ಯೋಜನೆಯಡಿಯಲ್ಲಿ ಕಾವೇರಿ ನದಿ ಪಾತ್ರದ 11 ಜಿಲ್ಲೆಗಳಿಗೆ ಅಗತ್ಯವಿರುವ 11.21 ಟಿ.ಎಂ.ಸಿ ಅಡಿ ನೀರನ್ನು, ಪೈಪ್ ಲೈನ್ ಮೂಲಕವೇ ತಂದು ಎಲ್ಲಾ ಗ್ರಾಮಗಳಿಗೂ, ಕುಡಿಯುವ ನೀರನ್ನು ಸರಬರಾಜು ಮಾಡುವ ‘ಜಲಜೀವನ್ ಮಿಷನ್ ಕಾರಿಡಾರ್’ ಯೋಜನೆಯನ್ನು ಜಾರಿಗೊಳಿಸಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಎನ್.ಪಿ.ಪಿ ಯೋಜನೆಯಾಗಲಿದೆ.

ನೇತ್ರಾವತಿ ನದಿ ಪಾತ್ರದ ಕುಮಾರಧಾರ ಮತ್ತು ಇತರೆ ನದಿಗಳಿಂದ ಸುಮಾರು 8 ಟಿ.ಎಂ.ಸಿ ಅಡಿ ಗ್ರಾವಿಟಿಯಿಂದ ಮತ್ತು 8 ಟಿ.ಎಂ.ಸಿ ಅಡಿ ಏತನೀರಾವರಿ ಮೂಲಕ 16 ಟಿ.ಎಂ.ಸಿ ಅಡಿ ನೀರಿನ ಯೋಜನೆ ರೂಪಿಸಬಹುದಾಗಿದೆ. ಹೇಮಾವತಿ ಡ್ಯಾ ಹಿನ್ನೀರಿನಲ್ಲಿ ಪೈಪ್ ಲೈನ್ ಹಾಕಿಕೊಂಡು, ತುಮಕೂರು ಹೇಮಾವತಿ ಕಾಲುವೆಯ ಪಕ್ಕದಲ್ಲಿಯೇ ತಂದರೆ, ಸುಂಕಾಪುರದ ಬಳಿ ನಿರ್ಮಾಣವಾಗುವ ಹೇಮಾವತಿ ಎಕ್ಸ್ಪ್ರೆಸ್ ಪೈಪ್ ಲೈನ್ ಗೆ ನೀರು ಹರಿಸಬಹುದಾಗಿದೆ.
ಉಳಿದ ಜಿಲ್ಲೆಗಳಿಗೆ ಸೂಕ್ತವಾದ ಕಡೆ ಪೈಪ್ ಲೈನ್ ಅಳವಡಿಸ ಬಹುದಾಗಿದೆ, ಅಗತ್ಯವಿದ್ದಲ್ಲಿ ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರವೇ ಗುರುತಿಸಿರುವ ಮೂರು ಕಡೆಯಲ್ಲಿ ಎಲ್ಲಾದರೂ ಒಂದು ಡ್ಯಾಂ ನಿರ್ಮಾಣ ಮಾಡಬಹುದಾಗಿದೆ.
ಸುಂಕಾಪುರದ ಬಳಿ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಅವೈಜ್ಞಾನಿಕ ಕೆಲಸ ನಿಲ್ಲಿಸಿ, ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಕಾಲಿಗೆ ಬಿದ್ದದಾರೂ, ಕೇಂದ್ರ ಸರ್ಕಾರದ ಅನುದಾನ ತಂದು ಯೋಜನೆ ರೂಪಿಸುತ್ತೇನೆ ಎಂದು ಹೇಳಿಕೆ ನೀಡಿರುವ, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರ, ಹೇಳಿಕೆ ಆದರಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಸೂಕ್ತವಾಗಿದೆ.
ಇದರಿಂದ ತುಮಕೂರು ಜಿಲ್ಲೆಯ ಜನರ ಜೊತೆಗೆ ಕಾವೇರಿ ನದಿ ಪಾತ್ರದ 11 ಜಿಲ್ಲೆಗೂ ಅನೂಕೂಲವಾಗಲಿದೆ. ಸೋಮಣ್ಣನವರು ಕೇಂದ್ರ ಸರ್ಕಾರದಲ್ಲಿ ಯೋಜನೆ ಮಂಜೂರು ಮಾಡಿಸಿದರೆ, 11 ಜಿಲ್ಲೆಯ ಜನರ ಪಾಲಿಗೆ ಹೀರೋ ಆಗಲಿದ್ದಾರೆ. ನಿಜಕ್ಕೂ ಇದೊಂದು ಸಾರ್ಥಕ ಕೆಲಸವಾಗಲಿದೆ.
ಕುಡಿಯುವ ನೀರಿಗೆ ನದಿ ಪಾತ್ರ ಅಡ್ಡಬರುವುದಿಲ್ಲಾ ಜಿಲ್ಲೆಯ ಎಲ್ಲಾ ಭಾಗಗಳಿಗೂ ನೀರು ಕೊಡಬಹುದಾಗಿದೆ. ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರು ಮತ್ತು ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಈ ಯೋಜನೆಗೆ ಬೆಂಬಲ ವ್ಯಕ್ತ ಪಡಿಸುತ್ತಾರೆ.
ಎತ್ತಿನ ಹೊಳೆ ಯೋಜನೆ ಪ್ರತ್ಯೇಕವಾಗಿ ಆಗುವವರೆಗೂ, ಈ ಯೋಜನೆಯನ್ನು ಇದೂವರೆಗೂ ವಿರೋಧ ಮಾಡುತ್ತಿದ್ದ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಬೆಂಬಲ ವ್ಯಕ್ತ ಪಡಿಸುತ್ತಾರೆ.