TUMAKURU:SHAKTHIPEETA FOUNDATION
ತುಮಕೂರು: ನಗರದ ಹೊರವಲಯದ ಅಮಲಾಪುರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ 20 ಎಕರೆ ಜಾಗ ಮಂಜೂರು ಮಾಡುವ ವಿಷಯದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಸೂಚನೆ ನೀಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವುದಾಗಿ ಅಭಿವೃದ್ಧಿ ರೆವುಲ್ಯೂಷನ್ ಪೋರಂನ ಅಧ್ಯಕ್ಷ ಹಾಗೂ ರಾಜ್ಯ ಮಟ್ಟದ ದಿಶಾ ಕಮಿಟಿ ಮಾಜಿ ಸದಸ್ಯ, ಕುಂದರನಹಳ್ಳಿ ರಮೇಶ್ ತಿಳಿಸಿದ್ದಾರೆ.


ರಾಜ್ಯ ಉಪಲೋಕಾಯುಕ್ತರ ನ್ಯಾಯಮೂರ್ತಿ ಶ್ರೀ ವೀರಪ್ಪ ಅವರ ನಿರ್ದೇಶನವಿದ್ದರೂ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಭೂಮಿ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾದೀಶರೇ ನೇತೃತ್ವದಲ್ಲಿ ಸಭೆ ನಡೆದಿದೆ. ಭೂಮಿ ವಿಚಾರದಲ್ಲಿ ಜಿಲ್ಲಾಧಿಕಾರಿ ಅವರು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ಮಾಹಿತಿ ಇಲ್ಲದೇ ಸಭೆಗೆ ಬಂದಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಕೂಡಲೇ ಜಿಲ್ಲಾಧಿಕಾರಿ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಪ್ರಸ್ತಾವಿತ ಜಾಗದಲ್ಲಿ ಎಂಎಸ್ಎಂಇ ಟೆಕ್ಕಾಲಾಜಿ ಕೇಂದ್ರಕ್ಕೆ ಹದಿನೈದು ಎಕರೆ ಜಾಗ ನೀಡಲಾಗಿತ್ತು. ಕೇಂದ್ರ ಸರ್ಕಾರ ಜಾಗವನ್ನು ವಾಪಸ್ ಮಾಡಿದೆ. ಈ ಜಾಗವನ್ನು ನ್ಯಾಯಾಲಯಕ್ಕೆ ನೀಡಲು ಏನು ಸಮಸ್ಯೆ?. ಇಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ 6 ಎಕರೆ 10 ಗುಂಟೆ ಜಾಗ ನೀಡಲಾಗಿದ್ದು, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಾಡಿ, ಈಗಾಗಲೇ ಅದು ಆರಂಭವಾಗಿದೆ. ಈ ಜಾಗವನ್ನು ಸಹ ನೀಡಬಹುದಾಗಿದೆ.
ಇದಲ್ಲದೇ ಇನ್ನೂ ಉದ್ದೇಶಿತ ನಕ್ಷೆ (ಹಿಂದೆ ಜಿಲ್ಲಾಧಿಕಾರಿಗಳು ಸಿದ್ಧಪಡಿಸಿರುವ ನಕ್ಷೆ) ಅಮಲಾಪುರ, ಯಲ್ಲಾಪುರ, ಅಜ್ಜಪ್ಪನಹಳ್ಳಿ, ಅರೆಕೆರೆ ಗ್ರಾಮಗಳಲ್ಲಿ ಸುಮಾರು 200 ಎಕರೆಗಿಂತ ಹೆಚ್ಚು ಸರ್ಕಾರಿ ಜಾಗವಿದೆ. ಇದನ್ನು ಯಾವ ಜಾಗಬೇಕಾದರೂ ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತಾವಿತ ವಿಜ್ಞಾನಗುಡ್ಡದ ಬೆಟ್ಟಗುಡ್ಡ ಜಾಗದಲ್ಲಿ ಈ ಹಿಂದೆ ಉಪ ವಿಭಾಗಾಧಿಕಾರಿಯಾಗಿದ್ದ ನಕುಲ್ (ಪ್ರಸ್ತುತ ಕೇಂದ್ರ ಹಣಕಾಸು ಸಚಿವರ ಉಪ ಆಪ್ತ ಕಾರ್ಯದರ್ಶಿ) ಅವರು ಮತ್ತು ಎಡಿಎಲ್ಆರ್ ಕುಲಕರ್ಣಿ ಅವರುಗಳು ಇಡೀ ಕಂದಾಯ ಇಲಾಖೆಯ ತಂಡದೊಂದಿಗೆ ಬೆಟ್ಟ ಸಾಲುಗಳ ಜಾಗವನ್ನು ಹತ್ತಿ ಇಳಿದು ಮುಂದೆ ನಿಂತು ಸರ್ವೆ ಮಾಡಿಸಿದ್ದರು. ಜಿಲ್ಲಾಧಿಕಾರಿ ರಾಜು ಅವರ ಕಾಲದಲ್ಲಿ ಸರ್ವೆ ಕೆಲಸವೂ ಮುಗಿದಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ತುಮಕೂರು ತಹಶೀಲ್ದಾರ್ ಅವರ ಕಚೇರಿಯಲ್ಲಿ ಎಲ್ಲ ಕಡತಗಳಿವೆ. ಜಿಲ್ಲಾಧಿಕಾರಿಗಳು ಕೂಡಲೇ ಆ ಕಡತಗಳನ್ನೆಲ್ಲ ಹುಡುಕಿ ಜಾಗ ಮಂಜೂರು ಮಾಡುವ ಭರವಸೆ ಇದೆ. ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ಅವರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿದ್ದಾಗಲೂ ಈ ವಿಚಾರಗಳ ಚರ್ಚೆ ಆಗಿದ್ದು. ಅವರ ಗಮನಕ್ಕೆ ಇದೆ ಎಂದು ತಿಳಿಸಿದ್ದಾರೆ.
ದಿನಾಂಕ 3-8-2012ರಂದು ಆಗಿನ ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ಅವರು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬರೆದು ಹಿನ್ನೆಲೆಯಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆದಿದ್ದವು. ಈ ಸಂಬಂಧ ಎಲ್ಲ ಕಡತಗಳನ್ನು ಜಿಲ್ಲಾಧಿಕಾರಿ., ತಹಶೀಲ್ದಾರ್ ಕಚೇರಿ ಅಧಿಕಾರಿಗಳೇ ನಿರ್ವಹಿಸಿದ್ದರು. ಈಗ, ಈ ಎಲ್ಲಾ ಕಡತಗಳು ಅಧಿಕಾರಿಗಳ ಬಳಿಯೇ ಇದ್ದು, ಜಿಲ್ಲಾಧಿಕಾರಿಗಳು ಕೂಡಲೇ ಕಡತಗಳನ್ನು ತರಿಸಿಕೊಂಡು ನೋಡಬೇಕಾಗಿದೆ ಹೇಳಿದ್ದಾರೆ.


ಅರಣ್ಯ ಇಲಾಖೆಗೆ ಯಾವ ಭೂಮಿ ನೀಡಬೇಕು ಎಂದು ಆಗಿನ ಜಿಲ್ಲಾಧಿಕಾರಿ ರಾಜು ಅವರು ನಿರ್ದೇಶನ ನೀಡಿದ್ದರು. ಈಗ ಉಪಮುಖ್ಯಮಂತ್ರಿ ಸಲಹೆಗಾರರಾಗಿರುವ ಕೆ.ಜೈಪ್ರಕಾಶ್ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನೂ ನೇಮಕ ಮಾಡಲಾಗಿತ್ತು.
ಸುಂದರ ನ್ಯಾಯಾಲಯದ ಕನಸು ಇಡೀ ಜಿಲ್ಲೆಯ ಜನರ ಕನಸಾಗಿದೆ. ಆದರೆ ಅಧಿಕಾರಿಗಳು ಜಾಗ ನೀಡಲು ಉದಾಸೀನತೆ, ವಿಳಂಬ ತೋರುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ರಾಜ್ಯ ಉಪಲೋಕಾಯುಕ್ತರ ಸೂಚನೆ ನೀಡಿದ್ದರೂ , ಜಿಲ್ಲಾ ವಕೀಲರ ಸಂಘ, ಜಿಲ್ಲೆಯ ಮೂರು ಕಾನೂನು ಕಾಲೇಜುಗಳ ಪ್ರತಿನಿಧಿಗಳು ಸ್ಪಂದಿಸಿದ್ದರೂ, ಅಧಿಕಾರಿಗಳು ಉದಾಸೀನತೆ ಮಾಡಿದರೆ, ಸಂಘಸಂಸ್ಥೆಗಳ ನೇತೃತ್ವದಲ್ಲಿಯೂ ಬೀದಿಗೀಳಯುವ ಕಾಲ ಬರಲಿದೆ. ಜೊತೆಗೆ ಪಿ.ಐ.ಎಲ್ ಹಾಕಲು ವಕೀಲರು ಸಜ್ಜಾಗುತ್ತಿದ್ದಾರೆ.
– ಕುಂದರನಹಳ್ಳಿ ರಮೇಶ್