TUMAKURU:SHAKTHIPEETA FOUNDATION
ದಿನಾಂಕ:22.06.2025 ರಂದು ತುಮಕೂರಿನ ಶಕ್ತಿಭವನದಲ್ಲಿ ಬೆಳಿಗ್ಗೆ 10 ಗಂಟೆಯಿ0ದ ಆರಂಭವಾಗುವ ಕೃಷಿ ಆಶ್ರಮಗಳ ತಜ್ಞರ ಸಭೆ, ಬಹಳ ಮುಖ್ಯವಾಗಿರುತ್ತದೆ. ಈ ಸಭೆಯಲ್ಲಿ ಈವರೆಗೆ ಬಂದಿರುವ 19 ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
ಜೊತೆಗೆ ರಾಜ್ಯಪಾಲರಿಗೆ, ಮುಖ್ಯ ಮಂತ್ರಿಯವರಿಗೆ ಮತ್ತು ಪ್ರಧಾನ ಮಂತ್ರಿಯವರಿಗೆ 9 ವಿಷಯಗಳ ಬಗ್ಗೆ ಪತ್ರ ಬರೆಯುವುದು, ನಿಯೋಗ ಹೋಗುವುದು ಹಾಗೂ ಅನುಷ್ಠಾನಕ್ಕೆ ಶ್ರಮಿಸಲು ರೂಪು ರೇಷೆಗಳ ಬಗ್ಗೆ ವಿಶೇಷ ಒತ್ತು ನೀಡಲಾಗುವುದು.
ಕೃಷಿ ಆಶ್ರಮಗಳ ಸಭೆಗೆ ಕೋರಂ ಇರುವುದಿಲ್ಲ, ಎಷ್ಟು ಜನರು ಬರುತ್ತಾರೋ ಅವರು ನಿರ್ಣಯ ಮಾಡಿ ಎಲ್ಲರಿಗೂ ಕಳಿಸೋಣ, ನಂತರ ಎಲ್ಲರ ಸಲಹೆಗಳನ್ನು ಒಂದು ವಾರದೊಳಗೆ ಪಡೆದು ಅನುಷ್ಠಾನಕ್ಕೆ ಆಸಕ್ತ ತಂಡಗಳಿಗೆ, ಹೊಣೆಗಾರಿಕೆ ನೀಡೋಣ ಎಂದು ಕೃಷಿ ಆಶ್ರಮಗಳ ಹರಿಕಾರಾರದ ಶ್ರೀ ಬಿ.ಎಂ.ನಾಗಭೂಷಣ್ ರವರು ತಿಳಿಸಿದ್ದಾರೆ.
31 ಜಿಲ್ಲೆಗಳಿಂದಲೂ ಕನಿಷ್ಠ ಒಂದು ಕೃಷಿ ಆಶ್ರಮದವರು ಭಾಗವಹಿಸಲು, ಜಿಲ್ಲಾ ಮಟ್ಟದ ಕೃಷಿ ಆಶ್ರಮಗಳ ಹೊಣೆಗಾರಿಕೆ ಪಡೆದುಕೊಂಡಿರುವವರು ಶ್ರಮಿಸುವುದು ಸೂಕ್ತವಾಗಿದೆ. 9 ವಿಷಯಗಳಿಗೂ, ಆಸಕ್ತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಅವರು ಜಿಲ್ಲೆಗೆ ಒಬ್ಬರಂತೆ ಕನಿಷ್ಠ 31 ಜನರ ಸಲಹಾ ಸಮಿತಿ ರಚಿಸಿ ಕೊಂಡು ಶ್ರಮಿಸಲು ಎಲ್ಲಾ ಸಹಕಾರ ನೀಡುವುದು ಸೂಕ್ತವಾಗಿದೆ.
ಅನುದಾನ ಮಂಜೂರಾತಿಗೆ ಶಕ್ತಿಪೀಠ ಫೌಂಡೇಷನ್, 344 ಜನಪ್ರತಿನಿಧಿಗಳ ಸಹಕಾರದೊಂದಿಗೆ ಹಾಗೂ 9 ವಿಷಯಗಳ ಸಲಹಾ ಸಮಿತಿಗಳ ನೇತೃತ್ವದಲ್ಲಿ ನಿರಂತರವಾಗಿ ಶ್ರಮಿಸಲಿದೆ. ರಾಜ್ಯ ಮಟ್ಟದ ಕಚೇರಿ ಮತ್ತು ಕ್ಯಾಂಪಸ್ಗಳ ಆಲೋಚನೆಗೂ ಒತ್ತು ಕೊಡಬೇಕಿದೆ.
ಕೃಷಿ ಆಶ್ರಮಗಳ ಬಗ್ಗೆ ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಗಳ ವ್ಯಾಪ್ತಿಗೂ, ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಹಾಗೂ ವಿಶ್ವದ ಎಲ್ಲಾ ದೇಶಗಳ ವ್ಯಾಪ್ತಿಯಲ್ಲೂ ಮಾತನಾಡುವ ಹಾಗೆ ಮಾಡಲು ಬಹಳಷ್ಟು ಶ್ರಮ ಹಾಕಬೇಕಾಗುತ್ತದೆ.
ಯಾರೇ ಇರಲಿ, ಇಲ್ಲದಿರಲಿ ಈ ವ್ಯವಸ್ಥೆ ನಿರಂತರವಾಗಿ ಮುಂದುವರೆಸಿಕೊ0ಡು ಹೋಗಲು, ತಾವೆಲ್ಲಾ ಸೇರಿ ಒಂದು ಭದ್ರಾ ಬುನಾದಿ ಹಾಕಬೇಕಿದೆ. ಕೃಷಿ ಆಶ್ರಮಗಳ ಅಭಿವೃದ್ಧಿಗೂ ವಿಶೇಷ ಒತ್ತು ನೀಡುವುದು ಅಗತ್ಯವಾಗಿದೆ.