26th June 2025
Share

TUMAKURU:SHAKTHIPEETA FOUNDATION

 ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆ, ವಿಕಸಿತ ಭಾರತ @ 2047, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಪರಿಕಲ್ಪನೆ, ಕರ್ನಾಟಕ ಅಭಿವೃದ್ಧಿ ಮಾಡೆಲ್, ಮಾನ್ಯ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್‌ರವರ ಪರಿಕಲ್ಪನೆ, ಬ್ರಾö್ಯಂಡ್ ಬೆಂಗಳೂರು ಇವೆಲ್ಲವುಗಳಿಂದ ನಂಬರ್ ಒನ್ ಕರ್ನಾಟಕ @ 2047 ಯೋಜನೆಯ ಯಶಸ್ವಿಗಾಗಿ, ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ/ನೇತೃತ್ವದಲ್ಲಿ’,  ಈ ಕೆಳಕಂಡ ಅಂಶಗಳ ಜಾರಿಗೆ ಸಂಭ0ಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಈ ಮೂಲಕ ಕೋರಿದೆ.

1.            ರಾಜ್ಯದ್ಯಾಂತ ಎಲ್ಲಾ ವಿಶ್ವ ವಿದ್ಯಾನಿಯಲಗಳ ವಿದ್ಯಾರ್ಥಿಗಳ ಮುಖಾಂತರ, ರಾಷ್ಟçಪತಿ, ಪ್ರಧಾನಿ, ರಾಜ್ಯಪಾಲರು, ಮುಖ್ಯಮಂತ್ರಿ, ವಿರೋಧ ಪಕ್ಷಗಳ, ರಾಜ್ಯದ 28 ಲೋಕಸಭಾ, 14 ರಾಜ್ಯಸಭಾ, 224 ವಿಧಾನಸಭಾ, 75 ವಿಧಾನಪರಿಷತ್ ಸದಸ್ಯರು, ಕೇಂದ್ರ ಮತ್ತು ರಾಜ್ಯದ ಎಲ್ಲಾ ಇಲಾಖೆಗಳು, 31 ಜನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು, 31 ಜನ ಜಿಲ್ಲಾಧಿಕಾರಿಗಳು, 31 ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಾಣಾಧಿಕಾರಿಗಳು, ವಿವಿಧ ರಾಜ್ಯಗಳ, ಪ್ರಪಂಚದಲ್ಲಿರುವ ವಿವಿಧ ದೇಶಗಳ ಕಲೆ, ಸಂಸ್ಕೃತಿಗಳ ಅಧ್ಯಯನದೊಂದಿಗೆ, ನಮ್ಮ ರಾಜ್ಯದಲ್ಲಿ 2047 ರ ವರೆಗೆ, ಅವರವರ ಕಾರ್ಯವ್ಯಾಪ್ತಿಯಲ್ಲಿ ಕೈಗೊಳ್ಳ ಬಹುದಾದ ಯೋಜನೆಗಳ/ ಕರ್ತವ್ಯಗಳ, ಪಟ್ಟಿಯಲ್ಲಿರುವಂತೆ  ‘753 ವಿಷಯಗಳ ಬಗ್ಗೆ ಪಿ.ಹೆಚ್.ಡಿ’ ಮಾಡಿಸುವುದು. ವಿದ್ಯಾರ್ಥಿಗಳಿಗೆ ಮತ್ತು ಗೈಡ್ ಮಾಡುವ ಉಪನ್ಯಾಸಕರಿಗೆ ಸೂಕ್ತ ಸಂಭಾವನೆ ನಿಗಧಿ ಗೊಳಿಸುವುದು.

2.            ಇತಿಹಾಸ ಗೊತ್ತಿಲ್ಲದೆ – ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯ, ರಾಜ್ಯದ್ಯಾಂತ ಎಲ್ಲಾ ವಿಶ್ವ ವಿದ್ಯಾನಿಯಲಗಳ ವಿದ್ಯಾರ್ಥಿಗಳಿಂದ, ಅವರು ಹುಟ್ಟಿರುವ/ಆಸಕ್ತಿ ಇರುವ, ಊರಿಗೊಂದು/ಬಡಾವಣೆಗೊ0ದು ಪುಸ್ತಕ, ವಿಷನ್ ಡಾಕ್ಯುಮೆಂಟ್ @ 2047’ ಸಿದ್ಧಪಡಿಸಲು ಇಂರ‍್ನ್ಷಿಪ್, ಪ್ರಾಜೆಕ್ಟ್ವರ್ಕ್ಸ್, ಆಕ್ಟಿವಿಟಿ ಪಾಯಿಂಟ್ಸ್, ಪಿ.ಹೆಚ್.ಡಿ ವಿಷಯಗಳನ್ನಾಗಿ ಕಡ್ಡಾಯವಾಗಿ ಮಾಡುವುದು. ವಿದ್ಯಾರ್ಥಿಗಳಿಗೆ ಮತ್ತು ಗೈಡ್ ಮಾಡುವ ಉಪನ್ಯಾಸಕರಿಗೆ ಸೂಕ್ತ ಸಂಭಾವನೆ ನಿಗಧಿ ಗೊಳಿಸುವುದು.

3.            ರಾಜ್ಯದ್ಯಾಂತ ಎಲ್ಲಾ ವಿಶ್ವ ವಿದ್ಯಾನಿಯಲಗಳ ವಿದ್ಯಾರ್ಥಿಗಳಿಂದ ಸ್ವಚ್ಚತೆಗೆ ರೂಪು ರೇಷೆ ಮತ್ತು ರಾಜ್ಯದ್ಯಾಂತ ಎಲ್ಲಾ ಗ್ರಾಮಗಳು/ಬಡಾವಣೆಗಳಲ್ಲಿ ಇರುವ ಜಲಸಂಗ್ರಹಾಗಾರಗಳು, ಕೆರೆ-ಕಟ್ಟೆಗಳಿಗೆ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಘೋಷಣೆಯಡಿಯಲ್ಲಿ ನದಿ ನೀರು ಅಲೋಕೇಷನ್ ಮಾಡಿಸುವುದು.

4.            ರಾಜ್ಯದ್ಯಾಂತ ಎಲ್ಲಾ ಗ್ರಾಮಗಳು/ಬಡಾವಣೆಗಳಲ್ಲಿ ಇರುವ ಜಲಸಂಗ್ರಹಾಗಾರಗಳು, ಕೆರೆ-ಕಟ್ಟೆಗಳಿಗೆ ಸುತ್ತ, ಆಯಾ ಊರಿನ/ಬಡಾವಣೆಯಲ್ಲಿನ ಅಳಿವಿನಂಚಿನಲ್ಲಿರುವ ಗಿಡಗಳು/ ಹಾಲಿ ಬೆಳೆಯುತ್ತಿರುವ ಗಿಡಗಳು, ಸೇರಿದಂತೆ ಒಂದು ‘ಬಯೋಡೈವರ್ಸಿಟಿ ವನ’ ನಿರ್ಮಾಣ ಮಾಡಲು ಒಂದು ಭಾರಿ ವಿದ್ಯಾರ್ಥಿಗಳನ್ನು ತೊಡಗಿಸಿ ಕೊಳ್ಳುವುದು. ಅವರಿಗೆ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳು ಸಹಕಾರ ನೀಡುವುದು. ಇದೊಂದು ‘ವಿಶ್ವ ದಾಖಲೆ’ ಯಾಗುವ ರೀತಿ ಒಂದೇ ದಿವಸ ಎಲ್ಲಾ ಗ್ರಾಮಗಳು/ಬಡಾವಣೆಗಳಲ್ಲಿ ಕೈಗೊಳ್ಳುವಂತಹ ಯೋಜನೆ ರೂಪಿಸುವುದು.

5.            ರಾಜ್ಯದ್ಯಾಂತ ಎಲ್ಲಾ ವಿಶ್ವ ವಿದ್ಯಾನಿಯಲಗಳ ವಿದ್ಯಾರ್ಥಿಗಳ ಮುಖಾಂತರ, ಭೂಮಿಯ ಮೇಲೆ ಬೆಳೆಯುವ ಬೆಳೆ/ಕಳೆಗಳ ಬಗ್ಗೆ ವಿದ್ಯಾರ್ಥಿಗೊಂದು ಬೆಳೆ/ಕಳೆ ಪ್ರಭಂಧ’ ಘೋಷಣೆಯಡಿಯಲ್ಲಿ ಪ್ರಭಂಧ ಬರೆಸುವುದು, ಎಲ್ಲಾ ಬೆಳೆ ಕಳೆಗಳಿಗೆ ಸಂಭAದಿಸಿದ ಇಲಾಖೆಗಳು ಸಹಕಾರ ನೀಡುವುದು.

6.            ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ಗಳಿಗೆ ನಿಯಮ ಪ್ರಕಾರ ನಾಟಿ ವೈದ್ಯರು, ಪಾರಂಪರಿಕ ವೈದ್ಯರು, ಹಕೀಮರು ಮತ್ತು ಎಲ್ಲಾ ವಿಷಯಗಳ  ನಾಲೇಡ್ಜಬಲ್ ಪರ್ಸನ್, ಈ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು ಮತ್ತು ಪಂಚಭೂತಗಳ ಸಂರಕ್ಷಣೆಗೆ/ಸಾವಯವ ಕೃಷಿಗೆ ಜನಾಂದೋಲನ ರೂಪಿಸಲು, ರಾಜ್ಯದ್ಯಾಂತ  ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಪ್ರಮುಖರನ್ನು ಸದಸ್ಯರಾಗಿ ಸೇರ್ಪಡೆ ಮಾಡಲು ಸಂಭ0ದಿಸಿದವರಿಗೆ ಸೂಕ್ತ ನಿರ್ದೇಶನ ನೀಡುವುದು.

7.            ಕರ್ನಾಟಕ ರೀಸರ್ಚ್ ಫೌಂಡೇಷನ್ ಅಡಿಯಲ್ಲಿ, ರಾಜ್ಯದ ಎಲ್ಲಾ ಇಲಾಖೆಗಳು, ಎಲ್ಲಾ ವಿಶ್ವ ವಿದ್ಯಾನಿಲಯಗಳು, ಕೃಷಿ ಆಶ್ರಮಗಳು ಒಂದೊ0ದು ಬೆಳೆಯ ಬಗ್ಗೆ ನಡೆಸುತ್ತಿರುವ ಸಂಶೋಧನೆಗಳು ಮತ್ತು ಖಾಸಗಿ ಸಂಶೋಧನಾ ಸಂಸ್ಥೆಗಳು ಕೈಗೊಂಡಿರುವ ಸಂಶೋಧನೆಗಳ ಮ್ಯೂಸಿಯಂ’ ನಿರ್ಮಾಣ ಮಾಡುವುದು ಹಾಗೂ ನಿರಂತರವಾಗಿ ಮಾನಿಟರಿಂಗ್ ಸೆಲ್ ‘ಮೂಲಕ ನಿರ್ವಹಣೆ ಮಾಡುವುದು.

8.            ರಾಜ್ಯದ್ಯಾಂತ ನಡೆಸುವ ಜಾತಿಗಣತಿ/ ಶೈಕ್ಷಣಿಕ ಗಣತಿ/ಸಾಮಾಜಿಕ ಗಣತಿ ಬಗ್ಗೆ, ವಿದ್ಯಾರ್ಥಿಗಳ ನೇತೃತ್ವದಲ್ಲಿ ಜನಾಂದೋಲನ ರೂಪಿಸಲು ಮತ್ತು ಆಯಾ ಗ್ರಾಮದ/ಬಡಾವಣೆಯ ಗಣತಿ ಬಗ್ಗೆ ಮಾನಿಟರಿಂಗ್ ಮಾಡಲು’  ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ಸೂಚಿಸುವುದು.

ಈ ಮೇಲ್ಕಂಡ 8 ಅಂಶಗಳ ಜಾರಿಗೆ ರಾಜ್ಯಾದ್ಯಾಂತ ರಚನೆಯಾಗುತ್ತಿರುವ ಊರಿಗೊಂದು/ಬಡಾವಣೆಗೊ0ದು ಕೃಷಿ ಆಶ್ರಮ’ ಗಳು ಶ್ರಮಿಸಲಿವೆ, ಎಂಬ ಅಂಶವನ್ನು ತಮ್ಮ ಆಧ್ಯಗಮನಕ್ಕೆ ತರ ಬಯಸುತ್ತೇವೆ.

   ರಾಜ್ಯ ಪಾಲರಿಗೆ ಬರೆಯುವ ಪತ್ರ ಮತ್ತು ಅವರ ಬಳಿ ನಿಯೋಗ ಹೋಗುವ ಬಗ್ಗೆ, ಅನಗತ್ಯ ವಿಷಯ ಕೈಬಿಡುವ ಬಗ್ಗೆ ಅಥವಾ ಅಗತ್ಯವಿರುವ ಹೊಸ ವಿಷಯ ಸೇರ್ಪಡೆ ಬಗ್ಗೆ, ದಿನಾಂಕ:22.06.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆಯುವ, 1008 ಕೃಷಿ ಆಶ್ರಮಗಳ ಪ್ರಮುಖರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ..

  1008 ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು, ವಿಷಯವಾರು ಆಸಕ್ತರ 8 ಜನರ ತಂಡ ರಚಿಸಿ, ಒಂದು ಪರಿಕಲ್ಪನಾ ವರದಿ’ ಯನ್ನು ಸಿದ್ಧಪಡಿಸ ಬೇಕಿದೆ. 

ಆದ್ದರಿಂದ ಆಸಕ್ತರು ಸೂಕ್ತ ಸಲಹೆ ನೀಡಲು ಬಹಿರಂಗ ಆಹ್ವಾನ.

–              ಕುಂದರನಹಳ್ಳಿ ರಮೇಶ್,

ನನ್ನದೊಂದು ಸಲಹೆ ಮಾತ್ರ. ನಿರ್ಧಾರ ಕೃಷಿ ಆಶ್ರಮಗಳ ತಜ್ಞರದ್ದು.