TUMAKURU:SHAKTHIPEETA FOUNDATION
ನಂಬರ್ ಒನ್ ಕರ್ನಾಟಕ @ 2047 ಕನಸು ಕಾಣಬೇಕಾದರೆ, ಈ ಕೆಳಕಂಡ ರಾಜ್ಯದ ಪ್ರಮುಖ ಚುನಾಯಿತ ಜನಪ್ರತಿನಿಧಿಗಳ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಬಗ್ಗೆ ಬೆಳಕು ಚೆಲ್ಲುವುದು ಅಗತ್ಯವಾಗಿದೆ. ಕೃಷಿ ಆಶ್ರಮಗಳು ಈ ಬಗ್ಗೆ ವಿಶೇಷ ಗಮನ ಹರಿಸೋಣ.
1. ರಾಜ್ಯದ 28 ಲೋಕಸಭಾ ಸದಸ್ಯರು.
2. 12 +2= 14 ರಾಜ್ಯಸಭಾ ಸದಸ್ಯರು.
3. 224+1=225 ವಿಧಾನಸಭಾ ಸದಸ್ಯರು.
4. 75 ವಿಧಾನಪರಿಷತ್ ಸದಸ್ಯರು.
5. 2 ದೆಹಲಿ ವಿಶೇಷ ಪ್ರತಿನಿಧಿಯವರು.
ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳಲ್ಲಿ 344 ಕೃಷಿ ಆಶ್ರಮಗಳು, ಮೇಲ್ಕಂಡ ಚುನಾಯಿತ ಮತ್ತು ನಾಮನಿರ್ದೇಶನ ಜನಪ್ರತಿನಿಧಿಗಳ ಅವರವರ ಕಾರ್ಯ ವ್ಯಾಪ್ತಿಯ, ಸ್ವಾತಂತ್ರö್ಯಕ್ಕೆ ಮೊದಲು, 1947 ರಿಂದ 2025 ರವರೆಗೂ ಆಗಿರುವ ಯೋಜನೆಗಳು, 2025 ರಿಂದ 2047 ರವರೆಗೂ ಆಗಬೇಕಿರುವ ಯೋಜನೆಗಳ ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್ @ 2047 (ಫಿಸಿಕಲ್ + ಡಿಜಿಟಲ್ + ಹ್ಯೂಮನ್ ಲೈಬ್ರರಿ) ತೆರೆಯಲು ಮುಂದೆ ಬಂದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಿ.ಎಸ್.ಆರ್ ಫಂಡ್, ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಅಥವಾ ದಾನಿಗಳಿಂದ ನಿಯಮ ಪ್ರಕಾರ ದೊರೆಯುವ ಅನುದಾನವನ್ನು ಮಂಜೂರು ಮಾಡಿಸಲು ಶ್ರಮಿಸಲಾಗುವುದು.
ಆಸಕ್ತ ಪ್ರತಿಯೊಂದು ಕೃಷಿ ಆಶ್ರಮವೂ,
1. ಒಬ್ಬ ಜನಪ್ರನಿಧಿ ವ್ಯಾಪ್ತಿಯ ಕ್ಷೇತ್ರ,
2. ಒಂದು ನಿರ್ಧಿಷ್ಟ ಬೆಳೆ.
3. ರಾಜ್ಯದ 7 ನದಿ ಪಾತ್ರಗಳಲ್ಲಿ ಹುಟ್ಟುವ 313 ನದಿಗಳಲ್ಲಿ ಒಂದು ನದಿ.
4. ಎನ್.ಆರ್.ಐ ಗಳ ಸಹಭಾಗಿತ್ವದಲ್ಲಿ, ವಿಶ್ವದ ಯಾವುದಾದರೊಂದು ದೇಶ ಅಥವಾ ಭಾರತ ದೇಶದ ಯಾವುದಾದರೊಂದು ರಾಜ್ಯದ ಸಾವಯವ ಉತ್ಪನ್ನಗಳ ವ್ಯಾಪಾರ, ಸಂಸ್ಕೃತಿ, ಅಭಿವೃದ್ಧಿ ಅಧ್ಯಯನ ಹೊಣೆಗಾರಿಕೆ ಹೊರಬೇಕಾಗುತ್ತದೆ.
ಅಗತ್ಯವಿರುವ ತರಭೇತಿ, ಪ್ರತಿ ತಿಂಗಳು ಕೈಗೊಳ್ಳಬೇಕಾದ ಯೋಜನೆಗಳು/ಕಾರ್ಯಕ್ರಮದ ಬಗ್ಗೆ ನಿರಂತರವಾಗಿ ರಾಜ್ಯ ಮಟ್ಟದ ಸಮಿತಿ ವತಿಯಿಂದ ಸಲಹೆ, ಮಾರ್ಗದರ್ಶನ ನೀಡಲಾಗುವುದು.
ಇವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇರಲಿವೆ, ಕೃಷಿ ಆಶ್ರಮದ ಜಮೀನಿನಲ್ಲಿ ಕನಿಷ್ಟ 50 ಅಡಿ ಅಗಲ, 50 ಅಡಿ ಉದ್ದದ ಸುಮಾರು 2500 ಚದುರ ಅಡಿ ನಿವೇಶನ/ಜಮೀನನ್ನು ಸರ್ಕಾರದ ನಿಯಾಮುನುಸಾರ ಅಗ್ರಿಮೆಂಟ್ ಮಾಡಿಕೊಡಬೇಕಾಗುತ್ತದೆ.
ಕೃಷಿ ಆಶ್ರಮಗಳ, ಅಗ್ರಿ ಟೂರಿಸಂನಲ್ಲಿ ಇದು ಒಂದು ಚಟುವಟಿಕೆ, ಆಯಾ ವ್ಯಾಪ್ತಿಯ ಪ್ರತಿಯೊಂದು ಗ್ರಾಮ/ಬಡಾವಣೆಯ ಕನಿಷ್ಟ ಒಬ್ಬ ವ್ಯಕ್ತಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಬೇಕು.
ಬೆಳೆ, ನದಿ, ದೇಶ, ರಾಜ್ಯ ಜನಪ್ರತಿನಿಧಿಗಳ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಯೋಜನೆಗಳ ಸಂಶೋಧನೆ, ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್ @ 2047 ಕ್ಕೆ ರಚಿಸುವ ಸಲಹಾ ಸಮಿತಿಗೆ ಆಯಾ ಜನಪ್ರತಿನಿಧಿಗಳೇ ಅವರವರ ಅವಧಿ ಇರುವವರೆಗೂ ಅಧ್ಯಕ್ಷರಾಗಿರುತ್ತಾರೆ. ಅವಧಿ ನಂತರ ಬಂದವರು ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಆಯಾ ಕೇತ್ರದ ಎಲ್ಲಾ ಮಾಜಿ ಸದಸ್ಯರು ಸಲಹಾ ಸಮಿತಿಯ ಸದಸ್ಯರಾಗಿರುತ್ತಾರೆ. ಇವರ ಜೊತೆಗೆ ಆಯಾ ವ್ಯಾಪ್ತಿಯಲ್ಲಿನ ಸಮಿತಿಗಳಿಗೆ, ಸರ್ವಪಕ್ಷಗಳ ರಾಜ್ಯ ಅಧ್ಯಕ್ಷರು ನೇಮಿಸುವ ಒಬ್ಬ ಪ್ರತಿನಿಧಿ ಸದಸ್ಯರಾಗಿರುತ್ತಾರೆ.
ಕಡ್ಡಾಯವಾಗಿ ಯಾವುದೇ ಒಂದು ವಿಶ್ವ ವಿದ್ಯಾನಿಲಯದಲ್ಲಿರುವ ಅಧ್ಯಯನ ಪೀಠಗಳು ಸದಸ್ಯರಾಗಿರುತ್ತಾರೆ. ಸಲಹಾ ಸಮಿತಿಯ ಅಧ್ಯಕ್ಷರು ನೇಮಿಸುವವರು ಅವರ ಅವಧಿ ಮುಗಿಯುವವರೆಗೂ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಕೃಷಿ ಆಶ್ರಮಗಳ ಪ್ರಮುಖರು ಸಂಚಾಲಕರಾಗಿರುತ್ತಾರೆ, ಸರ್ಕಾರಗಳ ಅದೇಶದ ಮೇರೆಗೆ ಕೃಷಿ ಆಶ್ರಮಗಳು ನಿರ್ವಹಣೆ ಮಾಡಬೇಕಾಗುತ್ತದೆ. ಈ ನಿಯಮಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಅಗತ್ಯವಾಗಿದೆ.
ಕೃಷಿ ಆಶ್ರಮಗಳ ಜಮೀನಿನ ದಾಖಲೆಗಳು, ಜಮೀನಿಗೆ ಇರುವ ರಸ್ತೆ ಮತ್ತು ಜಿ.ಐ.ಎಸ್ ಲೇಯರ್ ಹಾಗೂ ಅಗ್ರಿಮೆಂಟ್ ನೀಡಬೇಕಾಗುತ್ತದೆ. ಒಂದೇ ಕೇತ್ರಕ್ಕೆ ಒಬ್ಬರಿಗಿಂತ ಹೆಚ್ಚಿನ ಕೃಷಿ ಆಶ್ರಮಗಳು ಮುಂದೆ ಬಂದರೆ, ಲಾಟರಿ ಎತ್ತುವ ಮೂಲಕ ಸೆಲೆಕ್ಷನ್ ಮಾಡುವುದು ಸೂಕ್ತವಾಗಿರುತ್ತದೆ.
ಯಾವುದೇ ಕಾರಣಕ್ಕೂ ನಗದು ವ್ಯವಹಾರ ಇರಬಾರದು. ಎಲ್ಲವೂ ಡಿಜಿಟಲ್ ಮಯ, ಕೃಷಿ ಆಶ್ರಮಗಳು ಅನುದಾನ ಮಂಜೂರಾದ ಮೇಲೆ, ಮೊದಲೇ ಒಪ್ಪಂದ ಮಾಡಿಕೊಳ್ಳುವ ಸೇವಾ ಶುಲ್ಕವನ್ನು ಠೇವಣೆ ಮಾಡಿ, ಅದರ ಬಡ್ಡಿಯಲ್ಲಿ ರಾಜ್ಯ ಮಟ್ಟದ ಕಚೇರಿ ನಿರ್ವಹಣೆಗೆ ಬಳಸಲು ರೂಪುರೇಷೆ ನಿರ್ಧರಿಸಲಾಗುವುದು. ಯೋಜನೆಯ ಮಂಜೂರಾತಿಗೆ ತಗುಲವ ಖರ್ಚು ವೆಚ್ಚಗಳನ್ನು ಮಾತ್ರ ಭರಿಸಲಾಗುವುದು.
ಶಕ್ತಿಪೀಠ ಫೌಂಡೇಷನ್ ಮತ್ತು ಕೃಷಿ ಆಶ್ರಮಗಳ ತಜ್ಞರ ತಂಡದೊAದಿಗೆ, ಮೇಲ್ಕಂಡ 334 ಚುನಾಯಿತ ಜನಪ್ರತಿನಿಧಿಗಳ ಬಳಿ ನಿಯೋಗ ಹೋಗಲು ಸಹ ಚರ್ಚೆ ಮಾಡಲಾಗುವುದು. ಇದು ರಾಜ್ಯಪಾಲರಿಗೆ ನೀಡುವ ಪತ್ರದ 9 ನೇ ಅಂಶ.
2025 ನೇ ಸಾಲಿನಲ್ಲಿ 9 ಅಥವಾ 10 ಅಂಶಗಳ ಯೋಜನೆಯ ಅನುಷ್ಠಾನಕ್ಕೆ ನಿರಂತರವಾಗಿ ಶ್ರಮಿಸಲಾಗುವುದು. ಇದೇ ಮಾದರಿಯಲ್ಲಿ ಆಸಕ್ತರು ಯಾವುದೇ ವಿಷಯದ ಬಗ್ಗೆ ಶ್ರಮಿಸಲು ಮುಕ್ತ ಅವಕಾಶವಿರುತ್ತದೆ.