TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೋಕಿನ 5 ಎಸ್ ಕೃಷಿ ಆಶ್ರಮದ ಸಿದ್ದಗಂಗಪ್ಪನವರು, ಬೆಂಗಳೂರಿನಲ್ಲಿ ಮಾರುತಿ ಆಟೋ ಕಾಂಪೋನೇಟ್ಸ್ ಕೈಗಾರಿಕಾ ಘಟಕವನ್ನು ಹೊಂದಿದ್ದಾರೆ. ಶಕ್ತಿಪೀಠ ಕ್ಯಾಂಪಸ್ನಲ್ಲಿ ವಿಶ್ವದ 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆಗಾಗಿ, ನಾಮಫಲಕದೊಂದಿಗೆ ಸೋಲಾರ್ ಲೈಟ್ ಸಿದ್ಧಪಡಿಸಲು ಪಿಜೆಸಿಯಲ್ಲಿ ವಾಕ್ ಮಾಡುವಾಗ ದಿನಾಂಕ: 01.06.2025 ರಂದು ಚರ್ಚೆ ಆರಂಭವಾಯಿತು.


ನಾವೇ ಮಾಡುತ್ತೇವೆ ಎಂದು ತಿಳಿಸಿ, ನಂತರ ಸಿದ್ದಗಂಗಪ್ಪನವರು, ದರಣೇಶ್ರವರು, ಮುರಳೀಕೃಷ್ಣರವರು, ಆರ್.ಮಧುರವರು, ಪ್ರಕಾಶ್ರವರು, ಶಾಂತಿ ಪ್ರಿಯರವರು, ಮತ್ತು ದರ್ಶನ್ರವರ ತಂಡ ಸುಮಾರು 20 ದಿವಸದಲ್ಲಿ ಹಲವಾರು ಮಾಡೆಲ್ಗಳೊಂದಿಗೆ, ಈ ಮಾಡೆಲ್ ಅನ್ನು ಸಿದ್ಧಪಡಿಸಿದ್ದಾರೆ. ತಂಡಕ್ಕೆ ನನ್ನ ಧನ್ಯವಾದಗಳು.
ಶಕ್ತಿಪೀಠ ಪ್ರಾತ್ಯಾಕ್ಷಿಕೆ
1. ಒಂದು ಕಡೆ ಶಕ್ತಿಪೀಠ ಫೋಟೋ.
2. ಒಂದು ಕಡೆ ಕನ್ನಡದಲ್ಲಿ ಶಕ್ತಿಪೀಠ ವಿಳಾಸ ಮತ್ತು ಮಾಹಿತಿ.
3. ಒಂದು ಕಡೆ ಇಂಗ್ಲೀ಼ಷ್ನಲ್ಲಿ ಶಕ್ತಿಪೀಠ ವಿಳಾಸ ಮತ್ತು ಮಾಹಿತಿ.
4. ಒಂದು ಕಡೆ ಹಿಂದಿಯÀಲ್ಲಿ ಶಕ್ತಿಪೀಠ ವಿಳಾಸ ಮತ್ತು ಮಾಹಿತಿ.
ಪ್ರದರ್ಶನ ಮಾಡಲು ಆಲೋಚನೆ ನಡೆಯುತ್ತಿದೆ. ಬಳಸಿದ ಮೆಟಲ್ ಬಗ್ಗೆ, ಶಾಸ್ತç, ಜೋತಿಷ್ಯ, ಸಂಸ್ಕೃತಿ, ತಂತ್ರಜ್ಞತೆ, ವಿಜ್ಞಾನ ಎಲ್ಲಾ ಅಂಶಗಳ ಬಗ್ಗೆ ಸಮಾಲೋಚನೆ ಮಾಡಿ ನಂತರ ಮಾಡೆಲ್ ಅಂತಿಮಗೊಳಿಸಲು ಯೋಚಿಸಲಾಗಿದೆ. ಇನ್ನೂ ಬೆಲೆ ಬಗ್ಗೆ ಮಾಹಿತಿ ನೀಡಿಲ್ಲ.
1008 ಕೃಷಿ ಆಶ್ರಮಗಳು ಒಂದೇ ಮಾದರಿ ನಾಮಫಲಕವಾಗಿ ಬಳಸ ಬಹುದಾಗಿದೆ.
1. ಒಂದು ಕಡೆ ಕೃಷಿ ಆಶ್ರಮಗಳ ವಿಳಾಸ ಮತ್ತು ಮಾಹಿತಿ.
2. ಒಂದು ಕಡೆ ಮನೆದೇವರ ಫೋಟೋ.
3. ಒಂದು ಕಡೆ ಕೃಷಿ ಆಶ್ರಮಗಳು ಆಯ್ಕೆ ಮಾಡಿಕೊಂಡ ನಿರ್ಧಿಷ್ಟ ಬೆಳೆಯ ಮಾಹಿತಿ.
4. ಒಂದು ಕಡೆ ತಂದೆ-ತಾಯಿ ಫೋಟೋ.
ಇದೇ ಮಾದರಿಯಲ್ಲಿ ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳು ತಮ್ಮ ತಮ್ಮ ಉತ್ಪನ್ನಗಳನ್ನು ತಂದು, ಸಭೆಯಲ್ಲಿ ಪ್ರದರ್ಶನ ಮಾಡಿ, ಅಗತ್ಯವಿರುವವರು ಕೊಂಡುಕೊಳ್ಳಲು ಅನೂಕೂಲವಾಗಲಿದೆ. ನಂತರ ಮಾರಾಟ ಡಿಜಿಟಲ್ ಪ್ಲಾಟ್ ಫಾರಂ ಮಾಡುವವರಿಗೂ ಅನೂಕೂಲವಾಗಲಿದೆ.
ಗುಣಮಟ್ಟದಲ್ಲಿ ರಾಜಿ ಇಲ್ಲ, ರಾಜ್ಯದ ಯಾವುದೇ ಭಾಗಕ್ಕೆ ನಮ್ಮ ಘಟಕವು ತಾಯಾರಿಸುತ್ತಿರುವ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳವಾರು, ಯಾರು ಮಾರಾಟ ಮಾಡಿಸಿದರು, ಅವರಿಗೆ ಇಂತಿಷ್ಟು ಸೇವಾ ಶುಲ್ಕ ಎಂದು ನಿಗಧಿ ಮಾಡಲಾಗುವುದು. ಜೊತೆಗೆ ಕೃಷಿ ಆಶ್ರಮಗಳ ರಾಜ್ಯ ಮಟ್ಟದ ಸಮಿತಿಯ ಕಾರ್ಯನಿರ್ವಹಣೆಗೆ ಇಂತಿಷ್ಟು ಸೇವಾ ಶುಲ್ಕ ಎಂದು ನಿಗಧಿ ಗೊಳಿಸಿ ನೀಡಲಾಗುವುದು.
ಇದೇ ಮಾದರಿಯನ್ನು ಎಲ್ಲಾ ಕೃಷಿ ಆಶ್ರಮಗಳು ಅನುಸರಿಸಿದರೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಆಶ್ರಮಗಳ ಉತ್ಪನ್ನಗಳ ಮತ್ತು ಜ್ಞಾನಿಗಳ ಸಲಹೆಗಳನ್ನು ‘ಪ್ರಾö್ಯಂಚೈಸ್ ಮಾಡೆಲ್’ ನಲ್ಲಿ ಫಾರ್ ವಾರ್ಡ್ ಮತ್ತು ಬ್ಯಾಕ್ ವಾರ್ಡ್ ಲಿಂಕೇಜ್ ವ್ಯವಸ್ಥೆ ಮಾಡಬಹುದು ಎಂಬ ಸಲಹೆಯನ್ನು ಸಿದ್ದಗಂಗಪ್ಪನವರು ನೀಡಿದ್ದಾರೆ. ಕನ್ನೇರಿಯ ಸಭೆಯಲ್ಲೂ ಈ ವಿಷಯವನ್ನು ಬಳ್ಳಾರಿ ಜಿಲ್ಲೆಯ ಬೆಲವತ್ತ ಹಣ್ಣಿನ ತಜ್ಞರಾದ ವಿಶ್ವೇಶ್ವರ ಸಜ್ಜನ್ ರವರು ಪ್ರಸ್ತಾಪ ಮಾಡಿದ್ದರು.
ದಿನಾಂಕ:22.06.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆಯುವ ಸಭೆಯಲ್ಲಿ ಪ್ರಾತ್ಯಾಕ್ಷಿಕೆಯೊಂದಿಗೆ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು.