TUMAKURU:SHAKTHIPEETA FOUNDATION
ದಿನಾಂಕ:22.06.2025 ರಂದು ತುಮಕೂರಿನ ಶಕ್ತಿ ಭವನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ನಡೆಯುವ ಎರಡನೇ ಸಭೆಯಲ್ಲಿ ನಡೆಯುವ ಚರ್ಚೆಗಳ ದಿಕ್ಕು ಇದಾಗಿದೆ.
1008 ಕೃಷಿ ಆಶ್ರಮ : ಮಾಡಿದ್ದೇನು ? – ಮಾಡುವುದೇನು ?
ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷನ್ ರವರ ಮನದಾಳದ ಮಾತು.
ಇದೊಂದು ಆತ್ಮಾವಲೋಕನ
ಕೃಷಿ ಆಶ್ರಮಗಳ ಒಡನಾಟದಲ್ಲಿ ಇದೂವರೆಗೂ ನನ್ನ ಅನುಭವನಕ್ಕೆ ಬಂದಿರುವುದು
1. ನೇಚರ್ ಈಸ್ ಗಾಡ್
2. ಕಾಯಕವೇ ಕೈಲಾಸ
3. ಕೃತಿ ಮಾತನಾಡಬೇಕು.
4. ವಿಷ ಮುಕ್ತ ಪಂಚಭೂತಗಳಿಂದ – ಕೃಷಿ ಆಶ್ರಮದ ಪ್ರಮುಖರ ಆರೋಗ್ಯ ಉತ್ತಮವಾಗಿರಬೇಕು.
5. ವಿಷ ಮುಕ್ತ ಪಂಚಭೂತಗಳಿಂದ – ಕೃಷಿ ಆಶ್ರಮದ ಕುಟುಂಬದವರ ಆರೋಗ್ಯ ಉತ್ತಮವಾಗಿರಬೇಕು.
6. ವಿಷ ಮುಕ್ತ ಪಂಚಭೂತಗಳಿಂದ – ಕೃಷಿ ಆಶ್ರಮದ ಕುಟುಂಬದವರ ಜಮೀನು ಫಲವತ್ತತೆ ಉತ್ತಮವಾಗಿರಬೇಕು.
7. ಕೃಷಿ ಆಶ್ರಮದ ಪ್ರಮುಖರ/ ಕುಟುಂಬದವರ ಆದಾಯ ಉತ್ತಮವಾಗಿರಬೇಕು.
8. ಕೃಷಿ ಆಶ್ರಮದ ಪ್ರಮುಖರ/ ಕುಟುಂಬದಲ್ಲಿ ಮಾನವೀಯತೆ ಎದ್ದುಕಾಣಬೇಕು.
9. ಕೃಷಿ ಆಶ್ರಮದ ಪ್ರಮುಖರ/ ಕುಟುಂಬದವರ ಬಿಡುವಿನ ಸಮಯದಲ್ಲಿ ನಮ್ಮ ಸುತ್ತ ಮತ್ತಲಿನ ಊರಿನ/ ಬಡಾವಣೆಯ/ ಗ್ರಾಮಪಂಚಾಯಿತಿಯ, ನಗರ ಸ್ಥಳೀಯ ಸಂಸ್ಥೆಯ,ಹೋಬಳಿಯ, ವಿಧಾನಸಭಾ ಕ್ಷೇತ್ರದ, ತಾಲ್ಲೋಕಿನ, ಲೋಕಸಭಾ ಕ್ಷೇತ್ರದ, ಜಿಲ್ಲೆಯ, ರಾಜ್ಯದ, ದೇಶದ, ಪ್ರಪಂಚದ ವ್ಯಾಪ್ತಿಯಲ್ಲಿ ಅವರಿಗೆ ತೃಪ್ತಿ ನೀಡುವ ಸಮಾಜ ಸೇವೆ ಮಾಡಬೇಕು.
ಕೃಷಿ ಆಶ್ರಮಗಳ ಈ ಎಲ್ಲಾ ಅಂಶಗಳ ಸಂಶೋಧನೆ, ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್ ಗಳ ಬಗ್ಗೆ ನೂರಾರು ಜನ ಮಾತನಾಡಬೇಕು, ಕೃಷಿ ಆಶ್ರಮಗಳಿಗೆ ದೇಶ- ವಿದೇಶಗಳಿಂದ ಭೇಟಿ ನೀಡಬೇಕು, ತನ್ಮೂಲಕ ಕೃಷಿ ಆಶ್ರಮಗಳ ಕ್ರಾಂತಿ ಆಗಬೇಕು. ಕೃಷಿ ಆಶ್ರಮಗಳ ಆದಾಯ ಹೆಚ್ಚಬೇಕು. ಕೃಷಿ ಆಶ್ರಮಗಳ ಅನುಭವವನ್ನು ನಾಡಿನ ಜನರಿಗೆ ಪಾರದರ್ಶಕವಾಗಿ ಹಂಚಿಕೊಳ್ಳಬೇಕು.
ನಾಳಿನ ಸಭೆಯಲ್ಲಿ 9 ಅಂಶಗಳ ರೂಪುರೇಷೆ ನಿರ್ಧರಿಸಬೇಕಿರುವುದರಿಂದ ತಮ್ಮ ಅನಮೂಲ್ಯವಾದ ಸಲಹೆಗಳಿಗೆ ಆಹ್ವಾನ.
ದಿನಾಂಕ:22.06.2025 ರ ಸಭೆಗೆ ಯಾರ್ಯಾರು ಹಾಜರಾಗುತ್ತೀರಿ ದಯವಿಟ್ಟು ನೊಂದಾಯಿಸಿಕೊಳ್ಳಿ.