TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಸಾವಯವ ರೈತರ ಆದಾಯ ವೃದ್ಧಿಗೆ, ಯಾವ ಕೃಷಿ ಆಶ್ರಮಗಳಲ್ಲಿ ಎಷ್ಟು ಜನ ಪ್ರವಾಸಿಗರು ತಂಗಲು ಯಾವ, ಯಾವ ವ್ಯವಸ್ಥೆ ಇದೆ, ಎಷ್ಟೆಷ್ಟು ಸಾವಯವ ಉತ್ಪನ್ನಗಳನ್ನು ತಯಾರಿಸುತ್ತಾರೆ, ಯಾವ ಬೆಳೆ ಬೆಳೆಯುತ್ತಾರೆ. ಅಲ್ಲಿಗೆ ತಲುಪವ ವ್ಯವಸ್ಥೆ ಹೇಗಿದೆ ಎಂಬ ಮಾಹಿತಿಗಳನ್ನು, ರಾಜ್ಯದ, ಅಂತರ್ ರಾಜ್ಯದ, ವಿವಿಧ ದೇಶಗಳ ಪ್ರವಾಸಿಗರಿಗೆ ತಲುಪಿಸುವ ಡಿಜಿಟಲ್ ಪ್ಲಾಟ್ ಪಾರಂ ಮಾಡುವ ಮೂಲಕ ನೇರವಾಗಿ ಗ್ರಾಹಕರಿಗೆ ಮತ್ತು ಕೃಷಿ ಆಶ್ರಮಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಹೊಸದಾಗಿ ಕೃಷಿ ಆರಂಭಿಸುವವರಿಗೆ, ಯಾರು ಯಾವ ವಿಷಯದಲ್ಲಿ ಪರಿಣಿತರಿದ್ದಾರೆ, ಯಾವ ಬೆಳೆ ಬೆಳೆಯುವವರು ಯಾವ ಕೃಷಿ ಆಶ್ರಮಗಳಲ್ಲಿದ್ದಾರೆ, ಯಾವ ಕೃಷಿ ಆಶ್ರಮದವರು ಯಾವ ವಿಷಯದಲ್ಲಿ ಸಲಹೆ ನೀಡಲಿದ್ದಾರೆ, ಯಾರನ್ನು ಭೇಟಿ ಮಾಡಿದರೆ ಪ್ರಾಮಾಣಿಕವಾಗಿ ಅವರಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಸಹಕಾರ ನೀಡುತ್ತಾರೆ ಎಂಬ ಮಾಹಿತಿಗಳ ಸಂಗ್ರಹ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಕೃಷಿ ಆಶ್ರಮಗಳ ಸಂಘಟನೆ ಹಾಗೂ ಕೃಷಿ ಆಶ್ರಮಗಳ ಉತ್ಪನ್ನಗಳಿಗೆ ನೇರವಾದ ಗ್ರಾಹಕರ ಸಂಪರ್ಕಕ್ಕೆ ಎರಡು ಸಮಿತಿಗಳನ್ನು ರಚಿಸಿ ನಿರಂತರವಾಗಿ ಶ್ರಮಿಸಲು ನಿರ್ಧರಿಸಲಾಯಿತು. ಶೀಘ್ರವಾಗಿ ಬೆಂಗಳೂರಿನಲ್ಲಿ ಅಥವಾ ತುಮಕೂರಿನಲ್ಲಿ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಆಡಳಿತ ಕಚೇರಿ, ವಸತಿ ಸಹಿತ ತರಬೇತಿ, ಉತ್ಪÀನ್ನಗಳವಾರು ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಯಿತು.
ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು ಮತ್ತು ಅವರ ತಂಡ ಪೂರ್ಣ ಪ್ರಮಾಣವಾಗಿ ಕಾರ್ಪೊರೇಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲು, ಮೂಲಭೂತ ಸೌಕರ್ಯ, ಖರ್ಚುವೆಚ್ಚಗಳು, ಆದಾಯ ಗಳಿಸುವ ಮಾರ್ಗಗಳನ್ನೂ ಸೇರಿದಂತೆ, ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಒಂದು ತಿಂಗಳೊಳಗೆ ಸಿದ್ಧಗೊಳಿಸಲು ನಿರ್ಧಾರ ಕೈಗೊಳ್ಳಲಾಯಿತು.
ರಾಜ್ಯದ್ಯಾಂತ ಮುಂದಿನ 3 ತಿಂಗಳೊಳಗೆ, ರಾಜ್ಯದ 28 ಲೋಕಸಭಾ ಸದಸ್ಯರು, 12+2= 14 ರಾಜ್ಯಸಭಾ ಸದಸ್ಯರು.224+1=225 ವಿಧಾನಸಭಾ ಸದಸ್ಯರು. 75 ವಿಧಾನಪರಿಷತ್ ಸದಸ್ಯರು, 2 ದೆಹಲಿ ವಿಶೇಷ ಪ್ರತಿನಿಧಿಯವರ ವ್ಯಾಪ್ತಿಯಲ್ಲಿ ಹಾಲಿ ಇರುವ ಮತ್ತು ಹೊಸದಾಗಿ ಒಟ್ಟು 344 ಕೃಷಿ ಆಶ್ರಮಗಳ ನೇತಾರರು ಗುರುತಿಸುವವರಿಂದ, ಜನಪ್ರತಿನಿಧಿಗಳವಾರು ವ್ಯಾಪ್ತಿಯ ನಾಲೇಡ್ಜ್ ಬ್ಯಾಂಕ್ ತೆರೆಯಲು ಆಸಕ್ತಿ ಇರುವವರಿಗೆ ಹೊಣೆಗಾರಿಕೆ ನೀಡಿ, ಅವರಿಗೆ ಪರಿಣಿತರಿಂದ ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ನಿರಂತರವಾಗಿ ಮಾನಿಟರಿಂಗ್ ಮಾಡಲು ಒಂದು ಟಾಸ್ಕ್ ಫೋರ್ಸ್ ಮಾದರಿ ಸಮಿತಿ ರಚಿಸಲು ನಿರ್ಧಾರ ಕೈಗೊಳ್ಳಲಾಯಿತು.
ಈಗಾಗಲೇ ಮಾಹಿತಿ ಹಂಚಿಕೊAಡಿರುವ ಎಲ್ಲಾ ಕೃಷಿ ಆಶ್ರಮಗಳ ಸಾದನೆಗಳನ್ನು, ಅವರಿಂದಲೇ ಬರೆಸಿ ಅಥವಾ ಅವರೊಂದಿಗೆ ಚರ್ಚಿಸಿ ಸಂದರ್ಶನ ಮಾದರಿಯಲ್ಲಿ ಅವರ ಸಾಧನೆಗಳನ್ನು ಬರವಣಿಗೆ ಮೂಲಕ ಪ್ರಚಾರ ಮಾಡಲು ಒಂದು ಸಮಿತಿ ರಚಿಸಲು ನಿರ್ಧಾರ ಕೈಗೊಳ್ಳಲಾಯಿತು.
ಕೃಷಿ ಆಶ್ರಮಗಳ/ ಸಾವಯವಕೃಷಿ, ವಿವಿಧ ವಿಷಯಗಳ ಸಾಧಕರಿಗೆ ರಾಜ್ಯ ಮಟ್ಟದ, ಲೋಕಸಭಾ ಕೇತ್ರದ ಮಟ್ಟದ, ವಿಧಾನಸಭಾ ಕ್ಷೇತ್ರ ಮಟ್ಟದ, ಅವಾರ್ಡ್ ನೀಡಲು ಅರ್ಜಿ ಆಹ್ವಾನಿಸಲು ನಿರ್ಧಾರ ಕೈಗೊಳ್ಳಲಾಯಿತು.
ಕನ್ನೇರಿ ಶ್ರೀಗಳ ನೇತೃತ್ವದಲ್ಲಿ, ಪ್ರತಿ ವರ್ಷ ಒಂದು ಜಿಲ್ಲೆಯಲ್ಲಿ, ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಮಾವೇಶ/ ಕೃಷಿ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು.
ಕೃಷಿ ಆಶ್ರಮಗಳಿಗೆ ಅಗ್ರಿ ಟೂರಿಸಂ ಹಾಗೂ ಸರ್ಕಾರಿ ಯೋಜನೆಗಳ ಅನುದಾನದ ಬಗ್ಗೆ ಮಾಹಿತಿ ನೀಡಲು ಕಪ್ಪತ್ತಗುಡ್ಡದಲ್ಲಿ ಸಭೆ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ವರಧಿಯ ಆಧಾರದ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯ ಬಗ್ಗೆ, ತುಮಕೂರು ಮಾಜಿ ಲೊಕಸಭಾ ಸದಸ್ಯ ಶ್ರೀ ಜಿ.ಎಸ್. ಬಸವರಾಜ್ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯಕೈಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪರಿಕಲ್ಪನೆಯ ಅನುಷ್ಠಾನದ ಬಗ್ಗೆ ರಾಜ್ಯದ ಎಲ್ಲಾ ನೀರಾವರಿ ತಜ್ಞರ, ಹೋರಾಟಗಾರರ ಸಲಹೆಗಳೊಂದಿಗೆ ಯೋಜನೆಯ ಅನುಷ್ಠಾನಕ್ಕೆ 344 ಜನಪ್ರತಿನಿಧಿಗಳ ಸಹಕಾರದೊಂದಿಗೆ, ಸರ್ಕಾರಗಳ ಗಮನ ಸೆಳೆಯಲು ಹಾಗೂ ಜನಜಾಗೃತಿ ಮೂಡಿಸಲುÀ, ಮತ್ತು ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕ ಕುಂದರನಹಳ್ಳಿ ರಮೇಶ್ ರವರು ಸರ್ಕಾರಕ್ಕೆ ಸಲ್ಲಿಸುವ ನಂಬರ್ ಒನ್ ಕರ್ನಾಟಕ @ 2047 ನ ಎಲ್ಲಾ ಅಂಶಗಳ ಬಗ್ಗೆ, ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ ಜನಜಾಗೃತಿ ಮೂಡಿಸಲು ನಿರ್ಧಾರ ಕೈಗೊಳ್ಳಲಾಯಿತು.
ತುಮಕೂರಿನ ಶಕ್ತಿಭವನದಲ್ಲಿ ನಡೆದ 2 ಸಭೆಗಳ ವಿಷಯಗಳು, ಮುಂದಿನ 5 ವರ್ಷಗಳ ಕಾಲ ನಿರಂತರವಾಗಿ ಶ್ರಮಿಸುವ ದಿಕ್ಸೂಚಿಯಾಗಲಿದೆ. ಕಳೆದ ಒಂದು ತಿಂಗಳಲ್ಲಿ ಡಾಟಾ ಬೇಸ್À ಪ್ರಗತಿಗೆ ಶ್ರಮಿಸಿದ ಶ್ರೀ ಬಿ.ಎಂ.ನಾಗಭೂಷಣ್ ರವರು, ಮಣ್ಣಿನ ತಜ್ಞರಾದ ಶ್ರೀ ಮಾರುತಿರಾವ್ ರವರು, ತುಮಕೂರು ಸ್ಟಾರ್ಟ್ ಅಫ್ನ ಶ್ರೀ ಸುಹೃತ್ ಉಜ್ಜನಿರವರಿಗೆ, ಅವರಿಗೆ ಸಹಕರಿಸಿದ ರಾಜ್ಯದ್ಯಾಂತ ಎಲ್ಲಾ ಕೃಷಿ ಆಶ್ರಮಗಳ ನೇತಾರರಿಗೆ ಅಭಿನಂದನೆ ಸಲ್ಲಿಸಲಾಯಿತು. ಅವರು ಮುಂದಿನ ಒಂದು ತಿಂಗಳಲ್ಲಿ, ಎಲ್ಲಾ ಮಾಹಿತಿಗಳ ಡಾಟಾ ಬೇಸ್ ಪೂರ್ಣಗೊಳಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ.
ದಿನಾಂಕ:22.06.2025 ರಂದು, ತುಮಕೂರಿನ ಶಕ್ತಿಭವನದಲ್ಲಿ ನಡೆದ, ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪ್ರತಿಯೊಂದು ವಿಷಯವಾರು ಸುಧೀರ್ಘ ಚರ್ಚೆ ನಡೆಸಿ, ಪ್ರತಿಯೊಂದು ವಿಷಯಗಳಿಗೂ ಒಂದೊAದು ಉಪಸಮಿತಿ ರಚಿಸಿ, ಮಾರ್ಗಸೂಚಿಯಲ್ಲಿ ಪ್ರಕಟಿಸಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಪೋಟೋದಲ್ಲಿ ಇರುವವರು ಬೆಳಿಗ್ಗೆ 10 ಗಂಟೆಯಿAದ ಸಂಜೆ 5 ಗಂಟೆವರೆಗೂ ಹಾಜರಿದ್ದರು, ಮಧ್ಯೆ ಬಂದು ಹೋದವರು ಫೋಟೋದಲ್ಲಿ ಮಿಸ್ ಆಗಿದ್ದಾರೆ.

ಹಾಜರಿದ್ದ ಎಲ್ಲಾ ಸಾಧಕರ ಹೊಣೆಗಾರಿಕೆ, ಕಾರ್ಯವ್ಯಾಪ್ತಿ ಹಾಗೂ ಸಾಧನೆಗಳ ಸರಣೆ ವರದಿಯನ್ನು ನಿರಂತರವಾಗಿ ಪ್ರಕಟಿಸಲಾಗುವುದು.