26th June 2025
Share

TUMAKURU:SHAKTHI PEETA FOUNDATION

  ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿನ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅದ್ಯಕ್ಷರಾದ ಶ್ರೀ ಎ.ಹೆಚ್. ರಾಜಸಾಬ್, ಸಿ.ಇ.ಓ ಶ್ರೀ ಡಾ.ಆನಂದ್ ಆರ್ ಮತ್ತು ಸೈಂಟಿಫಿಕ್ ಆಫೀಸರ್ ಶ್ರೀ ಶ್ರಿನಿವಾಸ್‌ರವರೊಂದಿಗೆ, ಕರ್ನಾಟಕ ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ನೇತೃತ್ವದಲ್ಲಿ, ನಂಬರ್ ಒನ್ ಕರ್ನಾಟಕ @ 2047 ಗೆ ಪೂರಕವಾಗಿ, ರಾಜ್ಯದ ಪ್ರತಿಯೊಂದು ಗ್ರಾಮವಾರು/ಬಡಾವಣೆವಾರು ನಾಲೇಡ್ಜ್ ಬ್ಯಾಂಕ್ @ 2047  ಡಾಟಾ ಬೇಸ್ ಮಾಡುವ ಬಗ್ಗೆ ದಿನಾಂಕ:23.06.2025 ರಂದು ಬೆಂಗಳೂರಿನ ಅವರ ಕಚೇರಿಯಲ್ಲಿ  ಸಮಾಲೋಚನೆ ನಡೆಸಲಾಯಿತು.

ಜುಲೈ ತಿಂಗಳಲ್ಲಿ ಕರ್ನಾಟಕ ರಾಜ್ಯದ್ಯಾಂತ ರಚಿಸುತ್ತಿರುವ 1008 ಕೃಷಿ ಆಶ್ರಮಗಳ, 31 ಜಿಲ್ಲೆಗಳ 62 ಜನ ಕೃಷಿ ಜ್ಞಾನಿಗಳ ಮೊದಲ ಹಂತದ ವಿಶೇಷ ಕಾರ್ಯಾಗಾರ/ತರಭೇತಿ ಶೀಬಿರ ನಡೆಸಿ ನಾಲೇಡ್ಜ್ ಬ್ಯಾಂಕ್ @ 2047 ರೂಪು ರೇಷೆಗಳ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಲಾಯಿತು.

2047 ರ ವೇಳೆಗೆ ಕರ್ನಾಟಕ ಎಲ್ಲಾ ವಿಚಾರಗಳಲ್ಲಿ ನಂಬರ್ ಒನ್ ಆಗಬೇಕಾದರೆ, ವಿಜ್ಞಾನ ಪ್ರತಿಯೊಂದು ಗ್ರಾಮವಾರು/ಬಡಾವಣೆವಾರು ಮನೆ. ಮನೆಗೆ ತಲುಪಬೇಕು. ರಾಜ್ಯದ 6022 ಗ್ರಾಮಪಂಚಾಯಿತಿಗಳಲ್ಲಿ ಮತ್ತು 315 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ಗೆ ನಾಲೇಡ್ಜಬಲ್ ಪರ್ಸನ್ಸ್ ನಾಮಿನಿ ಸದಸ್ಯರನ್ನು ನೇಮಕ ಮಾಡಲು  ಜನಾಂದೋಲನ ರೂಪಿಸಬೇಕಿದೆ.

ನಾಲೇಡ್ಜಬಲ್ ಪರ್ಸನ್ಸ್ ಎಂದರೆ ಯಾರು, ಯಾವ ರೀತಿ ಡಾಟಾ ಬ್ಯಾಂಕ್ ಮಾಡಬೇಕು. ಪ್ರತಿಯೊಂದು ವಿಚಾರಗಳ ಪರಿಣಿತರ ಮಾಹಿತಿ ಸಂಗ್ರಹ ಅಗತ್ಯವಾಗಿದೆ. ಶೇ 80 ರಷ್ಟು ರೈತರು ಇರುವ ನಮ್ಮ ರಾಜ್ಯದಲ್ಲಿ  ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ ಶ್ರಮಿಸಲು ದಿನಾಂಕ:22.06.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಕಾರ್ಯ ತಂತ್ರ ರೂಪಿಸುತ್ತಿರುವ ಹಿನ್ನಲೆಯಲ್ಲಿ, ನಾನು ಸರ್ಕಾರಕ್ಕೆ ನೀಡಿರುವ, ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಮಧ್ಯಂತರ  ವರದಿಯಲ್ಲಿನ ಪ್ರಮುಖ ಅಂಶ ಇದಾಗಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವಿಷನ್ – 2030 ರ ಉದ್ದೇಶಗಳ ಅಡಿಯಲ್ಲಿ 5 ಅಂಶದ ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮತ್ತು ಅನುಷ್ಠಾನದ ಬಗ್ಗೆ ಆಲೋಚನೆ ನಡೆಸಲಾಗಿದೆ.

1.            ನಾಲೇಡ್ಜ್ ಬ್ಯಾಂಕ್ @ 2047

2.            ಭೂಮಿಯ ಮೇಲೆ ಹುಟ್ಟುವ ಕಳೆ ಬೆಳೆಗಳ ಡಾಟಾ ಬ್ಯಾಂಕ್.

3.            ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆವಾರು  ಇರುವ ಜಲಸಂಗ್ರಹಾಗಾರಗಳಲ್ಲಿ(ಕೆರೆ-ಕಟ್ಟೆ, ಪಿಕ್ ಅಫ್, ಕಲ್ಯಾಣಿ ಇತ್ಯಾದಿ) ವಿಜ್ಞಾನ.

4.            ಕರ್ನಾಟಕ ರಾಜ್ಯದಲ್ಲಿ ಇರುವ ಧರ್ಮ/ಜಾತಿ/ಉಪಜಾತಿಗಳ ಕುಶಲತೆ, ಸಂಸ್ಕೃತಿಯೊ0ದಿಗೆ ವಿಜ್ಞಾನ.

5.            ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆವಾರು ಆಳಿವಿನಂಚಿನಲ್ಲಿರುವ ಗಿಡಗಳ ಸಂರಕ್ಷಣೆ ಮಾಡುವ ಬಯೋಡೈವರ್ಸಿಟಿ ವನ.

ಇವುಗಳಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ಒಂದು ಬೃಹತ್ ಯೋಜನೆ’. ಸ್ಥಾಪನೆ ಬಗ್ಗೆಯೂ ಚರ್ಚಿಸಲಾಗಿದೆ.

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರು ಹಾಗೂ ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಶ್ರೀ ಎನ್.ಎಸ್. ಬೋಸರಾಜ್ ರವರ,  ಎರಡು ಖಾತೆಗಳು ಮತ್ತು 8-10 ಸಚಿವಾಲಯಗಳ ಸಹಭಾಗಿತ್ವದ ಯೋಜನೆ ಇದಾಗಲಿದೆ.  

ಕೃಷಿ ಆಶ್ರಮದ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು, ಜಿಲ್ಲೆಗೆ ತಲಾ ಇಬ್ಬರಂತೆ, ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ 62  ಜನರ ಪಟ್ಟಿ ಮಾಡಲು ಮುಂದಾಗ ಬೇಕಿದೆ. ಸಾವಯವ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ, ಬೆಳೆವಾರು ರೈತರ ಡಿಜಿಟಲ್ ದಾಖಲೆ, ಸರ್ಕಾರದ ಇಲಾಖೆಯಲ್ಲಿ ಅಧಿಕೃತವಾಗಿ ಸಂಗ್ರಹವಾಗುವ ಮಹತ್ವದ ಕೆಲಸ ಇದಾಗಲಿದೆ.