26th June 2025
Share

TUMAKURU:SHAKTHIPEETA FOUNDATION

ತುಮಕೂರಿನ ಕೇಂದ್ರೀಯ ವಿದ್ಯಾಲಯ ಸುತ್ತ-ಮುತ್ತ ಉದ್ದೇಶಿತ ವಿಜ್ಞಾನ ಗುಡ್ಡ’ದ ಕನಸು ಕಳೆದ ಹಲವಾರು ವರ್ಷಗಳಿಂದ ನಡೆದು ಬಂದ ಒಂದು ‘ಒಣ ಹೋರಾಟ’.

ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಹೋರಾಟದಲ್ಲಿ ಸೋತು ಸುಣ್ಣವಾದ ಒಂದೇ ಒಂದು ಯೋಜನೆ ಎಂದರೆ ಅದು ವಿಜ್ಞಾನ ಗುಡ್ಡ.

ಅಷ್ಟೆ ಅಲ್ಲ ಕೇಂದ್ರೀಯ ವಿದ್ಯಾಲಯದ ಪೋಷಕರ ಕಮಿಟಿಯಲ್ಲಿ ಒಂದು ಅಪಾದನೆಯನ್ನು ಹೊತ್ತುಕೊಳ್ಳವಷ್ಟು ಕೆಲಸ ಮಾಡಿತ್ತು, ಕ್ರಷರ್ ಲಾಭಿ ಮತ್ತು ಜಮೀನು ಒತ್ತುವರಿದಾರರ ಲಾಭಿ

ಈಗ ಈ ಇತಿಹಾಸದ ಹೋರಾಟದ ಅಂತಿಮ ಘಟ್ಟ ತಲುಪಲಿದೆ. ತುಮಕೂರು ನಗರದಲ್ಲಿ ಇರುವ ನ್ಯಾಯಾಲಯ ಕಟ್ಟಡದ ವಿಸ್ತರಣೆಗೆ ಇಲ್ಲಿ ಜಮೀನು ನೀಡಲು, ಕರ್ನಾಟಕ ಲೋಕಾಯುಕ್ತ ನಿರ್ದೇಶನದ ಮೇರೆಗೆ, ತುಮಕೂರು ಜಿಲ್ಲಾಧಿಕಾರಿ ಅಡಕ ಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಗರದ ವಕೀಲರುಗಳ ಅಭಿಪ್ರಾಯ. 

ಆದರೇ ಕ್ರಷರ್ ಲಾಭಿ ಮತ್ತು ಜಮೀನು ಒತ್ತುವರಿದಾರರ ಲಾಭಿ ಗೆಲ್ಲಬಹುದು ಎಂಬ ಅಭಿಪ್ರಾಯ ಒಂದು ವರ್ಗದ ಜನರ ಮಾತಾಗಿದೆ.

ನಾನು ಈ ಯೋಜನೆಯ ಬಗ್ಗೆ ಒಂದು ಆತ್ಮಾವಲೋಕನ ಮಾಡಿಕೊಳ್ಳಲು ಒಂದು ನಕ್ಷೆ ಸಿದ್ಧಪಡಿಸಿದೆ. ಗಮನಿಸಿ, ಕೇಂದ್ರೀಯ ವಿದ್ಯಾನಿಲಯದಿಂದ 500 ಮೀ ವರೆಗೆ ಯಾವುದೇ ಅಡೆತಡೆ ಇಲ್ಲ. 850 ಮೀ ಮತ್ತು 1000 ಮೀ ವೃತ್ತದಲ್ಲಿ ಕ್ರಷರ್ ಪ್ರದೇಶದ ಮಣ್ಣು ಬಿದ್ದಿರ ಬಹುದು. ನಿಯಮದ ಬಗ್ಗೆ ಬೆಳಕು ಚೆಲ್ಲಬೇಕಿದೆ.

ಇಲ್ಲಿ ಇರುವ ಕ್ರಷರ್ ಬಹುಷ: ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಹಾಗೂ ಎಮ್.ಎಲ್.ಎ ಕನಸುದಾರ ಶ್ರೀ ದೀಲೀಪ್ ಕುಮಾರ್ ರವರದ್ದಂತೆ,

ನಾನು ರಾಜ್ಯದ ಮುಖ್ಯಕಾರ್ಯದರ್ಶಿಯವರಿಗೆ ನ್ಯಾಯಾಲಯಕ್ಕೆ ಜಮೀನು ನೀಡಲು ಮನವಿ ಮಾಡಿದ್ದೆ, ಅವರು ತುಮಕೂರು ಜಿಲ್ಲಾಧಿಕಾರಿಗೆ ಅಗತ್ಯ ಕ್ರಮಕೈಗೊಳ್ಳಲು ಪತ್ರ ಬರೆದಿದ್ದಾರೆ, ನನಗೂ ಮೇಲ್ ಬಂದಿದೆ.

ಈಗ ಅಂತಿಮವಾಗಿ ಒಂದು ನಿರ್ಧಾರ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣವರು, ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು, ತುಮಕೂರು ಗ್ರಾಮಾಂತರ ಶಾಸಕರಾದ ಶ್ರೀ ಸುರೇಶ್ ಗೌಡರವರು ಒಂದು ನಿರ್ಣಯಕ್ಕೆ ಬರ ಬೇಕಾಗುತ್ತದೆ.

ನಾನು ಇವರ ಜೊತೆ ಮಾತನಾಡುವ ಮೊದಲು, ತುಮಕೂರು ಜಿಲ್ಲಾ ಕ್ರಷರ್ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಮಾತನಾಡಲು ನಿರ್ಧಾರ ಮಾಡಿದ್ದೇನೆ, ಆಷಾಢ ಮಾಸದ ಅವiವಾಸೆ ದಿನದಿಂದ ಶ್ರೀ ದೀಲೀಪ್ ಕುಮಾರ್ ನಿಂದ ಆರಂಭಿಸಿ, ಪ್ರಮುಖರ ಜೊತೆ ಮಾತನಾಡಿ, ನಂತರ ಸಚಿವರು ಶಾಸಕರೊಂದಿಗೆ ಸಮಾಲೋಚನೆ ನಡೆಸಬೇಕಿದೆ.

ಕ್ರಷರ್ ಮಾಲೀಕರೇ ನಾವು ಕ್ರಷರ್ ವಿರೋಧಿಯಲ್ಲ, ಅಭಿವೃದ್ಧಿಗೆ ನಿಮ್ಮ ಪಾತ್ರ ಬಹಳ ಮುಖ್ಯ, ಆದರೇ ನಿಮಗೆ ಯಾವುದೇ ರೀತಿ ತೊಂದರೆ ಆಗದಂತೆ  ನಕ್ಷೆಯಲ್ಲಿ ಗಮನಿಸಿ, ಸರ್ಕಾರಿ ಜಾಗದಲ್ಲಿ, ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಎಲ್ಲಾ ಧರ್ಮ, ಜಾತಿ, ಉಪಜಾತಿ ರಾಜ್ಯಮಟ್ಟದ ಸಂಘಟನೆಗಳ ನೇತೃತ್ವದಲ್ಲಿ, ನಂಬರ್ ಒನ್ ಕರ್ನಾಟಕ @ 2047’ ಘೋಷಣೆಯಡಿಯಲ್ಲಿ, ಉದ್ದೇಶಿತ ವಿಜ್ಞಾನಗುಡ್ಡ ಅಥವಾ ಕೃಷಿ ಗುಡ್ಡ ಅಥವಾ ನೀರಾವರಿ ಗುಡ್ಡ ಅಥವಾ ನ್ಯಾಯಾಲಯ ಗುಡ್ಡ’ ಸ್ಥಾಪಿಸಲು ನಿಮ್ಮ ಸ್ಪಷ್ಟ ಅಭಿಪ್ರಾಯವನ್ನು ಸಾರ್ವಜನಿಕರ ಮುಂದೆ ತಿಳಿಸಿ.

ಗಾಳಿಯಲ್ಲಿನ ಗುದ್ದಾಟಕ್ಕೆ ತೆರೆ ಎಳೆಯಬೇಕಾಗಿದೆ. ಕೇವಲ ಕೇಂದ್ರೀಯ ವಿದ್ಯಾಲಯದ ಹಿಂಭಾಗದ ಜಮೀನು ಮಾತ್ರ ಬಳಸಿಕೊಳ್ಳಲಿ, ಹೊಸಹಳ್ಳಿ ಗುಡ್ಡದ ಕಡೆ ಸರ್ಕಾರದ ತೀರ್ಮಾನದಂತೆ ಕೈಬಿಡಬಹುದು. ಇಲ್ಲಿ ಪ್ರತಿಷ್ಟೆ ಬೇಡ ಒಂದು ಒಮ್ಮತಕ್ಕೆ ಬನ್ನಿ, ಸಚಿವರುಗಳಿಗೆ, ಜಿಲ್ಲಾಧಿಕಾರಿಗಳಿಗೆ, ಸಾರ್ವಜನಿಕರಿಗೆ ನಿಮ್ಮ ಸ್ಷಷ್ಟ ಅಭಿಪ್ರಾಯ ತಿಳಿಸಿ.

 ನ್ಯಾಯಾಲಯಕ್ಕೆ ಜಮೀನು ಮಂಜೂರು ಮಾಡಲು, ಹರಸಾಹಸ ಮಾಡುತ್ತಿರುವ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಸರ್ವ ಸಮ್ಮತ ಸೂತ್ರ ಸಿದ್ಧಪಡಿಸಿ ಎಂಬ ಬಹಿರಂಗ ಮನವಿ.